ಶಿವಮೊಗ್ಗ ಲೈವ್.ಕಾಂ | HOLEHONNUR NEWS | 7 ಡಿಸೆಂಬರ್ 2021
ಅಡಕೆ ಬೇಯಿಸುವ ತಾಮ್ರದ ಹಂಡೆಗಳನ್ನು ಕದ್ದಿದ್ದ ಕಳ್ಳರನ್ನು ಮಾಲು ಸಮೇತ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೊಳೆಹೊನ್ನೂರು ಪೊಲೀಸರು ಕಾರ್ಯಾಚರಣೆ ನಡೆಸಿ ಖದೀಮರನ್ನು ಅರೆಸ್ಟ್ ಮಾಡಿದ್ದಾರೆ.
ಕಳೆದೆರಡು ದಿನಗಳ ಹಿಂದೆ ಭದ್ರಾವತಿ ತಾಲೂಕಿನ ಅಶೋಕನಗರದ ಕುಮಾರ್ ಎಂಬುವವರ ಅಡಕೆ ಮನೆಯಲ್ಲಿದ್ದ ಎರಡು ಅಡಕೆ ಬೇಯಿಸುವ ಹಂಡೆಗಳು ಕಳವಾಗಿದ್ದವು. ಈ ಬಗ್ಗೆ ಕುಮಾರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಹಂಡೆಗಳನ್ನು ಅಶೋಕನಗರದ ಉಮೇಶ್ ಮತ್ತು ಬುಡೇನ್ ಸಾಬ್ ಎಂಬುವರು ಕಳ್ಳತನ ಮಾಡಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರ ತಂಡ, ಕದ್ದ ಮಾಲು ಸಮೇತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕಳವು ಮಾಡಿದ ಹಂಡೆಗಳನ್ನು ಬುಡೇನ್ ಸಾಬ್ ತೋಟದಲ್ಲಿ ಮುಚ್ಚಿಟ್ಟಿದ್ದರು. ಪಿಎಸ್ಐ ಸುರೇಶ್ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.