ಶಿವಮೊಗ್ಗ – ಭದ್ರಾವತಿ ರೈಲು ಮಾರ್ಗ ಪರೀಶೀಲನೆ, ವಾಹನಗಳ ಒಡಾಟಕ್ಕೆ ಬದಲಿ ಮಾರ್ಗ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ಶಿವಮೊಗ್ಗ – ಭದ್ರಾವತಿ ಮಧ್ಯೆ ರೈಲ್ವೆ ಮಾರ್ಗದಲ್ಲಿ (Railway Route) ಪರೀಕ್ಷೆ ಹಿನ್ನೆಲೆ ಅ.19 ರಿಂದ 25ರವರೆಗೆ ವಿವಿಧ ದಿನಗಳಂದು ತಾತ್ಕಾಲಿಕವಾಗಿ ವಾಹನಗಳು ಮತ್ತು ಸಾರ್ವಜನಿಕರು ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಅಪರ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಯಾವಾಗ ಯಾವ ಗೇಟ್‌ಗಳು ಬಂದ್?

ಎಲ್‌ಸಿ 35- ಲಕ್ಷ್ಮೀಪುರ ರಸ್ತೆ: ಅ. 19ರ ಬೆಳಗ್ಗೆ 8 ರಿಂದ ಅ.20 ರ ಸಂಜೆ 6ರವರೆಗೆ ಬಿ.ಹೆಚ್.ರಸ್ತೆ ಮುಖಾಂತರ ಕಡದಕಟ್ಟೆ – ಹೆಬ್ಬಂಡಿ ರಸ್ತೆ ಸಂಪರ್ಕ – ಲಕ್ಷ್ಮೀಪುರ ರಸ್ತೆ ಮಾರ್ಗ.

ಎಲ್‌ಸಿ 38- ನವುಲೆ ಬಸವಾಪುರ ರಸ್ತೆ: ಅ.22ರ ಬೆಳಗ್ಗೆ 8 ರಿಂದ ಅ.23 ರ ಸಂಜೆ 6 ರವರೆಗೆ ಎಲ್.ಸಿ.ನಂ.35ರ ಮೂಲಕ ಮಜ್ಜಿಗೇನಹಳ್ಳಿ – ನವುಲೆ ಬಸವಾಪುರ ಸಂಪರ್ಕ ರಸ್ತೆ ಮಾರ್ಗ.

ಎಲ್‌ಸಿ 38/ಎ-ಹೊನ್ನವಿಲೆ ರಸ್ತೆ: ಅ.24ರ ಬೆಳಗ್ಗೆ 8 ರಿಂದ ಅ.25ರ ಸಂಜೆ 6 ರವರೆಗೆ ಎಲ್ ಸಿ 38 ರ ಮೂಲಕ ನವುಲೆ ಬಸವಾಪುರ ರಸ್ತೆ – ಹೊನ್ನವಿಲೆ ರಸ್ತೆ ಮಾರ್ಗ.

ಸಾರ್ವಜನಿಕರು, ವಾಹನ ಸವಾರರು ಈ ಬದಲಿ ಮಾರ್ಗಗಳಲ್ಲಿ ಅಯಾ ದಿನಾಂಕಗಳಂದು ಮಾತ್ರ ಸಂಚರಿಸಿ ಇಲಾಖೆಯೊಂದಿಗೆ ಸಹಕರಿಸುವಂತೆ ತಿಳಿಸಲಾಗಿದೆ.

ಇದನ್ನೂ ಓದಿ » ಶಿವಮೊಗ್ಗ ಲೈವ್.ಕಾಂ ವರದಿ ಪರಿಣಾಮ, ಕೋಟಿ ವೆಚ್ಚದಲ್ಲಿ ರಿಪೇರಿಯಾಗ್ತಿದೆ ರೋಡ್‌, ಸ್ಥಳಕ್ಕೆ ಎಂಎಲ್‌ಎ ಭೇಟಿ

Railway Route

Leave a Comment