ಭದ್ರಾವತಿ ನಗರಸಭೆ ಮಾಜಿ ಸದಸ್ಯನ ತಲೆಗೆ ಮಚ್ಚಿನೇಟು

 ಶಿವಮೊಗ್ಗ  LIVE 

SHIVAMOGGA LIVE NEWS, 6 DECEMBER 2024

ಭದ್ರಾವತಿ : ಮದ್ಯ ಸೇವಿಸಿ ವಿದ್ಯುತ್‌ ದೀಪಗಳ ವಯರ್‌ ತುಂಡು ಮಾಡಿ, ರಸ್ತೆಯಲ್ಲಿ ಓಡಾಡುತ್ತಿದ್ದವರಿಗೆ ಅವಾಚ್ಯವಾಗಿ ನಿಂದಿಸುತ್ತಿದ್ದ ವ್ಯಕ್ತಿಗೆ ಬುದ್ದಿ ಹೇಳಿದ ನಗರಸಭೆ ಮಾಜಿ ಸದಸ್ಯನ (Member) ಮೇಲೆ ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ. ಭದ್ರಾವತಿಯ ಹೊಸ ಸಿದ್ದಾಪುರದಲ್ಲಿ ಘಟನೆಯಾಗಿದೆ.

ನಗರಸಭೆ ಮಾಜಿ ಸದಸ್ಯ ಅನಿಲ್‌ ಕುಮಾರ್‌ ತಲೆಗೆ ಮಚ್ಚಿನೇಟು ಬಿದ್ದಿದೆ. ರಾತ್ರಿ ವ್ಯಕ್ತಿಯೊಬ್ಬ ಮದ್ಯ ಸೇವಿಸಿ ವಿದ್ಯುತ್‌ ದೀಪಗಳ ವಯರ್‌ ತುಂಡು ಮಾಡುತ್ತಿದ್ದ. ಆಗ ಅನಿಲ್‌ ಕುಮಾರ್‌ ಅವರು ಆತನಿಗೆ ಬುದ್ದಿ ಹೇಳಿ ಕಳುಹಿಸಿದ್ದರು. ಮರುದಿನ ಬೆಳಗ್ಗೆ ಅನಿಲ್‌ ಕುಮಾರ್‌ ಮನೆ ಬಳಿ ಬಂದು ಮಚ್ಚು ಬೀಸಿದ್ದಾನೆ. ಅದು ಅನಿಲ್‌ ಕುಮಾರ್‌ ತಲೆಗೆ ತಗುಲಿ ಗಾಯಗೊಂಡಿದ್ದಾರೆ. ಕೂಡಲೆ ಅನಿಲ್‌ ಕುಮಾರ್‌ ಅವರನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಭದ್ರಾವತಿ ನ್ಯೂ ಟೌನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಗೆ ಹೊಸ ಪೊಲೀಸ್‌ ಠಾಣೆ, ಯಾವುದು? ಎಷ್ಟು ಸಿಬ್ಬಂದಿ ಇರ್ತಾರೆ?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment