SHIVAMOGGA LIVE NEWS | 4 ಏಪ್ರಿಲ್ 2022
ಒಸಿ ಜೂಜಾಟ ಆಡಿಸುತ್ತಿದ್ದವರ ಮೇಲೆ ಕೋಟೆ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಶಿವಮೊಗ್ಗದ ವಿದ್ಯಾನಗರ ಮತ್ತು ಲಷ್ಕರ್ ಮೊಹಲ್ಲಾದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ವಿದ್ಯಾನಗರದಲ್ಲಿ ದಾಳಿ
ವಿದ್ಯಾನಗರ 1ನೇ ಕ್ರಾಸ್ ಸಮೀಪ ಓ.ಸಿ. ಬರೆಯುತ್ತಿದ್ದ ಆರೋಪ ಸಂಬಂಧ ಪ್ರದೀಪ್ ಎಂಬಾತನ ಮೇಲೆ ದಾಳಿ ಮಾಡಲಾಗಿದೆ. ಆತನಿಂದ ಓ.ಸಿ. ಚೀಟಿ ಮತ್ತು 710 ರೂ. ನಗದು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಲಷ್ಕರ್ ಮೊಹಲ್ಲಾದಲ್ಲಿ ದಾಳಿ
ಇನ್ನು, ಲಷ್ಕರ್ ಮೊಹಲ್ಲಾದ ತಮಿಳರ ಕೇರಿಯಲ್ಲೂ ಪೊಲೀಸರು ದಾಳಿ ನಡೆಸಿದ್ದಾರೆ. ಶ್ರೇಯಸ್ ಎಂಬಾತ ಓ.ಸಿ.ಬರೆಸುತ್ತಿರುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಈತ ಓ.ಸಿ. ಬರೆದು ಹಣವನ್ನು ಮೊಹಮ್ಮದ್ ರಫೀಕ್ ಅಲಿಯಾಸ್ ಶಣ್ಣು ಎಂಬಾತನಿಗೆ ಕೊಡುತ್ತಿದ್ದುದ್ದಾಗಿ ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200