ಶಿವಮೊಗ್ಗ : ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ದಾಳಿಗೆ ಬಲಿಯಾದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ ರಾವ್ ಅವರ ಪಾರ್ಥೀವ ಶರೀರ ಶಿವಮೊಗ್ಗಕ್ಕೆ ಆಗಮಿಸಿದೆ. ವಿಜಯನಗರದಲ್ಲಿರುವ ಅವರ ಮನೆ ಮುಂದೆ ಅಂತಿಮ ದರ್ಶನಕ್ಕೆ (Final Rites) ಇರಿಸಲಾಗಿದೆ.
ಇಂದು ಬೆಳಗ್ಗೆ ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ಮಂಜುನಾಥ ರಾವ್ ಪಾರ್ಥೀವ ಶರೀರ ಶಿವಮೊಗ್ಗಕ್ಕೆ ಆಗಮಿಸಿತು.
ಮನೆಯಲ್ಲಿ ಅಂತಿಮ ವಿಧಿವಿಧಾನ
ವಿಜಯನಗರದ 3ನೇ ಅಡ್ಡರಸ್ತೆಯಲ್ಲಿರುವ ಮಂಜುನಾಥ ರಾವ್ ಅವರ ಮನೆಯಲ್ಲಿ ಕುಟುಂಬಸ್ಥರು ಅಂತಿಮ ವಿಧಿವಿಧಾನ ನೆರವೇರಿಸಿದರು. ಕುಟುಂಬದವರು, ಆಪ್ತರಿಗೆ ಮಾತ್ರ ಮನೆ ಒಳಗೆ ಬಿಡಲಾಗಿತ್ತು. ಅಂತಿಮ ಪೂಜೆ ನೆರವೇರಿಸಲಾಯಿತು.
ಮನೆ ಹೊರಗೆ ಅಂತಿಮ ದರ್ಶನ
ಮನೆ ಮುಂಭಾಗ ಮಂಜುನಾಥ ರಾವ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ (Final Rites) ವ್ಯವಸ್ಥೆ ಮಾಡಲಾಗಿತ್ತು. ಕುಟುಂಬದವರು, ಆಪ್ತರು ಮತ್ತು ವಿವಿಐಪಿಗಳಿಗೆ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಇತ್ತು. ಸಾರ್ವಜನಿಕರಿಗೆ ಪ್ರತ್ಯೇಕ ಕ್ಯೂ ಮಾಡಲಾಗಿತ್ತು. ಅಂತಿಮ ದರ್ಶನದ ಫೋಟೊಗಳು ಇಲ್ಲಿವೆ.
ಮಂಜುನಾಥ ರಾವ್ ಪಾರ್ಥೀವ ಶರೀರವಿದ್ದ ವಾಹನದ ಜೊತಗೆ ಬೈಕ್ ಜಾಥಾ.ಬೆಂಗಳೂರಿನಿಂದ ಶಿವಮೊಗ್ಗದ ವಿಜಯನಗರಕ್ಕೆ ಆಗಮಿಸಿದ ಮಂಜುನಾಥ ರಾವ್ ಪಾರ್ಥೀವ ಶರೀರ.ಮಂಜುನಾಥ ರಾವ್ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಕಾದು ನಿಂತ ಜನರು.ಮಂಜುನಾಥ ರಾವ್ ಪಾರ್ಥೀವ ಶರೀರ ಇದ್ದ ಬಾಕ್ಸ್.ಪಾರ್ಥೀವ ಶರೀರ ಇದ್ದ ಬಾಕ್ಸ್ ತೆರೆದು ಅಂತಿಮ ದರ್ಶನ ಪಡೆದ ಶಾಸಕ ಚನ್ನಬಸಪ್ಪ ಮತ್ತು ಇತರರು.ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಂದ ಅಂತಿಮ ದರ್ಶನಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ಮಂಜುನಾಥ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಸಂಸದ ರಾಘವೇಂದ್ರ, ಡಿ.ಎಸ್.ಅರುಣ್, ಆರ್ಎಸ್ಎಸ್ ಮುಖಂಡ ಪಟ್ಟಾಭಿರಾಮ್, ಎಸ್.ದತ್ತಾತ್ರಿ.ಮಂಜುನಾಥ ಪಾರ್ಥೀವ ಶರೀರದ ಮುಂದೆ ಪತ್ನಿ ಪಲ್ಲವಿ, ಪುತ್ರ ಅಭಿಜಯ್.ಪಲ್ಲವಿ ಮತ್ತು ಅಭಿಜಯ್ನನ್ನು ಸಂತೈಸಿದ ಸಂಬಂಧಿಮಂಜುನಾಥ ರಾವ್ ಅಂತಿಮ ದರ್ಶನ ಪಡೆದ ಸಂಬಂಧಿಗಳು.ಪೂರ್ವ ವಲಯ ಐಜಿಪಿ ರವಿಕಾಂತೇಗೌಡ ಅವರಿಂದ ಅಂತಿಮ ನಮನ.ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರಿಂದ ಅಂತಿಮ ನಮನ.ಪೌರ ಕಾರ್ಮಿಕ ಮಹಿಳೆಯರಿಂದ ಅಂತಿಮ ದರ್ಶನ.ಹೆಚ್ಚುವರಿ ರಕ್ಷಣಾಧಿಕಾರಿಗಳಾದ ಅನಿಲ್ ಕುಮಾರ್ ಭೂಮರೆಡ್ಡಿ ಮತ್ತು ಕಾರ್ಯಪ್ಪ ಅವರಿಂದ ಅಂತಿಮ ದರ್ಶನ.ಮಂಜುನಾಥ ರಾವ್ ಪಾರ್ಥೀವ ಶರೀರಕ್ಕೆ ನಮನ ಸಲ್ಲಿಸಿದ ಆಪ್ತರು.ಮಂಜುನಾಥ ರಾವ್ ಪಾರ್ಥೀವ ಶರೀರಕ್ಕೆ ಸಾರ್ವಜನಿಕರಿಂದ ನಮನ.ಕೇಸರಿ ಧ್ವಜ ಹಿಡಿದುಕೊಂಡು ಬಂದು ಅಂತಿಮ ದರ್ಶನ ಪಡೆದ ವ್ಯಕ್ತಿ.ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್ ಮಾಡಿ