ಶಿವಮೊಗ್ಗ ಲೈವ್.ಕಾಂ | 16 ಏಪ್ರಿಲ್ 2019
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಚುನಾವಣಾ ನೀತಿ ಸಂಹಿತೆಯ ಬಿಸಿ ತಟ್ಟಿದೆ. ಶಿವಮೊಗ್ಗ ಹೆಲಿಪ್ಯಾಡ್’ನಲ್ಲಿ ಯಡಿಯೂರಪ್ಪ ಅವರ ಬ್ಯಾಗ್’ಗಳು ಮತ್ತು ಹೆಲಿಕಾಪ್ಟರನ್ನು ತಪಾಸಣೆಗೆ ಒಳಪಡಿಸಲಾಗಿದೆ.
ಯಡಿಯೂರಪ್ಪ ಅವರು ನಿನ್ನೆ ಶಿವಮೊಗ್ಗಕ್ಕೆ ಬಂದಿದ್ದರು. ಇವತ್ತು ಗುರುಮಿಟ್ಕಲ್’ನಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ತೆರಳಿದ್ದಾರೆ. ಈ ವೇಳೆ ಶಿವಮೊಗ್ಗೆ ಹೆಲಿಪ್ಯಾಡ್’ಗೆ ಆಗಮಿಸುತ್ತಿದ್ದಂತೆ, ಚುನಾವಣಾ ಅಧಿಕಾರಿಗಳು ಯಡಿಯೂರಪ್ಪ ಅವರನ್ನು ತಡೆದು, ಹೆಲಿಕಾಪ್ಟರ್ ಮತ್ತು ಬ್ಯಾಗುಗಳನ್ನು ತಪಾಸಣೆ ನಡೆಸಿದರು. ಆ ಬಳಿಕ ಯಡಿಯೂರಪ್ಪ ಅವರ ಹೆಲಿಕಾಪ್ಟರ್ ಹಾರಾಟಕ್ಕೆ ಅನುಮತಿ ನೀಡಿದರು.
ಸಚಿವ ಡಿ.ಕೆ.ಶಿವಕುಮಾರ್ ಅವರ ಶಿವಮೊಗ್ಗಕ್ಕೆ ಆಗಮಿಸಿದ್ದಾಗಲೂ ಚುನಾವಣಾಧಿಕಾರಿಗಳು ತಪಾಸಣೆ ನಡೆಸಿದ್ದರು. ಹೆಲಿಕಾಪ್ಟರ್ ಮತ್ತು ಡಿ.ಕೆ.ಶಿವಕುಮಾರ್ ಅವರ ಬ್ಯಾಗುಗಳನ್ನು ಚೆಕ್ ಮಾಡಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]