ಬುಡಮೇಲಾಗಿ ಹಣಗೆರೆ ರಸ್ತೆಗೆ ಬಿದ್ದ ಮರ, ಮೂರು ಗಂಟೆ ವಾಹನ ಸಂಚಾರ ಸ್ಥಗಿತ, ಮರ ತೆರವಿಗೆ ನೆರವಾದರು ಶಾಸಕ

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 15 ಜುಲೈ 2021➤ ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಮರ ಬಡುಮೇಲಾಗಿ ರಸ್ತೆಗೆ ಬಿದ್ದು ಆಯನೂರಿನಿಂದ ಹಣಗೆರೆ ತೆರಳುವ ಮಾರ್ಗದಲ್ಲಿ ಸುಮಾರು ಮೂರು ಗಂಟೆ ರಸ್ತೆ ಸಂಚಾರ ವ್ಯತ್ಯಯವಾಗಿತ್ತು. ಅದೆ ಮಾರ್ಗವಾಗಿ ಬಂದ ಶಾಸಕ ಹರತಾಳು ಹಾಲಪ್ಪ ಅವರು ಮರ ತೆರವು ಮಾಡುವಂತೆ ಅಧಿಕಾರಿಗಳಿಗೆ ಕರೆ ಮಾಡಿದ ಬಳಿಕ, ರಸ್ತೆ ಸಂಚಾರಕ್ಕೆ ವ್ಯವಸ್ಥೆಯಾಗಿದೆ.

ಶಿವಮೊಗ್ಗದಿಂದ ಹಣಗೆರೆ ಮಾರ್ಗವಾಗಿ ತೀರ್ಥಹಳ್ಳಿಗೆ ತೆರಳುವ ರಸ್ತೆಯಲ್ಲಿ ಮರ ಬುಡಮೇಲಾಗಿತ್ತು. ಸಿರಿಗೆರೆ ಗೇಟ್‍ ಸಮೀಪ ಘಟನೆ ಸಂಭವಿಸಿತ್ತು.

ಮೂರು ಗಂಟೆ ರಸ್ತೆ ಬ್ಲಾಕ್

ಮರ ಬಿದ್ದಿದ್ದರಿಂದ ಮೂರು ಗಂಟೆಗೂ ಹೆಚ್ಚು ಹೊತ್ತು ರಸ್ತೆ ಸಂಚಾರ ಸ್ಥಗಿತವಾಗಿತ್ತು. ನೂರಾರು ವಾಹನಗಳು ಎರಡು ಬದಿಯಲ್ಲೂ ನಿಂತಿದ್ದವು. ಮೊಬೈಲ್‍ ನೆಟ್‍ವರ್ಕ್ ಸರಿಯಾಗಿ ಸಿಗದ ಜಾಗವಾಗಿದ್ದರಿಂದ, ಮರ ತೆರವು ಮಾಡುವ ಕಾರ್ಯಾಚರಣೆಗೆಂದು ಅಧಿಕಾರಿಗಳಿಗೆ ಕರೆ ಮಾಡುವುದು ಕಷ್ಟವಾಗಿತ್ತು.

ಅದೇ ರಸ್ತೆಯಲ್ಲಿ ಬಂದರು ಎಂಎಲ್‍ಎ

ಇದೆ ಮಾರ್ಗವಾಗಿ ಬಂದ ಶಾಸಕ ಆರಗ ಜ್ಞಾನೇಂದ್ರ, ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಅಕ್ಕಪಕ್ಕದಲ್ಲಿ ಮರ ಕಟ್ ಮಾಡುವ ಯಂತ್ರಗಳಿರುವ ಸ್ಥಳೀಯರನ್ನು ಸ್ಥಳಕ್ಕೆ ಕರೆಯಿಸಿಕೊಂಡು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ತುಂಡು ಮಾಡಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಆಂಬುಲೆನ್ಸ್ ಸಂಚಾರ ಸರಾಗ

ಮರ ಕಟ್ ಮಾಡಿಸುತ್ತಿದ್ದಂತೆ ಅದೇ ಮಾರ್ಗಾವಾಗಿ ಬಂದ ಆಂಬುಲೆನ್ಸ್‍ಗಳು ಸರಾಗವಾಗಿ ಸಂಚರಿಸಿದವು. ಮಳೆಯ ನಡುವೆ ಮೂರು ಗಂಟೆಗೂ ಹೆಚ್ಚು ಹೊತ್ತು ರಸ್ತೆಯಲ್ಲಿ ನಿಂತಿದ್ದ ವಾಹನ ಸವಾರರು ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

Leave a Comment