ಶಿವಮೊಗ್ಗದಲ್ಲಿ ಹಸಿದ ಬೀದಿ ನಾಯಿಗಳಿಗೆ ಊಟ ಹಾಕ್ತಿದೆ ಈ ಟೀಂ, ಎಲ್ಲೆಲ್ಲಿ, ಎಷ್ಟು ಶ್ವಾನಗಳಿಗೆ ಆಹಾರ ಕೊಡ್ತಿದ್ದಾರೆ ಗೊತ್ತಾ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 2 ಏಪ್ರಿಲ್ 2020

ಕರೋನ ಲಾಕ್’ಡೌನ್’ನಿಂದ ಜನರಷ್ಟೆ ಅಲ್ಲ, ಪ್ರಾಣಿಗಳು ಸಂಕಷ್ಟಕ್ಕೆ ಸಿಲುಕಿವೆ. ಜನರು ಮನೆ ಬಿಟ್ಟು ಹೊರಬಾರದೆ ಇರುವುದರಿಂದ ಬೀದಿ ನಾಯಿಗಳಿಗೆ ಆಹಾರ ಸಿಗುತ್ತಿಲ್ಲ. ಹಸಿವು ನೀಗಿಸಿಕೊಳ್ಳಲು ಈ ಮೂಖ ಪ್ರಾಣಿಗಳು ಕಷ್ಟಪಡುತ್ತಿವೆ. ಆದರೆ ಲಾಕ್’ಡೌನ್ ನಡುವೆಯು ಶಿವಮೊಗ್ಗದ ಪ್ರಾಣಿ ಪ್ರಿಯರ ತಂಡವೊಂದು ಬೀದಿ ನಾಯಿಗಳಿಗೆ ಆಹಾರ ಒದಗಿಸುತ್ತಿದೆ.

ನಗರದ ವಿವಿಧೆಡೆ ಸಂಚರಿಸುವ ಈ ತಂಡ ಬೀದಿ ನಾಯಿಗಳಿಗೆ ಒಂದು ಹೊತ್ತಿನ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. 75ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಈ ತಂಡ ಪ್ರತಿದಿನ ಆಹಾರ ನೀಡುತ್ತಿದೆ.

ಯಾರಿದು ಪ್ರಾಣಿ ಪ್ರಿಯರು?

ಲಾಕ್’ಡೌನ್ ಘೋಷಣೆಯಾಗುತ್ತಿದ್ದಂತೆ ಜನರು ತಮ್ಮ ಮನೆಗೆ ದಿನಸಿ, ತರಕಾರಿ ಎಂದು ಅಂಗಡಿ ಮುಂದೆ ಕ್ಯೂ ನಿಂತರು. ಆದರೆ ನಗರದ ಹರ್ಷ ಮತ್ತು ಅವರ ಪತ್ನಿ ಬೀದಿ ನಾಯಿಗಳ ಹಸಿವಿನ ಕುರಿತು ಯೋಚಿಸಿ, ಆಹಾರ ಪೂರೈಸಲು ಆರಂಭಿಸಿದರು.

ಪ್ರತಿದಿನ ಬೆಳಗ್ಗೆ ಆಹಾರ ಸಿದ್ಧಪಡಿಸಿ ತಾವೇ ಹೋಗಿ ಅವುಗಳಿಗೆ ಆಹಾರ ಕೊಟ್ಟು ಬರುತ್ತಿದ್ದಾರೆ. ಆರಂಭದಲ್ಲಿ ಸುಮಾರು 35 ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದರು. ಈಗ ಇವರ ತಂಡ ದೊಡ್ಡದಾಗಿದೆ. ಕೆನಿತ್ ಹರ್ಷ ಅವರ ಜೊತೆಗೆ ನೈನಾ, ಬಿಂದೂ ರಾಣಿ, ನಿಖಿಲ್ ರೇನುನಾತನ್, ಸಬೀಹ ಶಿರ್ಕೋಲ್, ಮಂಜು ದೊಡ್ಮನೆ, ಸಂಹಿತಾ ಹೀಗೆ ಏಳು ಮಂದಿ ಪ್ರಾಣಿಪ್ರಿಯರು ಒಗ್ಗೂಡಿದ್ದಾರೆ.

