ಸಾಗರ: ಅರಣ್ಯ ಜಾಗದಲ್ಲಿ ನಡೆಸುತ್ತಿರುವ ಕ್ವಾರಿಯಿಂದ (quarry) ಓಡಾಡುವ ಲಾರಿಗಳಿಂದ ಮಳೆಗಾಲದಲ್ಲಿ ಜನರಿಗೆ ತೊಂದರೆ ಉಂಟಾಗಲಿದೆ ಎಂದು ತಿಳಿಸಿದ್ದಕ್ಕೆ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ.
ಮಳೆಗಾಲದಲ್ಲಿ ಕ್ವಾರಿ ನಿಲ್ಲಿಸಿ ಎಂದು ಸಿರುಗುಪ್ಪದ ಈಶ್ವರಪ್ಪಗೌಡ, ಸದಾನಂದಗೌಡ, ದೇವರಾಜ ಎಂಬುವವರು ಮನವಿ ಮಾಡಿದ್ದರು. ಹಾಗಾಗಿ ಈಶ್ವರಪ್ಪ ಗೌಡ ಅವರ ಮನೆಗೆ ನುಗ್ಗಿದ ಕೆಲವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನು, ಪೊಲೀಸರು ಬರಲು ತಿಳಿಸಿದ್ದರಿಂದ ತೆರಳುತ್ತಿದ್ದ ದೇವರಾಜ ಅವರಿಗೆ ಐಗಿನಬೈಲು ಸಮೀಪ ಅಡ್ಡಗಟ್ಟಿ ಹೆಲ್ಮೆಟ್ನಿಂದ ಹೊಡೆದು ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ » ಕತ್ತರಿಯಿಂದ ಇರಿದು ಅಳಿಯನನ್ನು ಕೊಂದ ಮಾವ, ಏನಿದು ಘಟನೆ?

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್ ನಂಬರ್: 7411700200

