ಚನ್ನಗಿರಿ ಉಮಾ ವಿರುದ್ಧ ಶಿವಮೊಗ್ಗದಲ್ಲಿ ಮತ್ತೊಂದು ಕೇಸ್, ಒಂದೇ ತಿಂಗಳಲ್ಲಿ ಎರಡು ಠಾಣೆಯಲ್ಲಿ ಪ್ರತ್ಯೇಕ ದೂರು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ |SHIMOGA NEWS | 22 ಅಕ್ಟೋಬರ್ 2021

ಮನೆಯವರೆಲ್ಲ ಮಲಗಿದ್ದಾಗ ಸೂಟ್ ಕೇಸ್ ತುಂಬಾ ಬೆಳ್ಳಿ ವಸ್ತುಗಳನ್ನು ತುಂಬಿಕೊಂಡು, ಪರಾರಿಯಾದ ಮನೆಗೆಲಸದಾಕೆ ವಿರುದ್ಧ, ಮತ್ತೊಂದು ಪ್ರಕರಣ ದಾಖಲಾಗಿದೆ. ಒಂದೇ ತಿಂಗಳಲ್ಲಿ ಆಕೆ ವಿರುದ್ಧ ಇದು ಎರಡನೇ ಪ್ರಕರಣವಾಗಿದೆ.

ಯಾರದು ಮನೆ ಕೆಲಸದಾಕೆ?

ಚನ್ನಗಿರಿಯ ಉಮಾ ಎಂಬಾಕೆ ವಿರುದ್ಧ ಈ ತಿಂಗಳಲ್ಲಿ ಎರಡು ಪ್ರಕರಣ ದಾಖಲಾಗಿದೆ. ಈಕೆ ಮನೆ ಕೆಲಸಕ್ಕೆ ಬಂದಾಗಲೆಲ್ಲ ತನ್ನನ್ನು ಚನ್ನಗಿರಿಯ ಉಮಾ ಅಲಿಯಾಸ್ ಉಮಾದೇವಿ ಎಂದು ಪರಿಚಯಿಸಿಕೊಂಡಿದ್ದಾಳೆ. ಕೆಲಸ ಮಾಡುವ ಸ್ಥಳದಲ್ಲಿ ಚಿನ್ನಾಭರಣ, ನಗದು ಕಳವು ಮಾಡಿದ ಆರೋಪ ಎದುರಿಸುತ್ತಿದ್ದಾಳೆ. ಆಕೆ ವಿರುದ್ಧ ಮೊದಲಿಗೆ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ವಿನೋಬನಗರ ಠಾಣೆಯಲ್ಲಿ ಮತ್ತೊಂದು ಕೇಸ್ ದಾಖಲಾಗಿದೆ.

ಇದನ್ನು ಓದಿ | ಮನೆಯವರೆಲ್ಲ ಮಲಗಿದ್ದಾಗ ಮನೆ ಬಿಟ್ಟಳು ಕೆಲಸದಾಕೆ, ಸೂಟ್ ಕೇಸ್’ನಲ್ಲಿ ಹೊತ್ತೊಯ್ದದ್ದು ಬಟ್ಟೆ ಅಲ್ಲ

ಕಳ್ಳತನ 1 : ಗಾಂಧಿ ನಗರದ ಮನೆಯಲ್ಲಿ ಕಳ್ಳತನ

ಗಾಂಧಿನಗರದ ನಾಗರತ್ನ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ನಾಗರತ್ನ ಅವರ ಪತಿ ಅನಾರೋಗ್ಯಕ್ಕೀಡಾಗಿದ್ದಾರೆ. ಅವರ ಅರೈಕೆ ಮತ್ತು ಮನೆ ಕೆಲಸಕ್ಕಾಗಿ ಚನ್ನಗಿರಿ ಮೂಲದ ಉಮಾ ಎಂಬಾಕೆಯನ್ನು ನೇಮಿಸಿಕೊಳ್ಳಲಾಗಿತ್ತು. 10 ದಿನ ಮನೆಯಲ್ಲಿ ಕೆಲಸ ಮಾಡಿದ ಉಮಾ, ಮನೆಯಿಂದ ಏಕಾಏಕಿ ನಾಮಪತ್ತೆಯಾಗಿದ್ದಳು. ಮನೆಯವರೆಲ್ಲ ಮಲಗಿದ್ದಾಗ ಸೂಟ್ ಕೇಸ್’ನಲ್ಲಿ ಬೆಳ್ಳಿ ವಸ್ತುಗಳನ್ನು ತುಂಬಿಕೊಂಡು ಪರಾರಿಯಾಗಿದ್ದಳು. 86 ಸಾವಿರ ಮೌಲ್ಯದ ಬೆಳ್ಳಿ ವಸ್ತುಗಳು ಕಳುವಾಗಿರುವ ಬಗ್ಗೆ ನಾಗರತ್ನ ಅವರು ಶಿವಮೊಗ್ಗದ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.

ADVT JULY NANJAPPA HOSPITAL HOME LAB TESTING

ಕಳ್ಳತನ 2 : ವೃದ್ಧೆಯ ಚಿನ್ನಾಭರಣ ಮಿಸ್ಸಿಂಗ್

ಗಾಂಧಿನಗರದ ನಾಗರತ್ನ ಅವರ ಮನೆಯಲ್ಲಿ ಘಟನೆ ಸಂಬಂಧ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದನ್ನು ಗಮನಿಸಿದ 83 ವರ್ಷದ ಲಲಿತಮ್ಮ ಎಂಬುವವರು ವಿನೋಬನಗರ ಠಾಣೆಗೆ ಬಂದು ದೂರು ನೀಡಿದ್ದಾರೆ. ಚನ್ನಗಿರಿ ಉಮಾ ಅಲಿಯಾಸ್ ಉಮಾದೇವಿಯು ತಮ್ಮ ಚಿನ್ನಾಭರಣ ಕದ್ದೊಯ್ದಿರುವ ಶಂಕೆ ಇದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

1632381449326627 1

ಪತಿ ಮೃತರಾಗಿದ್ದು, ಪಾರ್ಶ್ವವಾಯುಗೆ ತುತ್ತಾಗಿರುವ ಲಲಿತಮ್ಮ ಅವರು ವೃದ್ಧಾಶ್ರಮದಲ್ಲಿ ಇದ್ದಾರೆ. ತಮ್ಮ ಆರೈಕೆಗಾಗಿ ಕೆಲಸದವರೊಬ್ಬರನ್ನು ನಿಯೋಜಿಸಿಕೊಂಡಿದ್ದರು. ಆಗ ಪರಿಚಯದವರೊಬ್ಬರು ಚನ್ನಗಿರಿ ಉಮಾದೇವಿ ಎಂಬಾಕೆ ಕೆಲಸಕ್ಕೆ ಕರೆತಂದು ಸೇರಸಿದ್ದರು. ಮೂರು ತಿಂಗಳು ಲಲಿತಮ್ಮ ಅವರ ಆರೈಕೆ ಮಾಡಿದ ಉಮಾದೇವಿ, ಬಳಿಕ ತನಗೆ ಬೇರೊಂದು ಕಡೆ ಕೆಲಸ ಸಿಕ್ಕಿರುವುದಾಗಿ ಹೇಳಿ ಹೋಗಿದ್ದಳು. ಪತ್ರಿಕೆಯಲ್ಲಿ ಉಮಾದೇವಿ ಕಳ್ಳತನ ಮಾಡಿರುವ ವಿಚಾರ ಓದಿದ ಬಳಿಕ ಲಲಿತಮ್ಮ ಅವರು ತಮ್ಮ ಕೊಠಡಿಯಲ್ಲಿದ್ದ ಚಿನ್ನಾಭರಣವನ್ನು ಪರಿಶೀಲಿಸಿದ್ದಾರೆ.

SHIVAMOGGA LIVE CONTATCT

ಲಲಿತಮ್ಮ ಅವರಿಗೆ ಸೇರಿದ ಚಿನ್ನದ ಉಂಗುರ, ಮೂಗುತಿ, ಚಿನ್ನದ ಸರ ಮತ್ತು ಎರಡು ಸಾವಿರ ರೂ. ನಗದು ನಾಪತ್ತೆಯಾಗಿವೆ. ತಮ್ಮ ಆರೈಕೆಗೆ ನಿಯೋಜನೆಗೊಂಡಿದ್ದ ಚನ್ನಗಿರಿಯ ಉಮಾ ತಮ್ಮ ಚಿನ್ನಾಭರಣ ಕದ್ದೊಯ್ದಿರುವ ಶಂಕೆ ವ್ಯಕ್ತವಾಗಿದೆ. ವಿನೋಬನಗರ ಠಾಣೆಯಲ್ಲಿ ಲಲಿತಮ್ಮ ಅವರು ದೂರು ನೀಡಿದ್ದಾರೆ.

ಉಮಾದೇವಿ ಅಲಿಯಾಸ್ ಚನ್ನಗಿರಿಯ ಉಮಾಳಿಗಾಗಿ ಜಯನಗರ ಮತ್ತು ವಿನೋಬನಗರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : October 22, 2021

ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಇವತ್ತು ಎಷ್ಟಿರಲಿದೆ ತಾಪಮಾನ?

ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಇವತ್ತು ಎಷ್ಟಿರಲಿದೆ ತಾಪಮಾನ?

ತೀರ್ಥಹಳ್ಳಿಯ ಕುಡುವಳ್ಳಿಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಸಚಿನ್‌ ಅಂತ್ಯಕ್ರಿಯೆ

ತೀರ್ಥಹಳ್ಳಿಯ ಕುಡುವಳ್ಳಿಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಸಚಿನ್‌ ಅಂತ್ಯಕ್ರಿಯೆ

ಇಂದಿನ ಪಂಚಾಂಗ, ಇವತ್ತು ಶುಭ ಸಮಯ ಎಷ್ಟೊತ್ತಿಗಿದೆ? ದಿನ ನಕ್ಷತ್ರ ಯಾವುದು?

ಇಂದಿನ ಪಂಚಾಂಗ, ಇವತ್ತು ಶುಭ ಸಮಯ ಎಷ್ಟೊತ್ತಿಗಿದೆ? ದಿನ ನಕ್ಷತ್ರ ಯಾವುದು?

ಶಿವಮೊಗ್ಗ ಜಿಲ್ಲೆಯ ರೈತರ ಮಕ್ಕಳಿಗೆ 10 ತಿಂಗಳು ತರಬೇತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಶಿವಮೊಗ್ಗ ಜಿಲ್ಲೆಯ ರೈತರ ಮಕ್ಕಳಿಗೆ 10 ತಿಂಗಳು ತರಬೇತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಹೊಂಬುಜದಲ್ಲಿ ಕುಂಕುಮೋತ್ಸವದ ಓಕಳಿಯಲ್ಲಿ ಮಿಂದೆದ್ದ ಭಕ್ತರು

ಹೊಂಬುಜದಲ್ಲಿ ಕುಂಕುಮೋತ್ಸವದ ಓಕಳಿಯಲ್ಲಿ ಮಿಂದೆದ್ದ ಭಕ್ತರು

ರೈಲಿಗೆ ಸಿಲುಕಿ 74 ವರ್ಷದ ವ್ಯಕ್ತಿ ಸಾವು, ಹೇಗಾಯ್ತು ಘಟನೆ?

ರೈಲಿಗೆ ಸಿಲುಕಿ 74 ವರ್ಷದ ವ್ಯಕ್ತಿ ಸಾವು, ಹೇಗಾಯ್ತು ಘಟನೆ?

ದ್ವಿತೀಯ ಪಿಯುಸಿ ಉತ್ತರಪತ್ರಿಕೆ ಮೌಲ್ಯಮಾಪನ ಬಹಿಷ್ಕರಿಸುವ ಎಚ್ಚರಿಕೆ, ಕಾರಣವೇನು?

ದ್ವಿತೀಯ ಪಿಯುಸಿ ಉತ್ತರಪತ್ರಿಕೆ ಮೌಲ್ಯಮಾಪನ ಬಹಿಷ್ಕರಿಸುವ ಎಚ್ಚರಿಕೆ, ಕಾರಣವೇನು?

ನಿಧಿ ಆಪ್ಕೆ ನಿಕಟ್ 2.0, ತೀರ್ಥಹಳ್ಳಿ ಮತ್ತು ದಾವಣಗೆರೆಯಲ್ಲಿ ಮಹತ್ವದ ಕಾರ್ಯಕ್ರಮ

ನಿಧಿ ಆಪ್ಕೆ ನಿಕಟ್ 2.0, ತೀರ್ಥಹಳ್ಳಿ ಮತ್ತು ದಾವಣಗೆರೆಯಲ್ಲಿ ಮಹತ್ವದ ಕಾರ್ಯಕ್ರಮ

ಶಿವಮೊಗ್ಗದಲ್ಲಿ ಸಾಕು ನಾಯಿ ವಿಚಾರಕ್ಕೆ ಶುರುವಾದ ಕಿರಿಕ್, ಹಲ್ಲು ಮುರಿಯುವ ಹಂತಕ್ಕೆ ಹೋಯ್ತು

ಶಿವಮೊಗ್ಗದಲ್ಲಿ ಸಾಕು ನಾಯಿ ವಿಚಾರಕ್ಕೆ ಶುರುವಾದ ಕಿರಿಕ್, ಹಲ್ಲು ಮುರಿಯುವ ಹಂತಕ್ಕೆ ಹೋಯ್ತು

ಸಿಲಿಂಡರ್ ಬುಕ್ಕಿಂಗ್, ಶಿವಮೊಗ್ಗದಲ್ಲಿ ಸಹಾಯವಾಣಿ ಆರಂಭ, ಇಲ್ಲಿವೆ ಎರಡು ನಂಬರ್‌

ಸಿಲಿಂಡರ್ ಬುಕ್ಕಿಂಗ್, ಶಿವಮೊಗ್ಗದಲ್ಲಿ ಸಹಾಯವಾಣಿ ಆರಂಭ, ಇಲ್ಲಿವೆ ಎರಡು ನಂಬರ್‌

Leave a Comment