91700501 1088789481482471 6422613241679052800 n.jpg? nc cat=102& nc sid=110474& nc ohc=1jZPFq5rCrAAX8YUhA5& nc ht=scontent.fblr4 1

ಎಲ್ಲೆಲ್ಲಿ ಬೀದಿ ನಾಯಿಗಳಿಗೆ ಆಹಾರ ಕೊಡುತ್ತಿದ್ದಾರೆ?

ಏಳು ಪ್ರಾಣಿಪ್ರಿಯರು ಎರಡು ಟೀಂ ಮಾಡಿಕೊಂಡು, ನಗರದ ವಿವಿಧೆಡೆಗೆ ತೆರಳಿ ಬೀದಿ ನಾಯಿಗಳಿಗೆ ಊಟ ಹಾಕುತ್ತಿದ್ದಾರೆ. ಬೆಳಗ್ಗೆ ಏಳು ಗಂಟೆಗೆ ಇವರ ಕೆಲಸ ಆರಂಭವಾಗಲಿದೆ. ಆಲ್ಕೊಳ, ಆಟೋ ಕಾಂಪ್ಲೆಕ್ಸ್, ವಿನೋಬನಗರ, ಗೋಪಾಲಗೌಡ ಬಡಾವಣೆ, ಜೆ.ಹೆಚ್.ಪಾಟೇಲ್ ಬಡಾವಣೆ, ಸೋಮಿನಕೊಪ್ಪ ಸುತ್ತಮುತ್ತಲು ಬೀದಿ ನಾಯಿಗಳಿಗೆ ಊಟ ಹಾಕುತ್ತಿದ್ದಾರೆ. ಲಾಕ್’ಡೌನ್ ರಿಲೀಫ್ ಅವಧಿ ಮುಗಿಯುವುದರಲ್ಲಿ ಈ ಕೆಲಸ ಮುಗಿಸಿ ಹಿಂತಿರುಗುತ್ತಿದ್ದಾರೆ. ಈ ತಂಡದ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆಯು ಲಭಿಸಿದೆ.

91406011 1088797994814953 7147547916733775872 o.jpg? nc cat=110& nc sid=110474& nc ohc=a2p8wPOUOjEAX Gkiot& nc ht=scontent.fblr4 1

ಏನೆಲ್ಲ ಊಟ ಕೊಡುತ್ತಿದ್ದಾರೆ?

ಬೀದಿ ನಾಯಿಗಳಿಗೆ ಅನ್ನ, ಮೊಸರು, ಡಾಗ್ ಫುಡ್ ಕೊಡುತ್ತಿದ್ದಾರೆ. ಮೂರು ಕೆ.ಜಿ.ಯಷ್ಟು ಅಕ್ಕಿಯನ್ನು ಅನ್ನ ಮಾಡಿ, ಮೊಸರು ಹಾಕಿ ಕಲಿಸುತ್ತಾರೆ. ಇನ್ನು ಇಡೀ ದಿನ ನಾಯಿಗಳಿಗೆ ನೀರು ಸಿಗುವುದು ಕಷ್ಟ. ಹಾಗಾಗಿ ಹಿಂದಿನ ರಾತ್ರಿಯೆ, ಅರ್ಧ ಕೆ.ಜಿ.ಯಷ್ಟು ಡಾಗ್ ಫುಡ್ ನೆನಸಿ, ಬೆಳಗ್ಗೆ ಅದನ್ನು ಮೊಸರು, ಅನ್ನಕ್ಕೆ ಮಿಕ್ಸ್ ಮಾಡುತ್ತಿದ್ದಾರೆ. ಡಾಗ್ ಫುಡ್ ನೀಡುವುದರಿಂದ ನಾಯಿಗಳಿಗೆ ಬಾಯಾರಿಕೆಯು ನೀಗಲಿದೆ.

