ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ನವೆಂಬರ್ 2021
ಬೆಂಗಳೂರು – ಶಿವಮೊಗ್ಗ ಐರಾವತ ಬಸ್ಸಿನಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ. ಲ್ಯಾಪ್ ಟಾಪ್’ಗಳಿದ್ದ ಬ್ಯಾಗುಗಳನ್ನು ಕದ್ದು ಪರಾರಿಯಾಗಿದ್ದಾರೆ.
ಡಾ.ಚೇತನ್ ಮತ್ತು ಕಿರಣ್ ವಿಜ್ಞಾನ್ ಎಂಬುವವರು ಐರಾವತ ಬಸ್ಸಿನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಬಂದಿದ್ದಾರೆ. ರಾತ್ರಿ ಬಸ್ಸು ಹತ್ತಿದಾಗ ತಮ್ಮ ಲ್ಯಾಪ್ ಟಾಪ್ ಬ್ಯಾಗುಗಳನ್ನು ಲಗೇಜ್ ಇಡುವ ಜಾಗದಲ್ಲಿ ಇರಿಸಿ ಮಲಗಿದ್ದಾರೆ.
ಬೆಳಗ್ಗೆ ಶಿವಮೊಗ್ಗದಲ್ಲಿ ಬಸ್ಸು ಇಳಿಯುವಾಗ ಬ್ಯಾಗುಗಳನ್ನು ಹುಡುಕಿದಾಗ ಕಾಣಿಸಲಿಲ್ಲ. ಎಲ್ಲೆಡೆ ಹಡುಕಾಡಿದರೂ ಬ್ಯಾಗುಗಳು ಪತ್ತೆಯಾಗಿಲ್ಲ. ಬ್ಯಾಗಿನಲ್ಲಿ ಎರಡು ಲ್ಯಾಪ್ ಟಾಪ್’ಗಳಿದ್ದವು. ಅಲ್ಲದೆ ಕೆಲವು ದಾಖಲೆಗಳು ಕೂಡ ಇದ್ದವು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.