ಸಿಗಂದೂರು ಸೇತುವೆ, ಮೊದಲ ಲೋಡ್‌ ಟೆಸ್ಟ್‌ ಪಾಸ್‌, ಏನಿದು ಪರೀಕ್ಷೆ? ಹೇಗೆ ನಡೆಯುತ್ತೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಸಾಗರ: ಶರಾವತಿ ಹಿನ್ನೀರಿನಲ್ಲಿ ನಿರ್ಮಿಸಲಾಗಿರುವ ಸಿಗಂದೂರು ಸೇತುವೆ (Bridge) ಕಾಮಗಾರಿ ಪೂರ್ಣಗೊಂಡಿದೆ. ಮೊದಲ ಹಂತದ ಲೋಡ್‌ ಟೆಸ್ಟಿಂಗ್‌ನಲ್ಲಿ ಸೇತುವೆ ಪಾಸ್‌ ಆಗಿದೆ. ಈ ಪರೀಕ್ಷೆಯ ಫೋಟೊ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕಳೆದ ಭಾನುವಾರದಿಂದ ಬುಧವಾರದವರೆಗೆ ಮೊದಲ ಹಂತದ ಲೋಡ್‌ ಟೆಸ್ಟಿಂಗ್‌ ನಡೆಸಲಾಯಿತು. ಲಾರಿಗಳಲ್ಲಿ ನೂರು ಟನ್‌ ಲೋಡ್‌ ತುಂಬಿ ಸೇತುವೆ ಮೇಲೆ ನಿಲ್ಲಿಸಿ ಪರೀಕ್ಷೆ ನಡೆಲಾಗಿದೆ. ಮೊದಲ ಹಂತದ ಪರೀಕ್ಷೆಯಲ್ಲಿ ಸಿಗಂದೂರು ಸೇತುವೆ ಪಾಸ್‌ ಆಗಿದೆ.

Load-Test-of-Sigandur-Bridge-at-Sagara.

ಏನಿದು ಲೋಡ್‌ ಟೆಸ್ಟ್‌? ಹೇಗೆ ನಡೆಯಲಿದೆ?

ಹೊಳೆಬಾಗಿಲು ಮತ್ತು ಕಳಸವಳ್ಳಿ ಮಧ್ಯೆ ಶರಾವತಿ ಹಿನ್ನೀರು ಭಾಗದಲ್ಲಿ 2.14 ಕಿ.ಮೀ ಉದ್ದದ ಸೇತುವೆ ನಿರ್ಮಿಸಲಾಗಿದೆ. ಇದು ದೇಶದ ಎರಡನೇ ಅತಿ ಉದ್ದದ ಕೇಬಲ್‌ ಸೇತುವೆ. ಈ ಸೇತುವೆಯ ಕೇಬಲ್‌ ಭಾಗವನ್ನು ಎಕ್ಸ್‌ಟ್ರಾ ಡೋಸ್‌ ಪೋರ್ಷನ್‌, ಉಳಿದ ಭಾಗವನ್ನು ಬ್ಯಾಲೆನ್ಸ್‌ ಕ್ಯಾಂಟಿಲಿವರ್‌ ಎಂದು ಕರೆಯಲಾಗುತ್ತದೆ. ಈಗ ಬ್ಯಾಲೆನ್ಸ್‌ ಕ್ಯಾಂಟಿಲಿವರ್‌ ಭಾಗದಲ್ಲಿ ಲೋಡ್‌ ಟೆಸ್ಟಿಂಗ್‌ ನಡೆಸಲಾಗಿದೆ.

ಇದನ್ನೂ ಓದಿ » ಕೋಡಿ ಬಿತ್ತು ಅಂಜನಾಪುರ ಜಲಾಶಯ, ವಾಡಿಕೆಗೂ ಮೊದಲೇ ಭರ್ತಿ

ಸೇತುವೆಯ ಬ್ಯಾಲೆನ್ಸ್‌ ಕ್ಯಾಂಟಿಲಿವರ್‌ ಭಾಗದಲ್ಲಿ ಪ್ರತಿ ಸೆಗ್ಮೆಂಟ್‌ಗೆ 100 ಟನ್‌ ಭಾರ ಹೊರಿಸಲಾಗುತ್ತದೆ. ಮೊದಲಿಗೆ ಸೇತುವೆಯ ಮೊದಲ ಹಂತದಲ್ಲಿ 25 ಟನ್‌ ಭಾರ ಹೊರಿಸಲಾಗುತ್ತದೆ. ಅದೇ ಸ್ಥಳದಲ್ಲಿ ಪ್ರತಿ ಗಂಟೆಗೆ 25 ಟೆನ್‌ ಭಾರ ಹೆಚ್ಚಿಸಲಾಗುತ್ತದೆ. ನಾಲ್ಕು ಗಂಟೆಯಲ್ಲಿ 100 ಟನ್‌ ಭಾರ ಹೊರಿಸಲಾಗುತ್ತದೆ. ಪ್ರತಿ ಬಾರಿ ಭಾರ ಹೊರಿಸಿದಾಗಲು ಸೇತುವೆಯಲ್ಲಿ ಉಂಟಾಗುವ ವಿಚಲನವನ್ನು ವರದಿ ಮಾಡಿಕೊಳ್ಳಲಾಗುತ್ತದೆ.

[su_quote cite=”ಪೀರ್‌ ಪಾಷಾ, ಮುಖ್ಯ ಇಂಜಿನಿಯರ್‌“]ಲೋಡ್‌ ಟೆಸ್ಟ್‌ ಸಂದರ್ಭ ಸೇತುವೆಯಲ್ಲಿ 38 ಎಂ.ಎಂ. ವರೆಗೆ ವಿಚಲನೆಗೆ ಅವಕಾಶವಿದೆ. ಆದರೆ ಸಿಗಂದೂರು ಸೇತುವೆಯಲ್ಲಿ ಕೇವಲ 22 ಎಂ.ಎಂ. ವಿಚಲನ ಕಂಡು ಬಂದಿದೆ. ಈಗ ಹಂತ ಹಂತವಾಗಿ ಲೋಡ್‌ ತೆಗೆದಾಗ ವಿಚಲನ 0 ಎಂ.ಎಂ.ಗೆ ಬಂದಿದ್ದು, ಪರೀಕ್ಷೆ ಪಾಸಾಗಿದೆ. ನಮ್ಮ ಸೇತುವೆ ಅತ್ಯಂತ ಸುರಕ್ಷಿತ ಮತ್ತು ಗುಣಮಟ್ಟದ್ದಾಗಿದೆ ಎಂಬುದು ಈ ಪರೀಕ್ಷೆಯಿಂದ ತಿಳಿದು ಬಂದಿದೆ.[/su_quote]

Load-Test-of-Sigandur-Bridge-at-Sagara.

ಮುಂದಿನ ವಾರ ಮತ್ತೊಂದು ಪರೀಕ್ಷೆ

ಮೊದಲ ಹಂತದ ಟೆಸ್ಟ್‌ನಲ್ಲಿ ಸಿಗಂದೂರು ಸೇತುವೆ ಪಾಸ್‌ ಆಗಿದೆ. ಎರಡನೇ ಹಂತದ ಲೋಡ್‌ ಟೆಸ್ಟ್‌ಗೆ ಅನುಮತಿ ಕೇಳಲಾಗಿದೆ. ಕೇಬಲ್‌ ಇರುವ ಎಕ್ಸ್‌ಟ್ರಾ ಡೋಸ್‌ ಭಾಗದಲ್ಲಿ ಈ ಪರೀಕ್ಷೆ ನಡೆಯಲಿದೆ. ಈಗ ನಡೆಸಿರುವಂತೆ 100 ಟನ್‌ ಭಾರದ ಲೋಡ್‌ ಇರುವ ಲಾರಿಗಳನ್ನು ತಂದು ಕೇಬಲ್‌ ಇರುವ ಸೇತುವೆ ಭಾಗದಲ್ಲಿ ನಿಲ್ಲಿಸಿ ಪರೀಕ್ಷಿಸಲಾಗುತ್ತದೆ. ಮುಂದಿನ ವಾರ ಈ ಪರೀಕ್ಷೆ ನಡೆಯುವ ಸಾಧ್ಯತೆ ಇದೆ.

[su_quote cite=”ಪೀರ್‌ ಪಾಷಾ, ಮುಖ್ಯ ಇಂಜಿನಿಯರ್‌“]ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಹಿರಿಯ ಇಂಜಿನಿಯರ್‌ಗಳು ಮತ್ತು ಗುತ್ತಿಗೆ ಸಂಸ್ಥೆಯವರ ಸಮ್ಮುಖದಲ್ಲಿ ಪರೀಕ್ಷೆ ನಡೆಯಲಿದೆ. ಎಲ್ಲ ಸೇತುವೆಗಳಿಗು ನಿಗದಿತ ಪರೀಕ್ಷೆ ಇರಲಿದೆ. ಅದರೆ ಇದು ವಿಶೇಷ ಸೇತುವೆ. ಆದ್ದರಿಂದ ಎರಡು ಬಗೆಯ ಲೋಡ್‌ ಟೆಸ್ಟ್‌ ಕಡ್ಡಾಯಗೊಳಿಸಲಾಗಿದೆ.[/su_quote]

ನೂರು ವರ್ಷ ಬಾಳಿಕೆ ಬರಲಿದೆ

ಸೇತುವೆ ನಿರ್ಮಾಣದ ಗುತ್ತಿಗೆ ಪಡೆದ ಸಂಸ್ಥೆ ಹತ್ತು ವರ್ಷ ನಿರ್ವಹಣೆ ಮಾಡಲಿದೆ. ಆಮೇಲೆ ಪ್ರತಿ ಆರು ತಿಂಗಳಿಗೆ ಒಮ್ಮೆ ನಿರ್ವಹಣೆ ಕಾರ್ಯ ನಡೆಸಬೇಕು. ನಿಯಮಿತವಾಗಿ ನಿರ್ವಹಣೆ ಮಾಡಿದರೆ 100 ವರ್ಷವಾದರು ಸೇತುವೆಗೆ ಯಾವುದೆ ಸಮಸ್ಯೆ ಆಗುವುದಿಲ್ಲ ಎಂದು ಮುಖ್ಯ ಇಂಜಿನಿಯರ್‌ ಪೀರ್‌ ಪಾಷಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

423.15 ಕೋಟಿ ರೂ. ವೆಚ್ಚದಲ್ಲಿ ಸಿಗಂದೂರು ಸೇತುವೆ ನಿರ್ಮಿಸಲಾಗಿದೆ. 2.14 ಕಿ.ಮೀ ಉದ್ದದ ಸೇತುವೆಯು 16 ಮೀಟರ್‌ ಅಗಲದ ದ್ವಿಪಥ ಹೊಂದಿದೆ. ಎರಡು ಕಡೆ 1.5 ಮೀಟರ್‌ ಅಗಲದ ಫುಟ್‌ ಪಾತ್‌ ಕೂಡ ಇದೆ.

https://chat.whatsapp.com/JPJ0lTQsTKf365Fqu6Q7cd

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


[su_divider top=”no” style=”dotted” divider_color=”#ffffff” link_color=”#000000″ margin=”10″]

[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : June 25, 2025

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್‌ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್‌

ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್‌ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್‌

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್‌ ಲಾರಿ, ಇಲ್ಲಿದೆ ಡಿಟೇಲ್ಸ್‌

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್‌ ಲಾರಿ, ಇಲ್ಲಿದೆ ಡಿಟೇಲ್ಸ್‌

ಶಿವಮೊಗ್ಗದಿಂದ ಮುಂಬೈ, ದೆಹಲಿಗೆ ನೇರ ವಿಮಾನಯಾನ, ಯಾವಾಗ? ಸಂಸತ್ತಿನಲ್ಲಿ ರಾಘವೇಂದ್ರ ಹೇಳಿದ್ದೇನು?

ಶಿವಮೊಗ್ಗದಿಂದ ಮುಂಬೈ, ದೆಹಲಿಗೆ ನೇರ ವಿಮಾನಯಾನ, ಯಾವಾಗ? ಸಂಸತ್ತಿನಲ್ಲಿ ರಾಘವೇಂದ್ರ ಹೇಳಿದ್ದೇನು?

ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ, ರೈತರಿಗೆ ನೀಡಿದ್ದ ನೊಟೀಸ್‌ ವಾಪಸ್‌

ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ, ರೈತರಿಗೆ ನೀಡಿದ್ದ ನೊಟೀಸ್‌ ವಾಪಸ್‌

Leave a Comment