https://www.facebook.com/shivamoggalive/videos/537665107182050/?t=5

ಸೇವೆ ಜೊತೆಗೆ ಪರಿಸರ ಕಾಳಜಿ

ನಾಯಿಗಳಿಗೆ ಪ್ರತ್ಯೇಕ ಪ್ಲೇಟ್ ಅಥವಾ ಅಡಕೆ ಹಾಳೆಯಲ್ಲಿ ಊಟ ಕೊಡುತ್ತಾರೆ. ಅವುಗಳು ಊಟ ಮುಗಿಸಿದ ಮೇಲೆ ಪ್ಲೇಟನ್ನು ತೊಳೆದು, ಮತ್ತೊಂದು ಜಾಗಕ್ಕೆ ತೆರಳುತ್ತಾರೆ. ಎಲ್ಲೆಂದರಲ್ಲಿ ಪ್ಲೇಟ್ ಬಿಸಾಡಿದರೆ ಪರಿಸರ ಹಾಳಾಗಲಿದೆ ಅನ್ನುತ್ತಾರೆ ತಂಡದ ಸದಸ್ಯರು. ಇನ್ನು, ಈ ತಂಡದ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ, ಸಾರ್ವಜನಿಕರು ಡೊನೇಷನ್ ನೀಡಲು ಮುಂದಾಗಿದ್ದಾರೆ. ಆದರೆ ಹಣದ ರೂಪದ ಡೊನೇಷನ್ ಬೇಡ. ಬದಲಾಗಿ ಅಕ್ಕಿ, ಮೊಸರು, ಡಾಗ್ ಫುಡ್ ಕೊಡುವುದಿದ್ದರೆ ಸ್ವೀಕರಿಸುತ್ತೇವೆ ಅಂತಾರೆ ತಂಡ ನಿಖಿಲ್.

ಈ ಪ್ರಾಣಿ ಪ್ರಿಯರನ್ನು ಸಂಪರ್ಕಿಸಲು ಈ ನಂಬರ್’ಗೆ ಫೋನ್ ಮಾಡಿ 9886212111

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : April 2, 2020

ಮೈಸೂರು – ಶಿವಮೊಗ್ಗ ರೈಲು, ಎರಡು ದಿನ ಭಾಗಶಃ ರದ್ದು, ಯಾವಾಗ?

ಮೈಸೂರು – ಶಿವಮೊಗ್ಗ ರೈಲು, ಎರಡು ದಿನ ಭಾಗಶಃ ರದ್ದು, ಯಾವಾಗ?

ಮೂವರ ಮೇಲೆ ದಾಳಿ ಮಾಡಿದ್ದ ಚಿರತೆ ಅನುಮಾನಾಸ್ಪದ ಸಾವು, ಎಲ್ಲಿ?

ಮೂವರ ಮೇಲೆ ದಾಳಿ ಮಾಡಿದ್ದ ಚಿರತೆ ಅನುಮಾನಾಸ್ಪದ ಸಾವು, ಎಲ್ಲಿ?

ಶಿವಮೊಗ್ಗ ಸಿಟಿಯಲ್ಲಿ ಭಾರಿ ಮಳೆ, ಹೊಳಲೂರು ಭಾಗದಲ್ಲಿ ಆಲಿಕಲ್ಲು ಸಹಿತ ವರ್ಷಧಾರೆ

ಶಿವಮೊಗ್ಗ ಸಿಟಿಯಲ್ಲಿ ಭಾರಿ ಮಳೆ, ಹೊಳಲೂರು ಭಾಗದಲ್ಲಿ ಆಲಿಕಲ್ಲು ಸಹಿತ ವರ್ಷಧಾರೆ

ಶಿವಮೊಗ್ಗದಲ್ಲಿ ದಾವಣಗೆರೆಗಿಂತಲು ದೊಡ್ಡ BSC ಶೋರೂಂ, ಏನೇನಿರುತ್ತೆ? ಯಾವಾಗ ಶುರು?

ಶಿವಮೊಗ್ಗದಲ್ಲಿ ದಾವಣಗೆರೆಗಿಂತಲು ದೊಡ್ಡ BSC ಶೋರೂಂ, ಏನೇನಿರುತ್ತೆ? ಯಾವಾಗ ಶುರು?

ಇವತ್ತು ಸರಕು ಅಡಿಕೆ ಎಷ್ಟಿದೆ? ರಾಶಿ, ಗೊರಬಲು ಧಾರಣೆ ಹೇಗಿದೆ? – 23 ಮಾರ್ಚ್‌ 2026

ಇವತ್ತು ಸರಕು ಅಡಿಕೆ ಎಷ್ಟಿದೆ? ರಾಶಿ, ಗೊರಬಲು ಧಾರಣೆ ಹೇಗಿದೆ? – 23 ಮಾರ್ಚ್‌ 2026

ಗಾಂಧಿ ಬಜಾರ್‌ ಉದ್ಯಮಿಗೆ ಬೆದರಿಕೆ ಕರೆ, ₹5,00,000 ಹಣಕ್ಕೆ ಡಿಮಾಂಡ್‌, ಏನಿದು ಕೇಸ್‌?

ಗಾಂಧಿ ಬಜಾರ್‌ ಉದ್ಯಮಿಗೆ ಬೆದರಿಕೆ ಕರೆ, ₹5,00,000 ಹಣಕ್ಕೆ ಡಿಮಾಂಡ್‌, ಏನಿದು ಕೇಸ್‌?

ಸೋಮಿನಕೊಪ್ಪದಲ್ಲಿ ಕಣ್ಮನ ಸೆಳೆದ ಜಾನಪದ ಸಮ್ಮೇಳನ, ಹೇಗಿತ್ತು? ಯಾರೆಲ್ಲ ಭಾಗವಹಿಸಿದ್ದರು?

ಸೋಮಿನಕೊಪ್ಪದಲ್ಲಿ ಕಣ್ಮನ ಸೆಳೆದ ಜಾನಪದ ಸಮ್ಮೇಳನ, ಹೇಗಿತ್ತು? ಯಾರೆಲ್ಲ ಭಾಗವಹಿಸಿದ್ದರು?

ಅಧಿಕಾರಿಗಳು, ಪೊಲೀಸರ ಜಂಟಿ ಕಾರ್ಯಾಚರಣೆ, ಶಿವಮೊಗ್ಗದ ಮಂಡ್ಲಿಯಲ್ಲಿ ದಾಳಿ, ದಾಖಲಾಯ್ತು ಕೇಸ್‌

ಅಧಿಕಾರಿಗಳು, ಪೊಲೀಸರ ಜಂಟಿ ಕಾರ್ಯಾಚರಣೆ, ಶಿವಮೊಗ್ಗದ ಮಂಡ್ಲಿಯಲ್ಲಿ ದಾಳಿ, ದಾಖಲಾಯ್ತು ಕೇಸ್‌

ಶಿವಮೊಗ್ಗ ಸಿಟಿಯಲ್ಲಿ ಶೆಟ್ಟರ ಸಂತೆ, ಶ್ರೀನಿವಾಸ ಕಲ್ಯಾಣೋತ್ಸವ, ಯಾವಾಗ? ಎಲ್ಲಿ ನಡೆಯಲಿದೆ?

ಶಿವಮೊಗ್ಗ ಸಿಟಿಯಲ್ಲಿ ಶೆಟ್ಟರ ಸಂತೆ, ಶ್ರೀನಿವಾಸ ಕಲ್ಯಾಣೋತ್ಸವ, ಯಾವಾಗ? ಎಲ್ಲಿ ನಡೆಯಲಿದೆ?

ರಾತ್ರಿ 11:45ಕ್ಕೆ ಅಮೀರ್‌ ಅಹಮದ್‌ ಸರ್ಕಲ್‌ಗೆ ಬಂದ ವ್ಯಕ್ತಿಗೆ ಕಾದಿತ್ತು ಆಘಾತ, ಆಗಿದ್ದೇನು?

ರಾತ್ರಿ 11:45ಕ್ಕೆ ಅಮೀರ್‌ ಅಹಮದ್‌ ಸರ್ಕಲ್‌ಗೆ ಬಂದ ವ್ಯಕ್ತಿಗೆ ಕಾದಿತ್ತು ಆಘಾತ, ಆಗಿದ್ದೇನು?

Leave a Comment