SHIVAMOGGA LIVE NEW S | 20 FEBRUARY 2024
SHIMOGA : ಕೆಎಸ್ಆರ್ಟಿಸಿಯ ಹತ್ತು ಅಶ್ವಮೇಧ ಬಸ್ಸುಗಳಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶನಿವಾರ ಚಾಲನೆ ನೀಡಿದರು.
ಅಲ್ಲಮಪ್ರಭು ಮೈದಾನದ ಆವರಣದಲ್ಲಿ ಕೆಎಸ್ಆರ್ಟಿಸಿ ಶಿವಮೊಗ್ಗ ವಿಭಾಗದ ಹತ್ತು ಅಶ್ವಮೇಧ ಬಸ್ಸುಗಳಿಗೆ ಚಾಲನೆ ನೀಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಪ್ರಮುಖರಾದ ಎಂ.ಶ್ರೀಕಾಂತ್ ಸೇರಿದಂತೆ ಹಲವರು ಈ ಸಂದರ್ಭ ಉಪಸ್ಥಿತರಿದ್ದರು.
ಕೆಎಸ್ಆರ್ಟಿಸಿ ಅಶ್ವಮೇಧ ಹೆಸರಿನ 100 ಬಸ್ಸುಗಳನ್ನು ರಸ್ತೆಗಿಳಿಸಿದೆ. ಇವು ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ವೇಗಧೂತ ಬಸ್ಸುಗಳಾಗಿವೆ.
ಇದನ್ನೂ ಓದಿ – ಕೆಎಸ್ಆರ್ಟಿಸಿಯಿಂದ 100 ಅಶ್ವಮೇಧ ಬಸ್ಸುಗಳು, ಹೇಗಿರುತ್ತೆವೆ ಈ ಬಸ್ಸುಗಳು?