ತೀರ್ಥಹಳ್ಳಿ ತಾಲೂಕಿನ ಹಲವು ಗ್ರಾಮ ಜಲಾವೃತ, ಕನ್ನಂಗಿಯಲ್ಲಿ ಸೇತುವೆ ಕುಸಿತ, ಮಳೆಯಿಂದಾಗಿ ಎಲ್ಲೆಲ್ಲಿ ಏನೇನಾಗಿದೆ ಗೊತ್ತಾ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 10 ಆಗಸ್ಟ್ 2019

ಸತತ ಮಳೆಯಿಂದಾಗಿ ತೀರ್ಥಹಳ್ಳಿ ತಾಲೂನಲ್ಲಿ ಭಾರಿ ಹಾನಿ ಸಂಭವಿಸಿದೆ. ಸೇತುವೆಗಳು ಕುಸಿದು ಬಿದ್ದಿವೆ. ರಸ್ತೆ ಸಂಪರ್ಕ ಕಡಿತವಾಗಿದೆ. ಮನೆಗಳಿಗೆ ನೀರು ನುಗ್ಗಿದೆ. ಹಲವು ಕಡೆ ಮನೆಗಳು ಕುಸಿದು ಬಿದ್ದಿವೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.

ಮೂರನೆ ದಿನವು ರಾಮ ಮಂಟಪದ ಮೇಲೆ ನೀರು

ಭಾರಿ ಮಳೆಗೆ ತುಂಗಾ ನದಿ ತುಂಬಿ ಹರಿಯುತ್ತಿದೆ. ರಾಮ ಮಂಟಪದ ಮೇಲೆ ಸುಮಾರು ಮೂರು ಅಡಿಯಷ್ಟು ನೀರು ಹರಿಯುತ್ತಿದೆ. ಕ್ಷಣ ಕ್ಷಣಕ್ಕು ತುಂಗಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗುತ್ತಿದೆ. ಇದರಿಂದ ಜನರು ಆತಂಕಕ್ಕೀಡಾಗಿದ್ದಾರೆ.

ಮಾಲತಿ ನದಿ ಉಕ್ಕಿ ಹರಿಯುತ್ತಿದ್ದು ಆಗುಂಬೆ ಭಾಗದಲ್ಲಿ ಅಡಕೆ ತೋಟಗಳು, ಗದ್ದೆಗೆ ನೀರು ನುಗ್ಗಿದೆ. ಇದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ.

ಮನೆ ಕುಸಿತ, ಸೇತುವೆ ನಾಶ

ಕನ್ನಂಗಿ ಸಮೀಪದ ಅತ್ತಿಗದ್ದೆಯ ನಿರ್ಮಲಮ್ಮ ಎಂಬುವವರಿಗೆ ಸೇರಿದ 8 ಜಾನುವಾರುಗಳು, ಗೀತಾ ಎಂಬುವವರ 5 ಜಾನುವಾರುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಇನ್ನು, ಅತ್ತಿಗದ್ದೆ ಸೇತುವೆ ಕುಸಿದಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಕೆಲವು ಕಡೆಗೆ ಮನೆ ಮತ್ತು ಗೋಡೆ ಕುಸಿತದ ವರದಿಯಾಗಿದೆ.

68727356 900493926978695 5440308269228752896 n.jpg? nc cat=109& nc eui2=AeHH8A P8E6ioBM3ITC6Sdt2f35gjkxvjRhROhL2oscW7hEa0mmOULnPlkIu2hWXEnxhf5OwBc4fPBSbscL5JHjfYPH89esqWjw aWcmJYExMw& nc oc=AQkIWwV3s8FlCxJXLcC6OgKXaY3Cot26YaYy8fGy8r5yjw0YbSjtSaaHTuV MtPmyjk& nc ht=scontent.fblr13 1

ಜಲಾವೃತ ಗ್ರಾಮಗಳಿಂದ ಜನರ ರಕ್ಷಣೆ

ಕುಂಟೇಹಳ್ಳ ಉಕ್ಕಿ ಹರಿದು ಕನ್ನಂಗಿ ಸಮೀಪದ ನವಿಲಾರಿ ಗ್ರಾಮ ಜಲಾವೃತಗೊಂಡಿತ್ತು. 20 ಕುಟುಂಬಗಳು ಶುಕ್ರವಾರದಿಂದ ನೀರಿನಲ್ಲಿ ಸಿಲುಕಿದ್ದರು. ಅಗ್ನಿಶಾಮಕ ಸಿಬ್ಬಂದಿ ಇವತ್ತು ಕಾರ್ಯಾಚರಣೆ ನಡೆಸಿ, ಬೋಟ್’ಗಳ ಮೂಲಕ ಜನರನ್ನು ರಕ್ಷಿಸಿದ್ದಾರೆ.

ಮಹಿಷಿ ಸೇತುವೆ ಜಲಾವೃತವಾಗಿದ್ದು, ಉತ್ತರಾಧಿ ಮಠ ಜಲಾವೃತವಾಗಿತ್ತು. ಮಠದಲ್ಲಿದ್ದ ಹತ್ತು ಜನರನ್ನು ಎನ್.ಡಿ.ಆರ್.ಎಫ್ ತಂಡ ರಕ್ಷಣೆ ಮಾಡಿದೆ.

ಕುಶಾವತಿ ನದಿ ತುಂಬಿ ಹರಿಯುತ್ತಿರುವುದರಿಂದ ಇಂದಾವರ, ಕೊರೋಡಿ, ನಾಡ್ತಿ ಗ್ರಾಮಗಳು ಸುತ್ತಲು ನೀರು ಆವರಿಸಿದ್ದು, ದ್ವೀಪದಂತಾಗಿದೆ. ಎನ್.ಡಿ.ಆರ್.ಎಫ್ ತಂಡದ ಅಧಿಕಾರಿಗಳು ಗ್ರಾಮಸ್ಥರ ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.

ತೀರ್ಥಹಳ್ಳಿಯ ಶ್ರೀ ರಾಮೇಶ್ವರ ಸಭಾ ಭವನದಲ್ಲಿ ಗಂಜಿ ಕೇಂದ್ರ ಸ್ಥಾಪಿಸಲಾಗಿದೆ. ಈವರೆಗೆ ಸುಮಾರು 70 ಜನರನ್ನು ಗಂಜಿ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ ಮೊಬೈಲ್ ನಂಬರ್ | 9964634494

ಈ ಮೇಲ್ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment