ಶಿವಮೊಗ್ಗದಲ್ಲಿ ಪೆಟ್ರೋಲ್‌ ಸುರಿದು ಆ್ಯಪಲ್‌ಗೆ ಬೆಂಕಿ ಹಚ್ಚಿ ಆಕ್ರೋಶ, ಕಾರಣವೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ಆಪರೇಷನ್‌ ಸಿಂಧೂರ ಸಂದರ್ಭ ಪಾಕಿಸ್ತಾನಕ್ಕೆ ಡ್ರೋಣ್‌ ಪೂರೈಕೆ ಮಾಡಿದ ಟರ್ಕಿ ದೇಶದ ಕ್ರಮ ಖಂಡಿಸಿ, ಟರ್ಕಿ ಆ್ಯಪಲ್‌ಗಳಿಗೆ (Turkey Apple) ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕಪ್ಪು ಬಾವುಟ ಪ್ರದರ್ಶಿಸಿ ಟರ್ಕಿ ಆಪಲ್‌ಗಳನ್ನು ಸುಡಲಾಯಿತು.

ಇದನ್ನೂ ಓದಿ »  ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.com/news/shivamogga-city/back-to-school-offer-in-shimoga/" target="_blank" rel="nofollow noopener">ಶಿವಮೊಗ್ಗದಲ್ಲಿ ಬ್ಯಾಕ್‌ ಟು ಸ್ಕೂಲ್‌ ಆಫರ್‌, ಲಕ್ಕಿ ಡ್ರಾ, ಎಲ್ಲಿ? ಏನಿದು ಆಫರ್?

ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಆಪರೇಷನ್‌ ಸಿಂಧೂರದ ಸಂದರ್ಭ ಪಾಕಿಸ್ತಾನಕ್ಕೆ ಟರ್ಕಿ ದೇಶ ಬೆಂಬಲವಾಗಿತ್ತು. ಪಾಕಿಸ್ತಾನಕ್ಕೆ ನೂರಾರು ಡ್ರೋಣ್‌ಗಳನ್ನು ಪೂರೈಕೆ ಮಾಡಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಇದನ್ನು ಖಂಡಿಸಿ ಟರ್ಕಿ ದೇಶದಿಂದ ಆಮದಾಗಿರುವ ಸೇಬು ಹಣ್ಣುಗಳಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಲಾಯಿತು.

Protest-Against-Turkey-Apple-at-Mahaveera-Circle

ಪ್ರಾಕೃತಿಕ ವಿಕೋಪದ ಸಂದರ್ಭ ಟರ್ಕಿ ದೇಶಕ್ಕೆ ಭಾರತ ನೆರವು ನೀಡಿತ್ತು. ನಮ್ಮ ದೇಶದಿಂದ ನೆರವು ಪಡೆದು ಈಗ ಟರ್ಕಿ ದೇಶ ವಂಚನೆ ಮಾಡಿದೆ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.

SLV-BOOK-SHOP-SHIMOGA

ಪ್ರಮುಖರಾದ ಕಲ್ಲೂರು ಮೇಘರಾಜ್‌, ಹೆಚ್‌.ಎಂ.ಸಂಗಯ್ಯ, ಶಂಕ್ರನಾಯ್ಕ, ಕೆ.ಆರ್‌.ಶಿವಣ್ಣ, ಸೋಮಶೇಖರಯ್ಯ, ಟಿ.ಹೆಚ್.ಬಾಬು, ಗೋಪಲ್‌ ಸೇರಿ ಹಲವರು ಇದ್ದರು.

Turkey Apple Protest in Shimoga

ಇದನ್ನೂ ಓದಿ » ಶಿವಮೊಗ್ಗದ JNN ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಮ್ಯಾನೇಜ್ಮೆಂಟ್‌ ಕೋಟಾದ ಸೀಟುಗಳು ಲಭ್ಯ

Turkey Apple Protest in Shimoga

JNNCE-ADMISSION-2025-26

Turkey Apple Protest in Shimoga

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

Leave a Comment