ತೀರ್ಥಹಳ್ಳಿ: ಶಾಲೆ, ಕಾಲೇಜುಗಳಿಗೆ ತಹಶೀಲ್ದಾರ್ ರಜೆ (Holiday) ಘೋಷಣೆ ಮಾಡಿದ್ದ ಆದೇಶ ಪ್ರತಿಯಲ್ಲಿದ್ದ ದಿನಾಂಕ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟವರ ವಿರುದ್ಧ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೀರ್ಥಹಳ್ಳಿ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿದ್ದರಿಂದ ಆ.18ರಂದು ತೀರ್ಥಹಳ್ಳಿ ತಹಶೀಲ್ದಾರ್ ಅವರು ಅಂಗನವಾಡಿಗಳು, ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿದ್ದರು. ಈ ಆದೇಶ ಪ್ರತಿಯಲ್ಲಿದ್ದ ದಿನಾಂಕ ಎಡಿಟ್ ಮಾಡಿ, ಆ.19ರಂದು ರಜೆ ಎಂದು ದಿನಾಂಕ ಬದಲಾಯಿಸಲಾಗಿತ್ತು.

ಇದನ್ನೂ ಓದಿ:
ವಿಶೇಷ ವಿಮಾನದಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ ಅಮಿತ್ ಷಾ
ಇದನ್ನೂ ಓದಿ » ಗೌರಿ – ಗಣೇಶ ಹಬ್ಬ, ಶಿವಮೊಗ್ಗ ಜಿಲ್ಲಾಧಿಕಾರಿಯಿಂದ 8 ಪಾಯಿಂಟ್ನ ಪ್ರಮುಖ ಆದೇಶ, ಏನೇನದು?
ಎಡಿಟ್ ಮಾಡಿದ ಆದೇಶ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ರಜೆ ಕುರಿತು ವದಂತಿ ಹಬ್ಬಿಸಿದವರ ವಿರುದ್ಧ ತಾಲೂಕು ಕಚೇರಿ ಸಿಬ್ಬಂದಿ ದೂರು ನೀಡಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Holiday orders edited by miscreants


