ಕೂಡಲೆ ಆನೆ ಹಿಡಿಯಿರಿ, ಜನರ ಭಯ ದೂರ ಮಾಡಿ, ಅಧಿಕಾರಿಗಳಿಗೆ ಶಾಸಕ ಆರಗ ಜ್ಞಾನೇಂದ್ರ ಖಡಕ್ ಸೂಚನೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | THIRTHAHALLI | 17 ಅಕ್ಟೋಬರ್ 2019

72431595 947023625659058 4441209764197695488 n.jpg? nc cat=106& nc oc=AQlYg9RbN9Ny5s8RI28ZhC2m zc0CrFi7PVrBcFnJfX0WH9NNVDP Z7HJJtqQlYCqS4& nc ht=scontent.fblr1 3
ADVERTISEMENT

ಆಗುಂಬೆ ಭಾಗದಲ್ಲಿ ಸುಮಾರು 10 ವರ್ಷದಿಂದ ಓಡಾಡುತ್ತಿರುವ ಕಾಡಾನೆಯನ್ನು ಕೂಡಲೆ ಸೆರೆ ಹಿಡಿಯುವಂತೆ ಶಾಸಕ ಆರಗ ಜ್ಞಾನೇಂದ್ರ ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ.

ಆನೆ ಕಾಡನ್ನು ಬಿಟ್ಟು ಆಗುಂಬೆ ಪಟ್ಟಣ ವ್ಯಾಪ್ತಿಯಲ್ಲಿಯು ಒಡಾಡುತ್ತಿದೆ. ಇದರಿಂದ ಜನರು ಆತಂಕಕ್ಕೀಡಾಗಿದ್ದಾರೆ. ಹಾಗಾಗಿ ಅದನ್ನು ಕೂಡಲೆ ಸೆರೆ ಹಿಡಿದು, ಬೇರೆಡೆ ಸ್ಥಳಾಂತರ ಮಾಡಬೇಕು ಎಂದರು.

ಭರವಸೆ ಸಾಕು, ಇನ್ನಾದರು ಹಿಡಿಯಿರಿ

ಪ್ರತಿ ಭಾರಿ ಆನೆ ಕಾಣಿಸಿಕೊಂಡಾಗಲು ಅರಣ್ಯ ಇಲಾಖೆ ಅದನ್ನು ಹಿಡಿಯುವುದಾಗಿ ಭರವಸೆ ನೀಡುತ್ತಿದ್ದಾರೆ. ಇನ್ನು ಅದೆ ಭರವಸೆ ನೀಡುತ್ತಿದ್ದರೆ ಆಗುವುದಿಲ್ಲ. ಕೂಡಲೆ ಆನೆ ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಸೂಚಿಸಿದರು. ಡಿಸಿಎಫ್ ಶಂಕರಪ್ಪ, ಎಸಿಎಫ್ ಶಿವಶಂಕರ್, ವಲಯ ಅರಣ್ಯಾಧಿಕಾರಿ ಉಮಾ, ಆಗುಂಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಸಿರುಮನೆ ನಂದನ್, ಮೇಗರವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಮೋದ್ ಹೆಗ್ಡೆ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಇದ್ದರು.

72418328 947023688992385 5894236130018066432 n.jpg? nc cat=109& nc oc=AQnkhXGrWCd6R5Iy jCoYDpAKPLoyWM8lNmtsY1kvRKuX8jGwM4 DAOjVD85QMEo2XM& nc ht=scontent.fblr1 3

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment