ಶಿವಮೊಗ್ಗ : ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ (pragya-singh) ಅವರು ಶಿವಮೊಗ್ಗದಲ್ಲಿ ನಡೆಯುತ್ತಿರುವ ಹಿಂದೂ ಜಾಗರಣ ವೇದಿಕೆಯ 3ನೇ ತ್ರೈ ವಾರ್ಷಿಕ ಪ್ರಾಂತ ಸಮ್ಮೇಳನದಲ್ಲಿ ಭಾಷಣ ಮಾಡಿದರು. ಅವರ ಭಾಷಣದ ಪ್ರಮುಖ 10 ಪಾಯಿಂಟ್ ಇಲ್ಲಿದೆ.
ಏನೆಲ್ಲ ಹೇಳಿದರು ಪ್ರಜ್ಞಾ ಸಿಂಗ್ ಠಾಕೂರ್?
1 ಜನ್ಮಭೂಮಿ ನಮಗೆ ಸ್ವರ್ಗಕ್ಕಿಂತಲು ಮಿಗಿಲು. ಇದರ ಋಣ ತೀರಿಸದೆ ನಾವು ಸುಮ್ಮನೆ ಕೂರುವಂತಿಲ್ಲ. ಸ್ವಾತಂತ್ರ್ಯದ ಬಳಿಕವು ನಾವುಗಳು ಪ್ರಾಣ ಅರ್ಪಣೆ ಮಾಡುತ್ತಿದ್ದೇವೆ. ಸತ್ಯ, ಧರ್ಮಕ್ಕಾಗಿ ನಮಗೆ ಪ್ರಾಣ ಅರ್ಪಣೆಯು ಗೊತ್ತಿದೆ. ಬಲಿ ಕೊಡಲು ಕೂಡ ತಿಳಿದಿದೆ. ದೇಶ, ಮಾತೃ ಧರ್ಮಕ್ಕೆ ಧಕ್ಕೆಯಾಗುವ ಪರಿಸ್ಥಿತಿ ಎದುರಾದರೆ ನಾವು ಹೇಡಿಗಳಂತೆ ಮನೆಯಲ್ಲಿ ಕೂರುವುದಿಲ್ಲ. (pragya-singh)2 ಸ್ವಾತಂತ್ರ್ಯದ ಬಳಿಕವು ಹಲವರು ಜನ್ಮಭೂಮಿಗಾಗಿ, ಧರ್ಮಕ್ಕಾಗಿ ಪ್ರಾಣ ಅರ್ಪಣೆ ಮಾಡಿದ್ದಾರೆ. ಹಿಂದೂಗಳ ಕುರಿತು ಸಾಧ್ವಿ ಪ್ರಜ್ಞಾ ಸಿಂಗ್ ಒಬ್ಬರೆ ಸಂಸತ್ತಿನಲ್ಲಿ ಧ್ವನಿ ಎತ್ತುವುದೇಕೆ ಎಂದು ಪ್ರಶ್ನಿಸುತ್ತಾರೆ. ನಾವು ಸಂಸದರಾಗಿರುವುದೆ ಹಿಂದುಗಳ ರಕ್ಷಣೆಗಾಗಿ. ಸಂಸದರಾಗದೆ ಇದ್ದ ಸಂದರ್ಭದಲ್ಲಿಯು ಜೈಲಿಗೆ ಹೋಗಿ, ಕಷ್ಟ ಅನುಭವಿಸಿದ್ದೇನೆ. ಕೊನೆಯುಸಿರು ಇರುವ ತನಕವು ಹಿಂದು ಧರ್ಮದ ಪರವಾಗಿಯೇ ಮಾತನಾಡುತ್ತೇನೆ. (pragya-singh)
3 ಅಧಿಕಾರ ಶಾಶ್ವತವಲ್ಲ. ಆದರೆ ಸನ್ಯಾಸತ್ವ ಶಾಶ್ವತವಾಗಿರುತ್ತದೆ. ಎಲ್ಲವನ್ನು ತ್ಯಜಿಸಿದ ಬಳಿಕವೆ ಸನ್ಯಾಸಿನಿಯಾಗಿದ್ದೇನೆ. ಹಾಗಾಗಿ ನನ್ನ ಹತ್ಯೆಯ ಬೆದರಿಕೆ ಒಡ್ಡುವವರಿಗೆ ನಾನೆಂದು ಬಗ್ಗುವುದಿಲ್ಲ. ಹೆದರುವುದಿಲ್ಲ. ಇನ್ಮುಂದೆ ನಾವು ಅಂತಹವರನ್ನು ಬೆದರಿಸುತ್ತೇವೆ. ನಮಗೆ ಪುನರ್ ಜನ್ಮವಿದೆ. ಮತ್ತೆ ಹುಟ್ಟು ಬಂದು ಧರ್ಮಕ್ಕಾಗಿಯೇ ಹೋರಾಡುತ್ತೇವೆ.
4 ಇಲ್ಲಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಿಗೆ ಈಗ ಹಿಂದೂಗಳ ನೆನಪಾಗಿದೆ. ಅವರ ಮತ್ತೊಬ್ಬ ನಾಯಕನಿಗೆ ಈಗಷ್ಟೆ ಹಿಂದು ಧರ್ವ ಅರ್ಥವಾಗುತ್ತಿದೆ. ಈಗ ತಾವುಗಳು ಹಿಂದು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ನಾವುಗಳು ಹುಟ್ಟಿನಿಂದಲೆ ಹಿಂದೂ ಆಗಿದ್ದೇವೆ. ಅವರಂತೆ ಏಕಾಏಕಿ ಹಿಂದೂ ಆದವರಲ್ಲ. ಇನ್ನಾದರು ಕಾಂಗ್ರೆಸ್ ನಾಯಕರು ಹಿಂದೂಗಳ ಜೊತೆಗೆ ಸಮರ ನಡೆಸುವುದನ್ನು ನಿಲ್ಲಿಸಲಿ.
5 ಗೋದ್ರಾದಲ್ಲಿ ಹಿಂದೂಗಳ ಹತ್ಯೆ ಮಾಡಲಾಯಿತು. ಆನಂತರ ಹಲವರ ಕೊಲೆಗಳಾದವು. ನರೇಂದ್ರ ಮೋದಿ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ, ಅವಮಾನ ಮಾಡಲಾಯಿತು. ಅಮೆರಿಕಾ ವೀಸಾ ನಿರಾಕರಿಸಿತು. ಇದೆಲ್ಲವನ್ನು ಎದುರಿಸಿದ ನರೇಂದ್ರ ಮೋದಿ ಅವರು ಪ್ರಧಾನಿಯಾದರು. ಈಗ ಅಮೆರಿಕಾ ಮೋದಿ ಅವರ ಜೊತೆ ಸ್ನೇಹ ಬೆಳೆಸುತ್ತಿದೆ. ಭಾರತ ಈಗ ವಿಶ್ವಕ್ಕೆ ದಾನಿಯಾಗಿದೆ. ಯುದ್ದ ಭೂಮಿಯಲ್ಲಿ ಯಾರೆ ಭಾರತದ ಧ್ವಜ ಹಿಡಿದರು ಅವರು ಸುರಕ್ಷಿತವಾಗುತ್ತಿದ್ದಾರೆ.
