SHIVAMOGGA LIVE NEWS | 20 APRIL 2024
EDUCATION NEWS : ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಮುಂದೇನು ಎಂದು ಯೋಚಿಸುತ್ತಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲು, ಉಚಿತ ಕಾರ್ಯಾಗಾರ ಆಯೋಜಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ಸಮಿತಿ, ಎಟಿಎನ್ಸಿ ಸಂಜೆ ಕಾಲೇಜು ವತಿಯಿಂದ ಕಾಮರ್ಸ್ ವಿದ್ಯಾರ್ಥಿಗಳಿಗೆ ಏ.22ರಂದು ಕಾರ್ಯಾಗಾರ ನಡೆಸಲಾಗುತ್ತಿದೆ. ಶಿವಮೊಗ್ಗದ ಎಟಿಎನ್ಸಿ ಕಾಲೇಜಿನ ಎವಿ ಹಾಲ್ನಲ್ಲಿ ಬೆಳಗ್ಗೆ 10.30ರಿಂದ ಕಾರ್ಯಾಗಾರ ನಡೆಯಲಿದೆ. ಸಂಪನ್ಮೂಲ ವ್ಯಕ್ತಿ ಮುಂಬೈನ ಚಾರ್ಟೆಡ್ ಅಕೌಂಟೆಂಟ್ ಮೋಹನ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಎಟಿಎನ್ಸಿ ಸಂಜೆ ಕಾಲೇಜು ಪ್ರಾಂಶುಪಾಲ ಬಿ.ಆರ್.ದಯಾನಂದ್ ಅಧ್ಯಕ್ಷತೆ ವಹಿಸಲಿದ್ದಾರೆ. ಆಸಕ್ತರು ಹೆಲ್ಪ್ಲೈನ್ ನಂಬರ್ 9686229484 ಮತ್ತು 08182 277080 ಗೆ ಸಂಪರ್ಕಿಸಬಹುದು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಮಳೆ, ಸಿಡಿಲಿಗೆ ವ್ಯಕ್ತಿ ಬಲಿ, ವಿವಿಧೆಡೆ ಮನೆ, ಬೆಳೆ ಹಾನಿ, ಹಾರಿ ಹೋದ ಛಾವಣಿ, ಎಲ್ಲೆಲ್ಲಿ ಏನೇನಾಗಿದೆ?