ರಿಪ್ಪನ್‌ಪೇಟೆ ಬಳಿ ಎರಡು ಮನೆಗಳ ಬಾಗಿಲು ಬೀಗ ಮುರಿದ ಕಳ್ಳರು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS, 3 DECEMBER 2024

ರಿಪ್ಪನ್‌ಪೇಟೆ : ಯಾರೂ ಇಲ್ಲದ ವೇಳೆ ಕಳ್ಳರು ಮನೆಯೊಳಗೆ ನುಗ್ಗಿ ಚಿನ್ನಾಭರಣ ಕಳ್ಳತನ (Theft) ಮಾಡಲಾಗಿದೆ. ಈ ಸಂಬಂಧ ರಿಪ್ಪನ್‌ಪೇಟೆ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಪ್ರಕರಣ 1

ಗ್ರಾಮ : ತಂಗಳವಾಡಿ, ಅರಸಾಳು

ಇಲ್ಲಿನ ಶ್ರೀನಥ್‌ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಶ್ರೀನಾಥ್‌ ಅವರ ತಾಯಿ ಹೊಸನಗರದ ಧರ್ಮಸ್ಥಳಕ್ಕೆ ಸಂಘಕ್ಕೆ ಹೋಗಿ ಹಿಂತಿರುಗಿದಾಗ ಮನೆ ಬಾಗಿಲಿನ ಲಾಕ್‌ ಮುರಿದಿರುವುದು ಗೊತ್ತಾಗಿದೆ. ಪರಿಶೀಲಿಸಿದಾಗ 36 ಸಾವಿರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ.

Crime-News-General-Image

ಪ್ರಕರಣ 2

ಗ್ರಾಮ : ಕಗ್ಗಲಿ, ತಳಲೆ

ಅಶೋಕ್‌ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಅಶೋಕ್‌ ರಿಪ್ಪನ್‌ಪೇಟೆಯಲ್ಲಿ ಗಾರೆ ಕೆಲಸಕ್ಕೆ ತೆರಳಿದ್ದರು. ಅವರ ಪತ್ನಿ ಗದ್ದೆ ಕೊಯ್ಲಿಗೆ ಹೋಗಿದ್ದರು. ಮನೆಗೆ ಹಿಂತಿರುಗಿದಾಗ ಬಾಗಿಲಿನ ಲಾಕ್‌ ಮುರಿದು 95,900 ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ.

ಇದನ್ನೂ ಓದಿ » ಹೊಳೆಹೊನ್ನೂರು ಬಳಿ ಎರಡು ಕಾರು, ಬೈಕ್‌ ಅಪಘಾತ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment