ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ, ಜಯನಗರಕ್ಕೆ ಸಿದ್ದೇಗೌಡ, ರಿಲೀವ್‌ ಆಗ್ತಾರಾ ಅಂಜನ್‌ ಕುಮಾರ್‌?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

Shivamogga-Live-Number-1-Website

SHIVAMOGGA LIVE NEWS | 18 NOVEMBER 2023

SHIMOGA : ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಿಗೆ ನೂತನ ಇನ್ಸ್‌ಪೆಕ್ಟರ್‌ಗಳನ್ನು (Inspectors) ನಿಯೋಜನೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಜಿಲ್ಲೆಯಲ್ಲಿ ಖಾಲಿ ಉಳಿದಿದ್ದ ಇನ್ಸ್‌ಪೆಕ್ಟರ್‌ ಹುದ್ದೆಗಳು ಭರ್ತಿಯಾಗಿವೆ.

ಯಾವ್ಯಾವ ಠಾಣೆಗೆ ಯಾರು ವರ್ಗಾವಣೆ?

ದೊಡ್ಡಪೇಟೆ ಪೊಲೀಸ್‌ ಠಾಣೆ : ಸಿಐಡಿಯಿಂದ ರವಿ ಸಂಗನಗೌಡ ಪಾಟೀಲ್‌ ಅವರನ್ನು ವರ್ಗಾಯಿಸಲಾಗಿದೆ. ಹಾಗಾಗಿ ಬೆಂಗಳೂರಿಗೆ ವರ್ಗಾವಾದರೂ ರಿಲೀವ್‌ ಆಗದೆ ಉಳಿದಿದ್ದ ಇನ್ಸ್‌ಪೆಕ್ಟರ್‌ ಅಂಜನ್‌ ಕುಮಾರ್‌ ಈಗ ರಿಲೀವ್‌ ಆಗಲಿದ್ದಾರೆ.

ಕೋಟೆ ಪೊಲೀಸ್‌ ಠಾಣೆ : ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದ ಚಂದ್ರಶೇಖರ್‌ ಎನ್.ಹರಿಹರ ಅವರನ್ನು ವರ್ಗಾಯಿಸಲಾಗಿದೆ.

ಇದನ್ನೂ ಓದಿ- ಜೈಲ್‌ ರಸ್ತೆ ಕರ್ಮಕಾಂಡ, 6 ತಿಂಗಳಿಗು ಹೆಚ್ಚು ಕಾಲ ನಡೆಯಿತು ಕಾಮಗಾರಿ, ಕೆಲವೇ ತಿಂಗಳಲ್ಲಿ ಬಿತ್ತು ಗುಂಡಿ

ಜಯನಗರ ಪೊಲೀಸ್‌ ಠಾಣೆ : ಖಾನಾಪುರ ಪೊಲೀಸ್‌ ಟ್ರೇನಿಂಗ್‌ ಸ್ಕೂಲ್‌ಗೆ ವರ್ಗಾವಣೆ ಆದೇಶದಲ್ಲಿದ್ದ ಹೆಚ್.ಎಂ.ಸಿದ್ದೇಗೌಡ ಅವರನ್ನು ವರ್ಗಾಯಿಸಲಾಗಿದೆ. ಈ ಹಿಂದೆ ಶಿವಮೊಗ್ಗ ಸಂಚಾರ ಠಾಣೆ ಇನ್ಸ್‌ಪೆಕ್ಟರ್‌ ಆಗಿ ಜವಾಬ್ದಾರಿ ನಿಭಾಯಿಸಿದ್ದರು.

ಸಾಗರ ಗ್ರಾಮಾಂತರ ಠಾಣೆ : ಐಎಸ್‌ಡಿ ಇನ್ಸ್‌ಪೆಕ್ಟರ್‌ ಆಗಿ ವರ್ಗಾವಣೆ ಆದೇಶದಲ್ಲಿದ್ದ ಸಿ.ಇ.ರೋಹಿತ್‌ ಅವರನ್ನು ವರ್ಗಾಯಿಸಲಾಗಿದೆ.

ಇನ್ನು, ಶಿವಮೊಗ್ಗದ ಡಿಸಿಆರ್‌ಬಿ ಡಿವೈಎಸ್‌ಪಿ ಆಗಿದ್ದ ಡಿ.ಟಿ.ಪ್ರಭು ಅವರನ್ನು ಸಿಐಡಿಗೆ ವರ್ಗಾಯಿಸಲಾಗಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : November 18, 2023

Leave a Comment