ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE | 5 AUGUST 2023
SHIMOGA : ಕ್ಯಾಂಟೀನ್ನಲ್ಲಿ ಟೀ ಮತ್ತು ಸಿಗರೇಟ್ನ ಹಣ ಕೇಳಿದ ಮಾಲೀಕನ ಮೇಲೆ ಗ್ರಾಹಕನೊಬ್ಬ ಹಲ್ಲೆ ನಡೆಸಿದ್ದಾನೆ. ಟೀ ಗ್ಲಾಸ್ನಿಂದಲೇ (Tea Glass) ಕ್ಯಾಂಟೀನ್ ಮಾಲೀಕನ ತಲೆಗೆ ಹೊಡೆದು ಗಾಯಗೊಳಿಸಿದ್ದಾನೆ.

ಹಳೆ ಮಂಡ್ಲಿಯ ಅಮೃತ ರೈಸ್ ಮಿಲ್ ಸಮೀಪ ಇರುವ ಸಯ್ಯದ್ ನಜರುಲ್ಲಾ ಎಂಬುವವರ ಟೀ ಕ್ಯಾಂಟೀನ್ನಲ್ಲಿ ಘಟನೆ ಸಂಭವಿಸಿದೆ. ಅಜೀಜ್ ಖಾನ್ ಎಂಬಾತ ಕ್ಯಾಂಟೀನ್ಗೆ ಬಂದು ಟೀ ಕುಡಿದು, ಸಿಗರೇಟ್ ಪಡೆದು ಸೇದಿದ್ದಾನೆ. ಹಣ ಕೇಳಿದಾಗ ಮಾಲೀಕ ಸಯ್ಯದ್ ನಜರುಲ್ಲಾ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ – ಕೆಎಸ್ಆರ್ಟಿಸಿ ಬಸ್ ಪಲ್ಟಿ, ತಪ್ಪಿತು ದೊಡ್ಡ ಅನಾಹುತ, ಘಟನೆಗೆ ಕಾರಣವೇನು?
ಅಜೀಜ್ ಖಾನ್ ಗಾಜಿನ ಟೀ ಗ್ಲಾಸ್ನಿಂದ (Tea Glass) ಮಾಲೀಕನ ತಲೆಗೆ ಹೊಡೆದಿದ್ದಾನೆ. ಕೊರಳ ಪಟ್ಟಿ ಹಿಡಿದು ತಲೆಗೆ ಡಿಚ್ಚಿ ಹೊಡೆದಿದ್ದಾನೆ. ಕ್ಯಾಂಟೀನ್ ಒಳಗೆ ನುಗ್ಗಿ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿ ನಷ್ಟ ಉಂಟು ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
.jpeg)
LATEST NEWS
- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್ 2026 – ಅಡಿಕೆ ಧಾರಣೆ

- ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

- ಬೆಳಗ್ಗೆ ಲೇಔಟ್ಗೆ ಬಂದ ಲೆಕ್ಚರರ್ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್

- ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

- ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು















