SHIVAMOGGA LIVE NEWS | 1 SEPTEMBER 2023
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
SHIMOGA: ಸಾಲ ಪಡೆದವರಿಂದ ಪ್ರತಿ ತಿಂಗಳು ಕಂತು ಹಣ ಪಡೆದು ಫೈನಾನ್ಸ್ ಸಂಸ್ಥೆಗೆ ಪಾವತಿಸದೆ ರಿಕವರಿ ಆಫೀಸರ್ (Recovery Officer) ಒಬ್ಬಾತ ವಂಚನೆ ಮಾಡಿದ್ದಾನೆ. ಆತನ ವಿರುದ್ಧ ಫೈನಾನ್ಸ್ ಸಂಸ್ಥೆಯ ಬ್ರಾಂಚ್ ಮ್ಯಾನೇಜರ್ ದೂರು ನೀಡಿದ್ದಾರೆ.
ವಿನಾಯಕ ನಗರದಲ್ಲಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಯಲ್ಲಿ ಘಟನೆ ಸಂಭವಿಸಿದೆ. ಮಹಿಳಾ ಸ್ವ ಸಹಾಯ ಸಂಘಗಳಿಗೆ ಈ ಸಂಸ್ಥೆ ಸಾಲ ಒದಗಿಸುತ್ತಿತ್ತು. ಸಾಲದ ಹಣ ವಸೂಲಿಗೆ ರಿಕವರಿ ಆಫೀಸರ್ಗಳನ್ನು ನೇಮಿಸಲಾಗಿದೆ. ಮಾರುತಿ ಎಂಬಾತ ಈ ಸಂಸ್ಥೆಯಲ್ಲಿ 2022ರಿಂದ ರಿಕವರಿ ಆಫೀಸರ್ (Recovery Officer) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ.
ಇದನ್ನೂ ಓದಿ – ಸೇನೆ ಸೇರುವ ಆಸಕ್ತರಿಗೆ ಉಚಿತ ತರಬೇತಿ, ಅರ್ಜಿ ಆಹ್ವಾನ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಸಾಲ ಪಡೆದಿದ್ದ 27 ಮಹಿಳೆಯರಿಂದ ಪ್ರತಿ ತಿಂಗಳು ಸಾಲದ ಕಂತು ಹಣವನ್ನು ಈತ ವಸೂಲಿ ಮಾಡಿದ್ದ. ಆ ಹಣವನ್ನು ಸಂಸ್ಥೆಗೆ ಕಟ್ಟುವ ಬದಲು ಗೂಗಲ್ ಪೇ ಮೂಲಕ ತನ್ನ ಸ್ವಂತ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದ ಎಂದು ಆರೋಪಿಸಲಾಗಿದೆ. 2023ರ ಜನವರಿ ತಿಂಗಳಿಂದ 92,525 ರೂ. ಹಣವನ್ನು ವಂಚಿಸಿದ್ದಾನೆ ಎಂದು ಆಪಾದಿಸಿ ಬ್ರಾಂಚ್ ಮ್ಯಾನೇಜರ್ ಶಫಿಉಲ್ಲಾ ಅವರು ದೂರು ನೀಡಿದ್ದಾರೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
LATEST NEWS
- ಶಿವಮೊಗ್ಗ ಸಿಟಿಯ ವಿವಿಧೆಡೆ ಫೆಬ್ರವರಿ 6, 7ರಂದು ಕರೆಂಟ್ ಇರಲ್ಲ, ಎಲ್ಲೆಲ್ಲಿ? ಕಾರಣವೇನು?

- ಶಿವಮೊಗ್ಗ, ಭದ್ರಾವತಿಯಲ್ಲಿ ತುಸು ತಗ್ಗಿದ ತಾಪಮಾನ, ಉಳಿದ ತಾಲೂಕುಗಳಲ್ಲಿ ಹೇಗಿರಲಿದೆ?

- ಪೂಜಾ ಗೌಡ ನಂಬಿ ಅರ್ಧ ಕೋಟಿ ಹಣ ಕಳೆದುಕೊಂಡ ಶಿವಮೊಗ್ಗದ ಸೇಲ್ಸ್ಮನ್, ಆಗಿದ್ದೇನು?

- ಇವತ್ತು ಸಂಕಷ್ಟ ಚತುರ್ಥಿ, ಒಳ್ಳೆ ಸಮಯ ಎಷ್ಟೊತ್ತಿಗಿದೆ? – ಇಂದಿನ ಪಂಚಾಂಗ

- ಉಪನ್ಯಾಸಕಿಗೆ ವಿಡಿಯೋ ಕರೆ ಮಾಡಿ ಅಶ್ಲೀಲ ವರ್ತನೆ, ದಾಖಲಾಯ್ತು ಕೇಸ್, ಏನಿದು ಪ್ರಕರಣ?

About The Editor
ನಿತಿನ್ ಆರ್.ಕೈದೊಟ್ಲು





