ಕಾಶ್ಮೀರದಲ್ಲಿ ಶಿವಮೊಗ್ಗದ ರಿಯಲ್‌ ಎಸ್ಟೇಟ್‌ ಉದ್ಯಮಿ ಹತ್ಯೆ, ಪತ್ನಿ ಹೇಳಿದ್ದೇನು? ಇಲ್ಲಿದೆ ಪಾಯಿಂಟ್ಸ್‌

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
ಶಿವಮೊಗ್ಗ : ಕಾಶ್ಮೀರದ ಪ್ರವಾಸಿ ತಾಣದಲ್ಲಿ ಭಯೋತ್ಪಾದಕ ದಾಳಿಗೆ (attack) ಶಿವಮೊಗ್ಗದ ರಿಯಲ್‌ ಎಸ್ಟೇಟ್‌ ಉದ್ಯಮಿ ಮಂಜುನಾಥ್‌ ರಾವ್‌ ಸೇರಿದಂತೆ 28ಕ್ಕೂ ಹೆಚ್ಚು ಪ್ರವಾಸಿಗರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಘಟನೆ ಕುರಿತು ಮಂಜುನಾಥ್‌ ಅವರ ಪತ್ನಿ ಪಲ್ಲವಿ ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದರು.
➤ ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.

ಇದನ್ನೂ ಓದಿ » ಪುರಸಭೆಗೆ ಬಿಜೆಪಿಯ ಅಧ್ಯಕ್ಷ, ಕಾಂಗ್ರೆಸ್‌ನ ಉಪಾಧ್ಯಕ್ಷೆ, ಒಬ್ಬ ಬಿಜೆಪಿಯ ಸದಸ್ಯರಿಂದ ಕಾಂಗ್ರೆಸ್‌ ಪರ ಮತ

ಪಲ್ಲವಿ ಏನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್‌

point-1ಟೂರಿಸ್ಟ್‌ ಏಜೆನ್ಸಿ ಮೂಲಕ ನಾವು ಇಲ್ಲಿಗೆ ಬಂದಿದ್ದೆವು. ನಾನು, ಪತಿ ಮಂಜುನಾಥ್‌ ಮತು ಮಗನೊಂದಿಗೆ ಪಹಾಲ್ಗಾಮ್‌ಗೆ ತೆರಳಿದ್ದೆವು. ಮಧ್ಯಾಹ್ನದ ಹೊತ್ತಿಗೆ ಘಟನೆ ಸಂಭವಿಸಿತು. ಈಗ ನಮ್ಮ ಕಾರು ಚಾಲಕ ನಮ್ಮ ಜೊತೆಗೆ ಇದ್ದಾರೆ.

pahalgam-attack-shimoga-manjunath-rao-dies-in-the-incident

point-2ಸುಮಾರು 500ಕ್ಕೂ ಹೆಚ್ಚು ಜನರು ಆ ಜಾಗದಲ್ಲಿದ್ದರು. ಮಿನಿ ಸ್ವಿಟ್ಜರ್‌ಲ್ಯಾಂಡ್‌ ಎಂಬ ಪಾಯಿಂಟ್‌ಗೆ ಹೋಗಿದ್ದೆವು. ಕುದುರೆ ಇಳಿದು ಸುಮಾರು ಹತ್ತು ನಿಮಿಷವಾಗಿತ್ತು. ಮಗ ಬೆಳಗ್ಗೆಯಿಂದ ಏನು ತಿಂದಿರಲಿಲ್ಲ. ಆತನಿಗೆ ಏನಾದರು ಕೊಡುಸೋಣ ಎಂದು ತಿರುಗಿದೆ. ಅಷ್ಟರಲ್ಲಿ ಗುಂಡಿನ ಶಬ್ದ ಕೇಳಿ ಜನರು ಓಡುತ್ತಿದ್ದರು. ಹಿಂತಿರುಗಿದಾಗ ನನ್ನ ಪತಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಲೆಗೆ ಗುಂಡು ಹೊಡೆದಿದ್ದರು (attack).

point-3ಮೂರ್ನಾಲ್ಕು ಜನ ದಾಳಿಕೋರರು ಇದ್ದರು. ‘ನನ್ನ ಪತಿಯನ್ನು ಕೊಂದಿದ್ದೀರ. ನಮ್ಮನ್ನು ಕೊಂದುಬಿಡಿ ಎಂದು ನಾನು ಮತ್ತು ಮಗ ಕೇಳಿಕೊಂಡೆವು. ಆಗ ದಾಳಿಕೋರರಲ್ಲಿ ಒಬ್ಬಾತ, ನಿಮ್ಮನ್ನು ಕೊಲ್ಲುವುದಿಲ್ಲ. ಮೋದಿಗೆ ಹೋಗಿ ಹೇಳು ಹೇಳಿʼ ಎಂದ. ಆತ ಬಂದೂಕು ಹಿಡಿದು ನನ್ನ ಪಕ್ಕದಲ್ಲೇ ನಿಂತಿದ್ದ.

pahalgam-attack-shimoga-manjunath-rao-dies-in-the-incident

point-4ಗಂಡಸರನ್ನು ಮಾತ್ರ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಮಹಿಳೆಯರು ಮತ್ತು ಮಕ್ಕಳತ್ತ ಗುಂಡು ಹಾರಿಸಿಲ್ಲ. ಹಿಂದೂಗಳನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ ಎಂದು ಹೇಳುತ್ತಿದ್ದಾರೆ. ಅಲ್ಲಿದ್ದ ಮೂವರು ನನ್ನನ್ನು ಮತ್ತು ನನ್ನ ಮಗನನ್ನು ರಕ್ಷಿಸಿದರು. ಬಿಸ್ಮಿಲ್ಲ.. ಬಿಸ್ಮಿಲ್ಲ.. ಎಂದು ಹೇಳಿಕೊಂಡು ಅಲ್ಲಿಂದ ಕೆಳಗೆ ಕರೆದುಕೊಂಡು ಬಂದರು.

point-5ನನ್ನ ಪತಿಯ ಪಾರ್ಥಿವ ಶರೀರವನ್ನು ನನಗೆ ಹಸ್ತಾಂತರ ಮಾಡಿದರೆ ಸಾಕು. ಇಲ್ಲಿಂದ ಮೊದಲು ಶಿವಮೊಗ್ಗಕ್ಕೆ ಹಿಂತಿರುಗಬೇಕು. ದಯವಿಟ್ಟು ವಿಮಾನದ ವ್ಯವಸ್ಥೆ ಮಾಡಿಕೊಡಿ.

ಇದನ್ನೂ ಓದಿ » ಕಾಶ್ಮೀರದಲ್ಲಿ ಭಯೋತ್ಪಾದನಾ ದಾಳಿ, ಶಿವಮೊಗ್ಗದ ರಿಯಲ್‌ ಎಸ್ಟೇಟ್‌ ಉದ್ಯಮಿ ಸಾವು

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

Leave a Comment