ಮಹಿಳೆಯರಿಗೆ ಆನ್ ಲೈನ್ ಮೂಲಕವೇ ಸಂಗೀತ ಶಿಬಿರ, ಹೇಗೆ? ಯಾರೆಲ್ಲ ಸೇರಬಹುದು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | SHIMOGA | 13 ಜುಲೈ 2022

ಮಲೆನಾಡಿನ ತವರು ಶಿವಮೊಗ್ಗದಲ್ಲಿ ವಿದ್ವಾನ್ ಎಚ್. ಎಸ್. ನಾಗರಾಜ್ ಎಂದರೆ ಅದು ಕರ್ನಾಟಕದ ಶಾಸ್ತ್ರೀಯ ಸಂಗೀತಕ್ಕೆ ಪರ್ಯಾಯ ಹೆಸರು. ಸದಾ ಒಂದಿಲ್ಲೊಂದು ಚಟುವಟಿಕೆಯಿಂದ ಅವರು ಮತ್ತು ವಿದ್ಯಾಲಯ ಸದಾ ಹೊಸತನದ ಪ್ರತೀಕವಾಗಿರುತ್ತದೆ.

Shimoga Nanjappa Hospital

ನಮ್ಮ ಪರಂಪರೆಯ ಶೈಲಿಯಲ್ಲಿ ಉತ್ತಮ ಸಂಗೀತದ ಪಾಠ ಎಂದರೆ ರಾಜ್ಯದ ಎಲ್ಲ ಗಾಯನ ಪರಿಣತರು ಇಂದು ಶಿವಮೊಗ್ಗದ ಕಡೆಗೆ ಕಣ್ಣು ಅರಳಿಸಿ ಪ್ರಶಂಸೆ ಮಾಡುವುದು ವಿದ್ವಾನ್ ನಾಗರಾಜರ ಬಗ್ಗೆ. ಹೌದು. ಜೀವನವನ್ನೇ ಸಂಗೀತಕ್ಕಾಗಿ ಮೀಸಲಿಟ್ಟ ಈ ಗುರುಗಳಿಗೆ ಈಗ 60ರ ವಸಂತ. ಸಂಗೀತ ಕಲಿಕಾರ್ಥಿಗಳಿಗೆ ಏನಾದರೂ ಕೊಡುಗೆ ನೀಡಬೇಕು ಎಂಬುದು ಅವರ ಅಂತರಂಗದ ಅಶಯ.

ವಿದ್ವಾನ್ ನಾಗರಾಜರ ಸಾರಥ್ಯದಲ್ಲಿ 1985ರಿಂದಲೂ ಚಾಲ್ತಿಯಲ್ಲಿರುವ ಉಚಿತ ದೇವರ ನಾಮದ ಶಿಬಿರ (ಪುರಂದರ ದಾಸರ ಆರಾಧನಾ ಮಹೋತ್ಸವದ ಪ್ರಯುಕ್ತ) ನಡೆಸುವ ದಾಸರ ಪದಗಳ ಉಚಿತ ಗಾಯನ ಅಭಿಯಾನವು ಶಿವಮೊಗ್ಗ ದಾಟಿ ರಾಜಧಾನಿ ಬೆಂಗಳೂರನೂ ಮೀರಿ ಸಾಗರೋಲ್ಲಂಘನ ಮಾಡಿದೆ.

ಈ ವಿದ್ಯಾಲಯದ ಈ ವಿಶೇಷ ಉಚಿತ ಶಿಬಿರದಲಿ ಪ್ರತಿ ವರ್ಷ ಸಾವಿರಾರು ಮಾತೆಯರು ದಾಸರ ಪದ ಕಲಿತು ಹಾಡಿದ್ದಾರೆ. ಗಾಯನವೇ ತಿಳಿಯದ ಮಾತೆಯರು ಲಕ್ಷ ಲಕ್ಷ ಮನೆಗಳಲಿ ಇಂದು ದಾಸರ ಪದ ಹಾಡಿ ಭಕ್ತಿ ಸಮರ್ಪಣೆ ಮಾಡಿದ್ದಾರೆ ಎಂದರೆ ಅದರ ಕೀರ್ತಿ ನಾಗರಾಜರಿಗೆ ಸಲ್ಲಬೇಕು.

ಇಷ್ಟು ಖ್ಯಾತಿ ಹೊಂದಿರುವ ಉಚಿತ ದೇವರ ನಾಮದ ಶಿಬಿರ ಇದೀಗ ಆನ್ ಲೈನ್ ರೂಪಕ್ಕೆ ಬಂದಿದೆ. ಈ ಅಭಿಯಾನವು ವಿಶೇಷವಾಗಿ ಮಹಿಳೆಯರಿಗೆಂದೇ ಮೀಸಲಾಗಿದ್ದು, 15 ವರ್ಷ ಮೇಲ್ಪಟ್ಟ ಎಲ್ಲಾರೂ ಈ ಅಭಿಯಾನದಲ್ಲಿ ಭಾಗವಹಿಸಬಹುದು.

Shimoga Nanjappa Hospital

ತರಗತಿಯಲ್ಲಿ ಭಾಗವಹಿಸುವ ಮಹಿಳೆಯರಿಗೆ ಶಾಸ್ತ್ರೀಯ ಸಂಗೀತದ ಹಿನ್ನೆಲೆಯ ಅವಶ್ಯಕತೆ ಇಲ್ಲ ಎಂಬುದು ಈ ಅಭಿಯಾನದ ವಿಶೇಷ. ವೃತ್ತಿನಿರತ ಮತ್ತು ಗೃಹಿಣಿಯರೂ ಸಹ ಈ ಅಭಿಯಾನದಲ್ಲಿ ಭಾಗವಹಿಸಬಹುದಾಗಿದೆ. ಆಗಸ್ಟ್ ತಿಂಗಳ 7ನೇ ತಾರೀಖಿನಿಂದ ಈ ಅಭಿಯಾನ ಚಾಲನೆ ಗೊಳ್ಳಲಿದೆ ಎಂಬುದು ಮಹತ್ತರ ಸಂಗತಿ.

ಪ್ರತಿ ಭಾನುವಾರವೂ ಸಮಯಾನುಸಾರವಾಗಿ ಐದು ಪ್ರತ್ಯೇಕ ಆನ್ ಲೈನ್ ತರಗತಿಗಳು ಇರಲಿವೆ. ಅಂತೆಯೇ ಅನುಕೂಲ ಇದ್ದವರು ಆಫ್ ಲೈನ್ ತರಗತಿಗಳಲ್ಲೂ ಪಾಲ್ಗೊಳ್ಳಬಹುದು.

ವಿಶೇಷವಾಗಿ ಆಫ್ ಲೈನ್ ತರಗತಿಗಳನ್ನು “ಧಾರ್ಮಿಕ ಪ್ರವಾಸ” ದ ರೀತಿಯಲ್ಲಿ ರೂಪಿಸಲಾಗಿದೆ. ಇದು ಪ್ರತಿ ಮಾಸಾಂತ್ಯದಲಿ ಧಾರ್ಮಿಕ ಕ್ಷೇತ್ರಗಳು ಹಾಗೂ ಐತಿಹಾಸಿಕ ದೇಗುಲಗಳಲ್ಲಿ ನಡೆಯಲಿದೆ. ತಿಂಗಳಿಡೀ ಕಲಿತ ಕೃತಿಗಳನು ಒಂದು ದೇಗುಲ ಅಥವಾ ಐತಿಹಾಸಿಕ ತಾಣದಲಿ ಸಮರ್ಪಣೆ ಮಾಡಿ ಮುಂದಿನ ಕಲಿಕೆಗೆ ಸ್ಪೂರ್ತಿ ಪಡೆಯಲಾಗುತ್ತದೆ.

ಈ ಅಭಿಯಾನದಲ್ಲಿ ಪಾಲ್ಗೊಳ್ಳುವ ಯಾವುದೇ ಆಸಕ್ತರು ಆನ್ ಲೈನ್ ಅರ್ಜಿಯನ್ನು ಭರಿಸುವುದು ಕಡ್ಡಾಯ. ಆಗಸ್ಟ್ 1ನೇ ತಾರೀಖಿನೊಳಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಸಕ್ತರು ವೆಬ್ ಸೈಟ್’ಗೆ ಭೇಟಿ ನೀಡಿ, ಅಲ್ಲಿಯೇ ಅರ್ಜಿ ತುಂಬಿ ಸಲ್ಲಿಸಬಹುದು.

ಗುರುಗುಹ ಗಾಯನ ಅಭಿಯಾನದಲ್ಲಿ ಪಾಲ್ಗೊಳ್ಳಿ. ಪುರಂದರ ದಾಸರ ಕೀರ್ತನೆ ಕಲಿತು ದೈವ ಕೃಪೆಗೆ ಪಾತ್ರರಾಗಬಹುದು. ಮನೆ ಮನೆಗಳಲಿ ಗಾಯನದ ಮಾಧುರ್ಯ ಹೊಮ್ಮಿಸಬಹುದು. ಇಂದಿನ ಮೊಬೈಲ್ ಯುಗದಲ್ಲಿ ಮರೆತು ಹೋಗುತ್ತ ಇರುವ ಗಾಯನ ಪರಂಪರೆ ಉಳಿಸಿ ಬೆಳೆಸುವುದು ಮಾತೆಯರಿಂದ ಮಾತ್ರ ಸಾಧ್ಯ. ಈ ಉಚಿತ ಅಭಿಯಾನಕೆ ನಿಮ್ಮ ಸಹಕಾರ ದೊಡ್ಡ ಕೊಡುಗೆಯಾಗಲಿದೆ.

ವೆಬ್ ಸೈಟ್ ಲಿಂಕ್ ಇಲ್ಲಿದೆ – http://www.bhakthisankeerthana.com/

ಇದನ್ನೂ ಓದಿ – ಜೆಎನ್ಎನ್ ಕಾಲೇಜಿನಲ್ಲಿ ‘ಉತ್ತಾನ 2022’ಗೆ ಬಿಗ್ ಬಾಸ್ ಖ್ಯಾತಿಯ ಶಮಂತ ಗೌಡ ಚಾಲನೆ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : July 13, 2022

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್‌, ಯಾಕೆ?

ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್‌, ಯಾಕೆ?

ಶಿವಮೊಗ್ಗದ ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ ಮಾಡಿದ ಮಾಲೀಕ

ಶಿವಮೊಗ್ಗದ ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ ಮಾಡಿದ ಮಾಲೀಕ

ಸಹ್ಯಾದ್ರಿ ಉತ್ಸವ, ಸಮಗ್ರ ಪ್ರಶಸ್ತಿ ಇಂದಿರಾ ಗಾಂಧಿ ಮಹಿಳಾ ಕಾಲೇಜು ಮುಡಿಗೆ

ಸಹ್ಯಾದ್ರಿ ಉತ್ಸವ, ಸಮಗ್ರ ಪ್ರಶಸ್ತಿ ಇಂದಿರಾ ಗಾಂಧಿ ಮಹಿಳಾ ಕಾಲೇಜು ಮುಡಿಗೆ

ಮಾವನ ಕುತ್ತಿಗೆ ಸೀಳಿ ಕೊಲೆಗೆ ಯತ್ನಿಸಿದ ಅಳಿಯ, ಎಲ್ಲಿ? ಕಾರಣವೇನು?

ಮಾವನ ಕುತ್ತಿಗೆ ಸೀಳಿ ಕೊಲೆಗೆ ಯತ್ನಿಸಿದ ಅಳಿಯ, ಎಲ್ಲಿ? ಕಾರಣವೇನು?

ಗೆಜ್ಜೇನಹಳ್ಳಿಯಲ್ಲಿ ಹಿಟ್ ಅಂಡ್ ರನ್ ಅಪಘಾತ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು

ಗೆಜ್ಜೇನಹಳ್ಳಿಯಲ್ಲಿ ಹಿಟ್ ಅಂಡ್ ರನ್ ಅಪಘಾತ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು

ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಇವತ್ತು ಎಷ್ಟಿರಲಿದೆ ತಾಪಮಾನ?

ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಇವತ್ತು ಎಷ್ಟಿರಲಿದೆ ತಾಪಮಾನ?

ತೀರ್ಥಹಳ್ಳಿಯ ಕುಡುವಳ್ಳಿಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಸಚಿನ್‌ ಅಂತ್ಯಕ್ರಿಯೆ

ತೀರ್ಥಹಳ್ಳಿಯ ಕುಡುವಳ್ಳಿಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಸಚಿನ್‌ ಅಂತ್ಯಕ್ರಿಯೆ

ಇಂದಿನ ಪಂಚಾಂಗ, ಇವತ್ತು ಶುಭ ಸಮಯ ಎಷ್ಟೊತ್ತಿಗಿದೆ? ದಿನ ನಕ್ಷತ್ರ ಯಾವುದು?

ಇಂದಿನ ಪಂಚಾಂಗ, ಇವತ್ತು ಶುಭ ಸಮಯ ಎಷ್ಟೊತ್ತಿಗಿದೆ? ದಿನ ನಕ್ಷತ್ರ ಯಾವುದು?

Leave a Comment