6 ಅತಿಥಿ ದೇವೋಭವ ಅನ್ನುವುದು ಭಾರತೀಯ ಸಂಸ್ಕೃತಿಯಾಗಿದೆ. ಆದರೆ ಈಗ ಅದುವೆ ಭಾರತೀಯರಿಗೆ ಸಂಕಷ್ಟ ತಂದೊಡ್ಡಿದೆ. ಆದರೆ ನಾವು ಸಂಸ್ಕೃತಿಯನ್ನು ಬಿಡುವುದಿಲ್ಲ. ಈಗಲು ನಾವು ಅತಿಥಿ ದೇವೋಭವ ಅನ್ನುತ್ತೇವೆ. ಒಂದು ವೇಳೆ ಅತಿಥಿ ನಮ್ಮ ಮನೆಯ ಮಾಲೀಕನಾಗಲು ಯತ್ನಿಸಿದರೆ ಅದಕ್ಕೆ ಉತ್ತರ ಕೊಡಲು ನಮಗೆ ಬರುತ್ತದೆ. ಹಾಗಾಗಿಯೇ ಹಿಂದೂ ಪದಕ್ಕೆ ಅಪಮಾನ ಮಾಡುವ, ಹಿಂದೂಗಳಿಗೆ ಅಗೌರವ ತೋರುವುದನ್ನು ಕಾಂಗ್ರೆಸ್ ನಿಲ್ಲಿಸಬೇಕು. ಯಾಕೆಂದರೆ ಹಿಂದೂ ಜಾಗೃತವಾಗಿದ್ದಾನೆ. (pragya-singh)
7 ಹಿಂದೂ ಉಗ್ರವಾದ, ಹಿಂದೂ ನೀಚ ಎಂದು ಹೇಳುವವರಿದ್ದಾರೆ. ಒಂದು ವೇಳೆ ಹಿಂದೂ ಉಗ್ರವಾದಿಯೇ ಆಗಿದ್ದರೆ ಅನ್ಯ ಧರ್ಮಗಳು ಇವತ್ತು ಇಲ್ಲಿರುತ್ತಿರಲಿಲ್ಲ. ಕಾಂಗ್ರೆಸ್ ಪಕ್ಷದ ನಾಯಕನೊಬ್ಬ ಭಾರತದಲ್ಲಿ ಈಗ ಉಳಿಯಲು ಯೋಗ್ಯ ವಾತಾವರಣವಿಲ್ಲ ಎಂದು ಹೇಳಿದ್ದಾರೆ. ಅವರು ಇಲ್ಲಿಯೇ ಉಳಿದುಕೊಳ್ಳಲಿ ಎಂದು ಯಾರೂ ಒತ್ತಾಯ ಮಾಡುತ್ತಿಲ್ಲ. ದೇಶದಿಂದ ಹೊರ ಹೋಗಲು ಸಿದ್ಧವಿದ್ದರೆ ಹೋಗಲಿ. ಇಲ್ಲವಾದಲ್ಲಿ ಅಂತಹವರನ್ನು ದೇಶದಿಂದ ಹೊರಗೆ ಕಳುಹಿಸುವುದು ನಮಗೆ ಗೊತ್ತಿದೆ.
8 ನಮ್ಮಲ್ಲಿ ಪ್ರೇಮಕ್ಕೆ ವಿಶೇಷ ಸ್ಥಾನವಿದೆ. ಸನ್ಯಾನಿಸಿನಿಯಾಗಿ ತಾನು ದೇವರನ್ನು ಪ್ರೇಮಿಸುತ್ತೇನೆ. ದೇವರ ಸೃಷ್ಟಿಯನ್ನು ಪ್ರೇಮಿಸುತ್ತೇನೆ. ಆದರೆ ಪ್ರೇಮದ ಹೆಸರಿನಲ್ಲಿ ಅನ್ಯಾಯ, ಅತ್ಯಾಚಾರ ಎಸಗುವವರನ್ನು ನಿರ್ನಾಮ ಮಾಡಬೇಕು ಎಂದು ಪ್ರಾರ್ಥಿಸುತ್ತೇನೆ. ಯಾಕೆಂದರೆ ಇದ್ಯಾವುದು ಪ್ರೇಮದ ಪರಿಭಾಷೆಯಲ್ಲಿಲ್ಲ. ಕೆಲವರು ಏನೇನು ಮಾಡಲಾಗದವರು ಪ್ರೇಮದ ಹೆಸರಿನಲ್ಲಿ ಜಿಹಾದ್ ಮಾಡಲು ಆರಂಭಿಸಿದ್ದಾರೆ. ಲವ್ ಜಿಹಾದ್ ಮಾಡುವವರಿಗೆ ಅದೆ ರೀತಿಯ ಉತ್ತರ ನೀಡಬೇಕು. ನಮ್ಮ ಹೆಣ್ಮಕ್ಕಳನ್ನು ಜಾಗೃತಗೊಳಿಸಬೇಕು. ನಾವು ಕೂಡ ತರಕಾರಿ ಕತ್ತರಿಸುವ ಚಾಕುಗಳನ್ನು ಜೊತೆಯಲ್ಲಿಟ್ಟುಕೊಳ್ಳಬೇಕು. ಆತ್ಮರಕ್ಷಣೆ ಮಾಡಿಕೊಳ್ಳುವ ಹಕ್ಕು ಎಲ್ಲರಿಗು ಇದೆ.
