ಡಾಬರ್‌ ಮ್ಯಾನ್‌ ನಾಯಿ ಎಳೆದೊಯ್ದು ಅರೆಬರೆ ತಿಂದ ಚಿರತೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 20 OCTOBER 2023

BHADRAVATHI : ಮನೆ ಮುಂದೆ ಕಟ್ಟಿದ್ದ ಡಾಬರ್‌ ಮ್ಯಾನ್‌ ನಾಯಿಯನ್ನು ಎಳೆದೊಯ್ದಿರುವ ಚಿರತೆಯೊಂದು (Leopard) ಅರೆಬರೆ ತಿಂದು ಪರಾರಿಯಾಗಿದೆ. ಭದ್ರಾವತಿ ತಾಲೂಕು ಕಾರೇಹಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಧನಂಜಯ ಎಂಬುವವರ ಮನೆ ಮುಂದೆ ಕಟ್ಟಿದ್ದ ನಾಯಿ ಮೇಲೆ ಚಿರತೆ ದಾಳಿ ನಡೆಸಿದೆ.

ಇದನ್ನೂ ಓದಿ- ಸಿಗಂದೂರು ಚೌಡೇಶ್ವರಿ ಸೇರಿ ನವದೇವಿ ದರ್ಶನ, ಭದ್ರಾವತಿ FMನಲ್ಲಿ ನವರಾತ್ರಿ ವಿಶೇಷ ಕಾರ್ಯಕ್ರಮ, ಟೈಮಿಂಗ್‌ ಏನು?

ಡಾಬರ್‌ ಮ್ಯಾನ್‌ ನಾಯಿಯನ್ನು ಚೈನ್ ಹಾಕಿ ಮನೆ ಮುಂದೆ ಕಟ್ಟಲಾಗಿತ್ತು. ರಾತ್ರಿ ಹೊತ್ತಲ್ಲಿ ದಾಳಿ ನಡೆಸಿದ ಚಿರತೆ ಚೈನ್‌ ಸಹಿತ ನಾಯಿಯನ್ನು ತೋಟದತ್ತ ಎಳೆದೊಯ್ದಿದೆ. ಇತರೆ ನಾಯಿಗಳು ಬೊಗಳುವುದನ್ನು ಕೇಳಿ ಮನೆಯವರು ಹೊರಗೆ ಬಂದಾಗ ನಾಯಿ ಕಾಣಿಸಲಿಲ್ಲ. ಮನೆಯಿಂದ ಸ್ವಲ್ಪ ದೂರದಲ್ಲಿ ನಾಯಿಯನ್ನು ಅರೆಬರೆ ತಿಂದು ಬಿಟ್ಟಿರುವುದು ಕಂಡುಬಂದಿದೆ. ಧನಂಜಯ ಅವರು ಕೂಡಲೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment