ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 11 APRIL 2024
SHIMOGA : ಓಂ ಶಕ್ತಿ ಭಕ್ತರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದು ಓಂ ಶಕ್ತಿ ದೇಗುಲ ಟ್ರಸ್ಟಿ ತಿಳಿಸಿದ್ದಾರೆ.
‘ವಹಿವಾಟಿನ ತನಿಖೆ ಆಗಬೇಕಿದೆ’
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಓಂ ಶಕ್ತಿ ದೇವಸ್ಥಾನದ ಟ್ರಸ್ಟ್ನ ಟ್ರಸ್ಟಿ ಸುಬ್ರಹ್ಮಣಿ, ಕೆ.ಈ. ಕಾಂತೇಶ್ ಅಧ್ಯಕ್ಷರಾಗಿರುವ ಟ್ರಸ್ಟ್ನಲ್ಲಿ ಅನೇಕ ವಿವಾದಗಳಿವೆ. ಕಳೆದ 13 ವರ್ಷಗಳಿಂದ ಲೆಕ್ಕಪತ್ರಗಳ ಆಡಿಟ್ ಮಾಡಿಸಿಲ್ಲ. ನಾವೇ ಖರ್ಚು ಕೊಟ್ಟು ಓಂ ಶಕ್ತಿ ಯಾತ್ರೆಗೆ ಮಹಿಳೆಯರನ್ನು ಕರೆದುಕೊಂಡು ಹೋಗುತ್ತೇವೆ ಎಂದು ಬಿಂಬಿಸಲಾಗಿದೆ. ವಾಸ್ತವವಾಗಿ ಪ್ರತಿ ಮಹಿಳೆಯರಿಂದ 2 ಸಾವಿರ ರೂ. ಹಣ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ – ಬಸ್ ಹತ್ತಿ ಕುಟುಂಬದವರಿಗೆ ಕರೆ ಮಾಡಲು ಮುಂದಾದ ಮಹಿಳೆಗೆ ಕಾದಿತ್ತು ದೊಡ್ಡ ಆಘಾತ, ಆಗಿದ್ದೇನು?
ಬಿಜೆಪಿ ಮುಖಂಡರು ಸಹಾಯ ಮಾಡಿದ್ದಾರೆ
ಇನ್ನು, ಹಲವು ವರ್ಷಗಳಿಂದ ತಮಿಳು ಸಮಾಜದ ಮಹಿಳೆಯರನ್ನು ಓಂ ಶಕ್ತಿ ಯಾತ್ರೆಗೆ ಕರೆದುಕೊಂಡು ಹೋಗುತ್ತಿರುವುದು ನಿಜ. ಈಶ್ವರಪ್ಪ ಮತ್ತು ಅವರ ಪುತ್ರ ಕಾಂತೇಶ್ ಅವರು ಯಾತ್ರೆಯನ್ನು ಬಿಜೆಪಿ ಹೆಸರಿನಲ್ಲಿಯೆ ಮಾಡುತ್ತಿದ್ದರು. ರಾಜಕೀಯ ಮುಖಂಡರು ವಿಶೇಷವಾಗಿ ಬಿಜೆಪಿ ಮುಖಂಡರು ದೇವಸ್ಥಾನಕ್ಕೆ ಧನಸಹಾಯ ಮಾಡಿದ್ದಾರೆ. ಆದ್ದರಿಂದ ಬಿಜೆಪಿಗೆ ತಮ್ಮ ಬೆಂಬಲ ಎಂದು ಸುಬ್ರಹ್ಮಣಿ ತಿಳಿಸಿದರು.
ಕುಮಾರ್, ಮಣಿಕಂಠ, ಮುರುಗನ್, ದಿನೇಶ್, ಸೆಲ್ವಂ, ವೆಂಕಟೇಶ್ ಸುದ್ದಿಗೋಷ್ಠಿಯಲ್ಲಿದ್ದರು.
ಇದನ್ನೂ ಓದಿ – ತುಂಗಾ – ಭದ್ರ ಸಂಗಮದಲ್ಲಿ ಹೊಳೆ ಜಾತ್ರೆ, ಸಾವಿರ ಸಾವಿರ ಭಕ್ತರು ಭಾಗಿ, ಹೇಗಿತ್ತು ವೈಭವ?
LATEST NEWS
- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

- ₹1,00,000 ಲಂಚದ ಹಣದೊಂದಿಗೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಅಧಿಕಾರಿ, ಮಧ್ಯವರ್ತಿ

- ಸರಕು ರೇಟ್ ಕುಸಿತ, ಉಳಿದ ಮಾದರಿ ಅಡಿಕೆ ರೇಟ್ ಎಷ್ಟಿದೆ? | 2 ಮಾರ್ಚ್ 2026

- ಮಾರಿಕಾಂಬ ಜಾತ್ರೆಯಲ್ಲಿ ಕಳೆದು ಹೋದ ವೃದ್ಧೆ, ಪತ್ತೆ ಮಾಡಿ ಮನೆಗೆ ಬಿಟ್ಟು ಬಂದ ಪೊಲೀಸ್, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು






