ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 1 NOVEMBER 2023
SHIMOGA : ಗೋವಾ, ಹೈದರಾಬಾದ್ ಮತ್ತು ತಿರುಪತಿಗೆ ಶಿವಮೊಗ್ಗದಿಂದ ನೇರ ಸಂಪರ್ಕ ಕಲ್ಪಿಸಲು ಸಜ್ಜಾಗಿರುವ ಸ್ಟಾರ್ ಏರ್ (Star air) ಸಂಸ್ಥೆ ವೇಳಾಪಟ್ಟಿ ಪ್ರಕಟಿಸಿದೆ. ಅಲ್ಲದೆ ಟಿಕೆಟ್ ದರವನ್ನು ಕೂಡ ಘೋಷಿಸಿದೆ.
ವೇಳಾಪಟ್ಟಿ ವಿವರ
ಶಿವಮೊಗ್ಗ – ಹೈದರಾಬಾದ್ ಮಾರ್ಗ
ಮಂಗಳವಾರ, ಬುಧವಾರ, ಗುರುವಾರ, ಶನಿವಾರ : ಹೈದರಾಬಾದ್ನಿಂದ ಬೆಳಗ್ಗೆ 9.30ಕ್ಕೆ ನಿರ್ಗಮನ, ಬೆಳಗ್ಗೆ 10.35ಕ್ಕೆ ಶಿವಮೊಗ್ಗಕ್ಕೆ ಆಗಮನ.
ಮಂಗಳವಾರ, ಗುರುವಾರ, ಶನಿವಾರ : ಶಿವಮೊಗ್ಗದಿಂದ ಸಂಜೆ 4.30ಕ್ಕೆ ನಿರ್ಗಮನ, ಸಂಜೆ 5.35ಕ್ಕೆ ಹೈದರಾಬಾದ್ ತಲುಪಲಿದೆ. ಬುಧವಾರ ಸಂಜೆ ಶಿವಮೊಗ್ಗದಿಂದ 4.30ಕ್ಕೆ ನಿರ್ಗಮನ. ಸಂಜೆ 5.25ಕ್ಕೆ ಹೈದರಾಬಾದ್ ತಲುಪಲಿದೆ.
ಶಿವಮೊಗ್ಗ – ಗೋವಾ ಮಾರ್ಗ
ಮಂಗಳವಾರ, ಗುರುವಾರ, ಶನಿವಾರ : ಶಿವಮೊಗ್ಗದಿಂದ ಮಧ್ಯಾಹ್ನ 1.55ಕ್ಕೆ ನಿರ್ಗಮನ. ಮಧ್ಯಾಹ್ನ 2.45ಕ್ಕೆ ಗೋವಾ. ಬುಧವಾರ ಮಾತ್ರ ಬೆಳಗ್ಗೆ 11.10ಕ್ಕೆ ಶಿವಮೊಗ್ಗದಿಂದ ನಿರ್ಗಮನ. ಬೆಳಗ್ಗೆ 11.50ಕ್ಕೆ ಗೋವಾ.
ಮಂಗಳವಾರ, ಗುರುವಾರ, ಶನಿವಾರ : ಮಧ್ಯಾಹ್ನ 3.15ಕ್ಕೆ ಗೋವಾದಿಂದ ನಿರ್ಗಮನ. ಸಂಜೆ 4.05ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ. ಬುಧವಾರ ಮಾತ್ರ ಮಧ್ಯಾಹ್ನ 12.20ಕ್ಕೆ ಗೋವಾದಿಂದ ನಿರ್ಗಮನ. ಮಧ್ಯಾಹ್ನ 1.10ಕ್ಕೆ ಶಿವಮೊಗ್ಗಕ್ಕೆ ಆಗಮನ.
ಇದನ್ನೂ ಓದಿ- ಸಾಗರದ ಚಿದಂಬರರಾವ್ ಜಂಬೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಇಲ್ಲಿದೆ ಇವರ ಬಗ್ಗೆ ಗೊತ್ತಿರಬೇಕಾದ 4 ಸಂಗತಿ
ಶಿವಮೊಗ್ಗ – ತಿರುಪತಿ ಮಾರ್ಗ
ಮಂಗಳವಾರ, ಗುರುವಾರ, ಶನಿವಾರ : ಶಿವಮೊಗ್ಗದಿಂದ ಬೆಳಗ್ಗೆ 11 ಗಂಟೆಗೆ ನಿರ್ಗಮನ. ಮಧ್ಯಾಹ್ನ 12 ಗಂಟೆಗೆ ತಿರುಪತಿಗೆ ತಲುಪಲಿದೆ. ಬುಧವಾರ ಮಾತ್ರ ಮಧ್ಯಾಹ್ನ 1.40ಕ್ಕೆ ಶಿವಮೊಗ್ಗದಿಂದ ನಿರ್ಗಮನ. ಮಧ್ಯಾಹ್ನ 2.35ಕ್ಕೆ ತಿರುಪತಿಗೆ ತಲುಪಲಿದೆ.
ಮಂಗಳವಾರ, ಗುರುವಾರ, ಶನಿವಾರ : ತಿರುಪತಿಯಿಂದ ಮಧ್ಯಾಹ್ನ 12.35ಕ್ಕೆ ಹೊರಡಲಿದೆ. ಮಧ್ಯಾಹ್ನ 1.40ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ. ಬುಧವಾರ ಮಾತ್ರ ಮಧ್ಯಾಹ್ನ 3.05ಕ್ಕೆ ತಿರುಪತಿಯಿಂದ ಹೊರಡಲಿದೆ. ಮಧಾಹ್ನ 3.55ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ.
ಟಿಕೆಟ್ ದರ ಪ್ರಕಟ
ನವೆಂಬರ್ 21ರಿಂದ ಶಿವಮೊಗ್ಗದಿಂದ ಹೈದರಾಬಾದ್, ಗೋವಾ, ತಿರುಪತಿ ಮಾರ್ಗದಲ್ಲಿ ಸ್ಟಾರ್ ಏರ್ (Star air) ವಿಮಾನ ಹಾರಾಟ ಆರಂಭಿಸಲಿದೆ. ಈ ಮೂರು ಮಾರ್ಗಕ್ಕು ಒಂದೇ ಪ್ರಯಾಣ ದರ ಪ್ರಕಟಿಸಲಾಗಿದೆ. ಎಲ್ಲಾ ತೆರಿಗೆ ಸಹಿತ ಟಿಕೆಟ್ ದರ 1999 ರೂ. ನಿಂದ ಪ್ರಾರಂಭವಾಗಲಿದೆ ಎಂದು ಸ್ಟಾರ್ ಏರ್ ಪ್ರಕಟಿಸಿದೆ.
ಶಿವಮೊಗ್ಗದಲ್ಲಿ ಹೆಚ್ಚಿನ ಮಾಹಿತಿ ಮತ್ತು ಟಿಕೆಟ್ ಬುಕಿಂಗ್ಗೆ ಮೊ . 8123002917, 9449502917
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






