ಸಿಗಂದೂರು ಲಾಂಚ್‌, ಹೊಳೆಬಾಗಿಲಲ್ಲಿ ರೈತರಿಂದ ಪ್ರತಿಭಟನೆ, ಕಾರಣವೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SAGARA NEWS, 12 NOVEMBER 2024 : ಸಿಗಂದೂರು ಲಾಂಚ್‌ನಲ್ಲಿ (Launch) ರೈತ ಮುಖಂಡರೊಬ್ಬರ ವಿರುದ್ಧ ಲಾಂಚ್‌ ಮತ್ತು ಟ್ಯಾಕ್ಸಿ ಚಾಲಕರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ರೈತ ಸಂಘದ (ಹೆಚ್.ಗಣಪತಿಯಪ್ಪ ಸ್ಥಾಪಿತ) ಜಿಲ್ಲಾ ಘಟಕದ ವತಿಯಿಂದ ಹೊಳೆಬಾಗಿಲು ಲಾಂಚ್‌ ತಟದಲ್ಲಿ ಪ್ರತಿಭಟನೆ ನಡೆಸಲಾಯಿತು.

ರೈತ ಸಂಘದ ಆರೋಪವೇನು?

ಜಿಲ್ಲಾ ರೈತ ಸಂಘದ ಮುಖಂಡರೊಬ್ಬರು ಹೊಳೆಬಾಗಿಲು ಮೂಲಕ ಬ್ಯಾಕೋಡಿಗೆ ಶನಿವಾರ ಬಂದು, ಪುನಃ ಮರಳುವಾಗ ಅವರ ವಾಹನವನ್ನು ಲಾಂಚ್‌ಗೆ ಹಾಕುವ ವಿಚಾರದಲ್ಲಿ ಸ್ಥಳೀಯ ವಾಹನ ಚಾಲಕರು ಮತ್ತು ಲಾಂಚ್ ಸಿಬ್ಬಂದಿ ಮಾತಿನ ಚಕಮಕಿ ನಡೆಸಿದ್ದಾರೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

Sigandur launch

ವಾಹನ ಚಾಲಕರು ಹೇಳುವುದೇನು?

ಆರೋಪ ಪ್ರತ್ಯಾರೋಪದ ಮಧ್ಯೆ ವಾಹನ ಚಾಲಕರ ಸಂಘಟನೆಯ ಮುಖ್ಯಸ್ಥರು ಪ್ರತಿಕ್ರಿಯೆ ನೀಡಿದ್ದು, ರೈತ ಸಂಘದ ಮುಖಂಡರನ್ನು ಅವಮಾನಿಸುವಂತಹ ಯಾವುದೇ ಅಹಿತಕರ ಘಟನೆಗಳು ಅಂದು ನಡೆದಿಲ್ಲ ಎಂದರು.

-farmers-protest-against-launch-and-taxi.

ಮಾತುಕತೆ, ಪ್ರತಿಭಟನೆ ವಾಪಸ್‌

ಘಟನೆ ಸಂಬಂಧ ಟ್ಯಾಕ್ಸಿ ಚಾಲಕರು ಮತ್ತು ರೈತರ ಮುಖಂಡ ಮಧ್ಯೆ ಮಾತುಕತೆ ನಡೆಯಿತು. ಘಟನೆಗೆ ವಿಷಾದ ವ್ಯಕ್ತಪಡಿಸಿ ಪ್ರತಿಭಟನೆ ಹಿಂಪಡೆಯಲಾಯಿತು. ಕಾರ್ಗಲ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.

ಇದನ್ನೂ ಓದಿ » ಲಾರಿ, ಬಸ್‌ ಡಿಕ್ಕಿ, ರಸ್ತೆ ಬದಿಗೆ ಪಲ್ಟಿಯಾದ ಖಾಸಗಿ ಬಸ್

Leave a Comment