NEWS HIGHLIGHTS
ತೀರ್ಥಹಳ್ಳಿ: ತೋಟದಲ್ಲಿ ಒಣಗಿದ್ದ ಅಡಕೆ ಮರವನ್ನು ಕಡಿದು ಉರುಳಿಸುವಾಗ ರಸ್ತೆಯಲ್ಲಿ ಸಾಗುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಬಿದ್ದು ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲಿಸರ – ಕರ್ಕಿ – ಬಾಳಗಾರು ಮಾರ್ಗದ ಅಬ್ಬಿಗದ್ದೆ ಸಮೀಪ ಘಟನೆ ಸಂಭವಿಸಿದೆ.
ಇದನ್ನೂ ಓದಿ:➤ ಕಾರು ಡಿಕ್ಕಿ, ಆರು ವರ್ಷದ ಬಾಲಕ ಸಾವು
ಮೃತರನ್ನು ತೀರ್ಥಹಳ್ಳಿ ಗಾಂಧಿನಗರ ನಿವಾಸಿ ಮಾಯಾಕಣ್ಣನ್ (50) ಎಂದು ಗುರುತಿಸಲಾಗಿದೆ. ಮಾಯಾಕಣ್ಣನ್ ರೈತರೊಬ್ಬರಿಗೆ ಪೂರೈಸಿದ್ದ ಕಲ್ಲು ಸಾಮಗ್ರಿ ಹಣ ಪಡೆದು ಮರಳುತ್ತಿದ್ದಾಗ. ತೋಟದ ಕಾರ್ಮಿಕರು ಒಣಗಿದ್ದ ಅಡಿಕೆ ಮರವನ್ನು ಕಡಿದು ಉರುಳಿಸಿದ್ದು, ಅದು ರಸ್ತೆ ಮೇಲೆ ಬಿದ್ದಿದೆ. ಈ ವೇಳೆ ಘಟನೆ ಸಂಭವಿಸಿದೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:➤ ಕಾರು ಡಿಕ್ಕಿ, ಆರು ವರ್ಷದ ಬಾಲಕ ಸಾವು