ಸೊರಬ: ಚಂದ್ರಗುತ್ತಿ ಸಮೀಪದ ಚಿಕ್ಕಮಾಕೊಪ್ಪ ಗ್ರಾಮದಲ್ಲಿ ಜಮೀನಿಗೆ ನೀರು ಹಾಯಿಸಲು ತೆರಳಿದ್ದ ಯುವಕ ಕುಸಿದು (collapsing) ಬಿದ್ದು ಮೃತಪಟ್ಟಿದ್ದಾರೆ. ಗಜೇಂದ್ರ (35) ಮೃತ ದುರ್ದೈವಿ.
ವರದಾ ನದಿ ದಂಡೆಯ ಜಮೀನಿಗೆ ನೀರು ಹರಿಸಲು ಮೋಟಾರ್ ಎತ್ತಿಡುವ ಸಂದರ್ಭ ಆಯತಪ್ಪಿ ಕುಸಿದು ಬಿದ್ದಿದ್ದಾರೆ. ಈ ವೇಳೆ ಬೆನ್ನು ಮೂಳೆಗೆ ಬಲವಾದ ಹೊಡೆತ ಬಿದ್ದಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಿಲ್ಲ.
ಇದನ್ನೂ ಓದಿ – ಗೆಜ್ಜೇನಹಳ್ಳಿಯಲ್ಲಿ ಹಿಟ್ ಅಂಡ್ ರನ್ ಅಪಘಾತ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು








