SHIVAMOGGA LIVE NEWS | 26 AUGUST 2023
HOSANAGARA : ಮನೆ ಹಿಂಬದಿಯ ಬಾವಿಗೆ (Well) ಹಾರಿದ್ದ ಮಹಿಳೆಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಹೊಸನಗರ ಪಟ್ಟಣದ ಹೊರವಲಯದ ಮಾವಿನಕೊಪ್ಪ (Mavinakoppa) ನಿವಾಸಿ ಯಶೋದಮ್ಮ (62) ಎಂಬುವವರನ್ನು ರಕ್ಷಿಸಲಾಗಿದೆ. ಅವರು ತಮ್ಮ ಮನೆಯ ಹಿಂಬದಿಯ ಬಾವಿಗೆ ಹಾರಿದ್ದಾರೆ ಎಂದು ಹೇಳಲಾಗಿತ್ತಿದೆ.
ಏನಿದು ಪ್ರಕರಣ?
ಶನಿವಾರ ಮನೆಯಲ್ಲಿ ಅತ್ತೆ ಕಾಣದಿದ್ದಾಗ ಸೊಸೆ ಎಲ್ಲೆಡೆ ಹುಡುಕಿದ್ದಾರೆ. ಕೊನೆಗೆ ಬಾವಿಯಲ್ಲಿ (Well) ಪರಿಶೀಲಿಸಿದಾಗ ಪೈಪ್ ಹಿಡಿದು 30 ಅಡಿ ಕೆಳಗೆ ಯಶೋದಮ್ಮ ಅವರು ನಿಂತಿರುವುದನ್ನು ಗಮನಿಸಿದ್ದಾರೆ. ಕೂಡಲೆ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಯಶೋದಮ್ಮನನ್ನು ರಕ್ಷಿಸಿದ್ದಾರೆ. ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಗ್ನಿಶಾಮಕ ಸಿಬ್ಬಂದಿ ಕೆ.ಟಿ.ರಾಜಪ್ಪ, ಹೆಚ್.ಡಿ.ಸುರೇಶ್, ಕೆ.ರವೀಂದ್ರ, ಶಂಕರೇಗೌಡ, ಬಿ.ಸಿ.ಆಂಜನೇಯ, ಭೀಷ್ಮಾಚಾರಿ ಕಮ್ಮಾರ್, ಆರ್.ಮಣಿ ಕಾರ್ಯಾಚರಣೆಯಲ್ಲಿ ಪಲ್ಗೊಂಡಿದ್ದರು.