ಸೊರಬ: ಮುರುಘಾ ಮಠದಲ್ಲಿ ಬೆಂಗಳೂರಿನ ಅದಮ್ಯ ಚೇತನ, ಮುರುಘಾ ಮಠ ಹಾಗೂ ಪರಿಸರ ಜಾಗೃತಿ ಟ್ರಸ್ಟ್ ವತಿಯಿಂದ ಅನಂತ ಪ್ಲೇಟ್ ಬ್ಯಾಂಕ್ (Plate Bank) ಉದ್ಘಾಟನೆ ಹಾಗೂ ಪವಿತ್ರವನಕ್ಕೆ ಜಡೆ ಸಂಸ್ಥಾನ ಹಾಗೂ ಸೊರಬ ಮರುಘಾ ಮಠದ ಡಾ. ಮಹಾಂತ ಸ್ವಾಮೀಜಿ ಚಾಲನೆ ನೀಡಿದರು.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಬ್ಯಾಕ್ ಟು ಸ್ಕೂಲ್ ಆಫರ್, ಲಕ್ಕಿ ಡ್ರಾ, ಎಲ್ಲಿ? ಏನಿದು ಆಫರ್?


ಬಳಿಕ ಮಾತನಾಡಿದ ಡಾ. ಮಹಾಂತ ಸ್ವಾಮೀಜಿ, ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆಯವರು ಸಾರ್ವಜನಿಕ, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳಿಗೆ ಉಚಿತವಾಗಿ ತಟ್ಟೆ ಲೋಟ ವಿತರಿಸುವ ಉದ್ದೇಶದಿಂದ ಪ್ಲೇಟ್ ಬ್ಯಾಂಕ್ ಆರಂಭಿಸಿರುವುದು ಮಹತ್ಕಾರ್ಯವಾಗಿದೆ ಎಂದರು.

ಸೊರಬ ನಂತರ ತೀರ್ಥಹಳ್ಳಿಯಲ್ಲಿ ಪ್ಲೇಟ್ ಬ್ಯಾಂಕ್
ಮುರುಘಾ ಮಠದಲ್ಲಿ ಆರಂಭಿಸಿದ ಪ್ಲೇಟ್ ಬ್ಯಾಂಕ್ಗೆ 500 ತಟ್ಟೆ 500 ಲೋಟಗಳನ್ನು ಒದಗಿಸಲಾಯಿತು. ಇನ್ನು, ತೀರ್ಥಹಳ್ಳಿಯ ಕಟ್ಟೆಹಕ್ಕಲು ಸಾಲ್ಗುಡಿ ಶ್ರೀ ಸಿದ್ಧಿ ವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಗ್ರಾಮ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಅನಂತ ಪ್ಲೇಟ್ ಬ್ಯಾಂಕ್ ಸ್ಥಾಪಿಸಲಾಗುತ್ತಿದೆ.

ಪ್ರಮುಖರಾದ ಪ್ರದೀಪ್ ಓಕ್, ಚಕ್ರವಾಕ ಸುಬ್ರಹ್ಮಣ್ಯ, ಎಂ.ಆರ್.ಪಾಟೀಲ್, ಶ್ರೀಪಾದ ಬಿಚ್ಚುಗತ್ತಿ, ಕೆ.ವೆಂಕಟೇಶ್, ಡಿ.ಶಿವಯೋಗಿ ಇತರರಿದ್ದರು.

