SHIVAMOGGA LIVE NEWS | 19 MARCH 2024
SHIMOGA : ಬಂಡಾಯದ ಬಾವುಟ ಹಾರಿಸಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಠ, ಮಂದಿರ ಭೇಟಿ ಮುಂದುವರೆಸಿದ್ದಾರೆ. ಅಲ್ಲಲ್ಲಿ ಬೆಂಬಲಿಗರನ್ನು ಭೇಟಿಯಾಗಿ ಚುನಾವಣೆ ಕುರಿತು ಚರ್ಚೆ ನಡೆಸಿದ್ದಾರೆ.
ಈಶ್ವರಪ್ಪ ಅವರು ಇವತ್ತು ಸಿಗಂದೂರು ಶ್ರೀ ಚೌಡೇಶ್ವರಿ ಸನ್ನಿಧಿಗೆ ತೆರಳಿ ದೇವಿಯ ದರ್ಶನ ಪಡೆದರು. ಧರ್ಮದರ್ಶಿ ರಾಮಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇನ್ನು, ಹುಂಚ ಜೈನ ಮಠಕ್ಕೆ ಭೇಟಿ ನೀಡಿ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಅವರೊಂದಿಗೆ ಚರ್ಚೆ ನಡೆಸಿದರು.
ಸಾಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ‘ನಿನ್ನೆ 12 ಮಠಾಧಿಪತಿಗಳನ್ನು ಭೇಟಿಯಾಗಿದ್ದೆ. ನೀವು ಹಿಂದುತ್ವದ ಪರವಾಗಿದ್ದೀರ. ಆದ್ದರಿಂದ ತಮ್ಮ ಬೆಂಬಲವಿದೆ ಎಂದು ಮಠಾಧೀಶರು ತಿಳಿಸಿದ್ದಾರೆ. ಈಗ ಸಿಗಂದೂರು ಚೌಡೇಶ್ವರಿ ಆಶೀರ್ವಾದ ಪಡೆದಿದ್ದೇನೆ. ಈ ಭಾಗದಲ್ಲಿಯು ಜನರು ತಮಗೆ ಬೆಂಬಲ ವ್ಯಕ್ತಪಡಿಸಿದ್ದಾರೆ’ ಎಂದು ತಿಳಿಸಿದರು.
ಪುತ್ರ ಕೆ.ಇ.ಕಾಂತೇಶ್ ಸೇರಿದಂತೆ ಹಲವು ಪ್ರಮುಖರು ಈಶ್ವರಪ್ಪ ಅವರೊಂದಿಗೆ ಇದ್ದರು.
ಇದನ್ನೂ ಓದಿ – ಮೋದಿ ಕಾರ್ಯಕ್ರಮಕ್ಕೆ ಬರಲ್ಲ ಅಂದುಕೊಂಡವರು ಬಂದರು, ಬರುತ್ತಾರೆ ಅಂದುಕೊಂಡವರು ಬರಲೇ ಇಲ್ಲ