9 ಹೆಣ್ಮಕ್ಕಳನ್ನು ನಡೆದಾಡುವ ಆಟಂ ಬಾಂಬ್ ಆಗಿ ರೂಪಿಸಬೇಕು. ಯಾರಾದರು ಅವರ ಮರ್ಯಾದೆಗೆ ಧಕ್ಕೆ ತರಲು ಮುಂದಾದರೆ ತಕ್ಕ ಉತ್ತರ ನೀಡಲು ಸಿದ್ದವಾಗಿರಬೇಕು. ನಾನು ಓದುವಾಗ ನನ್ನ ಪಟ್ಟಣದಲ್ಲಿ ಗೂಂಡಾಗಳಿಗೆ ಎಚ್ಚರಿಕೆ ನೀಡಿದ್ದೆ. ಯಾವುದೆ ಹುಡುಗಿಗೆ ಯಾರಾದರು ಚುಡಾಯಿಸಿದರೆ ಅದು ತನ್ನನ್ನೆ ಚುಡಾಯಿಸಿದಂತಾಗಲಿದೆ ಎಂದು ಎಚ್ಚರಿಸಿದ್ದೆ. ಹಾಗಾಗಿ ನನ್ನ ಪಟ್ಟಣದಲ್ಲಿ ಈಗಲು ಹುಡುಗಿಯರನ್ನು ಯಾರು ಚೇಡಿಸುವುದಿಲ್ಲ. ಈ ರೀತಿ ಹೆಣ್ಮಕ್ಕಳನ್ನು ಬೆಳೆಸಿದರೆ ಲವ್ ಜಿಹಾದ್ ವಿರುದ್ಧ ನಮ್ಮ ನಾರಿ ಶಕ್ತಿಯೆ ಉತ್ತರ ನೀಡಲಿದೆ.
10 ನಮ್ಮ ದೇಶದ, ಧರ್ಮದ ರಕ್ಷಣೆಗೆ ಸದಾ ಸಿದ್ಧವಾಗರಬೇಕಿದೆ. ಶಸ್ತ್ರಾಸ್ತ್ರಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು. ಅವಶ್ಯತೆ ಎನಿಸಿದರೆ ಬಂದೂಕಿನ ಲೈಸೆನ್ಸ್ ಕೂಡ ಪಡೆದುಕೊಳ್ಳಿ. ಯಾರಾದರು ಸಮಸ್ಯೆ ಮಾಡಿದರೆ ಪ್ರತ್ಯುತ್ತರ ನೀಡಬೇಕು.
11 ಸಿಎಎ ಜಾರಿಗೊಳಿಸಿದಾಗ ವಿರೋಧ ವ್ಯಕ್ತವಾಗಬಾರದಿತ್ತು. ಆದರೆ ದೆಹಲಿಯಲ್ಲಿ ಕ್ಯಾಂಪ್ ನಿರ್ಮಿಸಿಕೊಂಡು ಹೋರಾಟ ಮಾಡಿದರು. ದೇಶಾದ್ಯಂತ ವಿರೋಧ ವ್ಯಕ್ತಪಡಿಸಿರು. ಈಗ ಸಾಮಾನ ನಾಗರಿಕ ಸಂಹಿತೆ ಕುರಿತು ಚರ್ಚೆಯಾಗುತ್ತಿದೆ. ಜನಸಂಖ್ಯೆ ನಿಯಂತ್ರಣ ಮಾಡಬೇಕಿದೆ. ಆದರೆ ಇದನ್ನು ಬೇರೆ ಯಾರನ್ನೋ ಗುರಿಯಾಸಿಕೊಂಡು ಮಾಡಲಾಗುತ್ತಿದೆ ಎಂದು ಹೇಳಿಕೊಂಡು ಓಡಾಡುತ್ತಿರುವವರಿದ್ದಾರೆ.
12 ಹಿಂದೂ ರಾಷ್ಟ್ರ ನಿರ್ಮಾಣವಾದರೆ ಎಲ್ಲರು ಸುಖ, ನೆಮ್ಮದಿಯಿಂದ ಜೀವನ ನಡೆಸಬಹುದಾಗಿದೆ. ಆದರೆ ಜನಸಂಖ್ಯೆ ನಿಯಂತ್ರಣ ಆಗಲೆಬೇಕಿದೆ. ಆಗ ಮಾತ್ರ ಎಲ್ಲರು ಸುರಕ್ಷಿತವಾಗಿ, ಸಮೃದ್ಧಿಯಿಂದ ಇರಬಹುದಾಗಿದೆ.
ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಅಂತಾ ನ್ಯೂಸ್ ಚಾನೆಲ್ ದುನಿಯಾದಿಂದ ಹೊರ ಬಂದು ಶಿವಮೊಗ್ಗ ಲೈವ್ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್’ಗಳ ಬೆಂಗಳೂರು ಕಚೇರಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ.
ಈ ಫೀಲ್ಡಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಅನುಭವವಿದೆ. ಹಾಗಾಗಿ ಪೇಪರ್, ಟಿವಿಗಳಿಗಿಂತಲೂ ವಿಭಿನ್ನವಾಗಿ ಸುದ್ದಿ ಕೊಡಬೇಕು ಅನ್ನುವ ಹಂಬಲ. ಅದರ ಪ್ರಯತ್ನ ನಿರಂತರವಾಗಿದೆ.ಕ್ವಾಲಿಟಿ ಮತ್ತು ನಿಖರತೆಗೆ ಮೊದಲ ಆದ್ಯತೆ. ಸುದ್ದಿಯ ಒಳಗೆ ನನ್ನ ಅಭಿಪ್ರಾಯ ಹೇರುವುದಕ್ಕೆ ಇಷ್ಟವಿಲ್ಲ. ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡಬೇಕು ಎಂಬುದು ನನ್ನ ವಾದ. ಹೀಗಿದ್ದೂ ಕೆಲವೊಮ್ಮೆ ಸುದ್ದಿ ಕೆಳಗೆ ‘ಡ್ಯಾಷ್ ಡ್ಯಾಷ್ ಡ್ಯಾಷ್’ ಅಂತೆಲ್ಲ ಕಮೆಂಟುಗಳು ಬರುತ್ತವೆ. ಆರಂಭದಲ್ಲಿದ್ದ ಟೆಂಪರ್ ಈಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಲ್ಲ..!ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ. ಇನ್ನಷ್ಟು ವಿಭಿನ್ನ ಪ್ರಯತ್ನಗಳು, ನಮ್ಮೂರನ್ನು ಮತ್ತಷ್ಟು ಸುತ್ತಬೇಕು, ನಮ್ಮೂರ ಬಗ್ಗೆ ತಿಳಿದು ಜನರಿಗೆಲ್ಲ ತಿಳಿಸಬೇಕು ಅನ್ನುವ ತವಕವಿದೆ.ಅಂದಹಾಗೆ, ಹೊಸ ಐಡಿಯಾಗಳಿದ್ದರೆ, ಸಲಹೆಗಳಿದ್ದರೆ ತಿಳಿಸಿ.. ‘ಡ್ಯಾಷ್ ಡ್ಯಾಷ್’ ಬಯ್ಯೋದಿದ್ದರೆ ದಯವಿಟ್ಟು ವಾಟ್ಸಪ್’ನಲ್ಲಿ ಮೆಸೇಜು ಮಾಡಿ, ಸಾಕು..! ನನ್ನ ಮೊಬೈಲ್ ನಂಬರ್ 9964634494. ಸಿಕ್ಕಾಗ ತಪ್ಪದೆ ಮಾತಾಡಿಸಿ. ನಿಮ್ಮ ಸ್ನೇಹ ನಂಗೆ ಅಮೂಲ್ಯ.ಶಿವಮೊಗ್ಗದ ಸುದ್ದಿಗಾಗಿ ನಿರಂತರವಾಗಿ ಶಿವಮೊಗ್ಗ ಲೈವ್.ಕಾಂ ಓದುತ್ತಿರಿ