ಜೀವದ ಹಂಗು ತೊರೆದು ಕೆರೆಗೆ ಹಾರಿ ಗುತ್ತಿಗೆದಾರನನ್ನು ರಕ್ಷಿಸಿದ ಪೊಲೀಸ್‌

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
THIRTHAHALLI NEWS, 19 SEPTEMBER 2024 : ಕೆರೆಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ಗುತ್ತಿಗೆದಾರನನ್ನು ಪೊಲೀಸ್‌ ಸಿಬ್ಬಂದಿ ರಕ್ಷಣೆ (Rescued) ಮಾಡಿದ್ದಾರೆ. ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಕೆರೆಗೆ ಹಾರಿದ್ದ ಗುತ್ತಿಗೆದಾರ

ಅರಳಾಪುರ ಗ್ರಾಮದ ಗುತ್ತಿಗೆದಾರ ರಮೇಶ್‌ ಎಂಬುವವರು ಯಡೇಹಳ್ಳಿಯ ಕೆರೆಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಮಂಗಳವಾರ ರಾತ್ರಿ 11ಕ್ಕೆ ಪೋಲಿಸ್ ಠಾಣೆಗೆ ಬಂದ ಕರೆಯಿಂದ ತಕ್ಷಣ ಕಾರ್ಯಪ್ರವೃತ್ತರಾದ 112 ವಾಹನದ ಕರ್ತವ್ಯದಲ್ಲಿದ್ದ ರಾಮಪ್ಪ ಹಾಗೂ ಲೋಕೇಶ್ ಕ್ಷಿಪ್ರಗತಿಯಲ್ಲಿ ಯಡೇಹಳ್ಳಿ ಕೆರೆ ಬಳಿಗೆ ತೆರಳಿದ್ದರು.

ಜೀವದ ಹಂಗು ತೊರೆದು ರಕ್ಷಣೆ

ಕೆರೆ ಸಮೀಪ ನಿಂತಿದ್ದ ಕಾರಿನ ಸುಳಿವಿನ ಆಧಾರದಲ್ಲಿ ಕೆರೆ ಪರಿಶೀಲಿಸಿದಾಗ ರಮೇಶ್ ಅವರು ನೀರಿನಲ್ಲಿ ಮುಳುಗುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೆ ಕೆರೆಗೆ ಹಾರಿದ ರಾಮಪ್ಪ ಹಾಗೂ ಲೋಕೇಶ್, ರಮೇಶ್‌ ಅವರನ್ನು ರಕ್ಷಿಸಿ, ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

police-rescue-drowning-contractor-in-Thirthahalli

ಗುತ್ತಿಗೆದಾರ ರಮೇಶ್ ಸಾಲದ ಸುಳಿಗೆ ಸಿಲುಕಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದರು. ಜೀವದ ಹಂಗು ತೊರೆದು ಕೆರೆಗೆ ಜಿಗಿದು ರಮೇಶ್‌ ಅವರನ್ನು ರಕ್ಷಿಸಿದ ಪೊಲೀಸ್‌ ಸಿಬ್ಬಂದಿಗೆ ಶಾಸಕ ಆರಗ ಜ್ಞಾನೇಂದ್ರ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ಅಭಿನಂದನೆ ಸಲ್ಲಿಸಿದ್ದಾರೆ.

Banana-Mandi-In-Shimoga-APMC

ಇದನ್ನೂ ಓದಿ » ಸಾಗರ ತಾಲೂಕಿನಲ್ಲಿ ಏನೇನಾಯ್ತು? – ಇಲ್ಲಿದೆ 5 ಫಟಾಫಟ್‌ ಸುದ್ದಿ

Leave a Comment