ಶಿವಮೊಗ್ಗ ಲೈವ್.ಕಾಂ ವರದಿ ಪರಿಣಾಮ, ಕೋಟಿ ವೆಚ್ಚದಲ್ಲಿ ರಿಪೇರಿಯಾಗ್ತಿದೆ ರೋಡ್‌, ಸ್ಥಳಕ್ಕೆ ಎಂಎಲ್‌ಎ ಭೇಟಿ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ನಗರದ ಹೊನ್ನಾಳಿ ರಸ್ತೆಯ ರೈಲ್ವೆ ಮೇಲ್ಸೇತುವೆ ಬಳಿ ರಸ್ತೆ ರಿಪೇರಿ ಕಾರ್ಯ ಆರಂಭವಾಗಿದೆ. ಶಾಸಕ ಎಸ್‌.ಎನ್.ಚನ್ನಬಸಪ್ಪ ಕಾಮಗಾರಿ ಸ್ಥಳಕ್ಕೆ ಭೇಟಿ (Visit) ನೀಡಿ ಪರಿಶೀಲಿಸಿದರು. ರಸ್ತೆ ಹಾಳಾಗಿ ವಾಹನ ಸವಾರರು ಮತ್ತು ಸ್ಥಳೀಯರು ಅನುಭವಿಸುತ್ತಿರುವ ಯಾತನೆ ಕುರಿತು ಈ ಹಿಂದೆ ಶಿವಮೊಗ್ಗ ಲೈವ್‌.ಕಾಂ ವರದಿ ಮಾಡಿತ್ತು.

ಎಂಎಲ್‌ಎ ಭೇಟಿ, ಪರಿಶೀಲನೆ

ಕಾಮಗಾರಿ ಸ್ಥಳಕ್ಕೆ ಶಾಸಕ ಎಸ್‌.ಎನ್.ಚನ್ನಬಸಪ್ಪ ಭೇಟಿ ನೀಡಿದ್ದರು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಸಂಚಾರ ಠಾಣೆ ಪೊಲೀಸರು, ಸ್ಥಳೀಯ ಮುಖಂಡರ ಜೊತೆಗೆ ಕಾಮಗಾರಿ ಗುಣಮಟ್ಟ ಮತ್ತು ಪ್ರಗತಿಯ ಕುರಿತು ಪರಿಶೀಲಿಸಿದರು. ಸುದ್ದಿಯ ಮುಂದಿನ 10 ಪ್ಯಾರಾಗಳು ಕೆಳಗಿವೆ.

ಒಟ್ಟು ₹3 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಈ ಪೈಕಿ ₹2 ಕೋಟಿ ವೆಚ್ಚದ ಕಾಂಕ್ರಿಟ್ ರಸ್ತೆ, ₹1 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ರಸ್ತೆ ಕಾಮಗಾರಿ ನಡೆಯಲಿದೆ. ಈ ಕಾಮಗಾರಿ ಪೂರ್ಣವಾದ ನಂತರ ನಗರದಲ್ಲಿ ಸಂಚಾರ ದಟ್ಟಣೆ ತಗ್ಗಲಿದೆ.

  • ಎಸ್‌.ಎನ್.ಚನ್ನಸಬಪ್ಪ, ಶಾಸಕ

RED-LINE-

181025-MLA-SN-Channabasappa-visit-honnali-road-in-shimoga-city.webp

ಶಿವಮೊಗ್ಗ ಲೈವ್‌ ವರದಿ ಇಂಪ್ಯಾಕ್ಟ್‌

ಇನ್ನು, ಹೊನ್ನಾಳಿ ರಸ್ತೆಯ ರೈಲ್ವೆ ಮೇಲ್ಸೇತುವೆ ಸಂಪರ್ಕ ರಸ್ತೆ ಸಂಪೂರ್ಣ ಗುಂಡಿಮಯವಾಗಿದೆ ಎಂದು ಶಿವಮೊಗ್ಗ ಲೈವ್.ಕಾಂ ಈ ಹಿಂದೆ ವರದಿ ಮಾಡಿತ್ತು. ಶಿವಮೊಗ್ಗ ಸಿಟಿಯ ಈ ರಸ್ತೆಯಲ್ಲಿ ಸಂಚರಿಸುವುದಷ್ಟೆ ಅಲ್ಲ ಅಕ್ಕಪಕ್ಕ ನಿಲ್ಲುವುದೂ ಡೇಂಜರ್‌, ಏನಿದು? ಶೀರ್ಷಿಕೆ ಅಡಿ 2025ರ ಆ.21ರಂದು ಸುದ್ದಿ ಪ್ರಕಟವಾಗಿತ್ತು.

181025-MLA-SN-Channabasappa-visit-honnali-road-in-shimoga-city.webp

ಜ್ಯೋತಿ ನಗರಕ್ಕೆ ಎಂಎಲ್‌ಎ ಭೇಟಿ

ಶಿವಮೊಗ್ಗ: ಎಂಆರ್‌ಎಸ್‌ ಸರ್ಕಲ್‌ ಸಮೀಪದ ಜ್ಯೋತಿ ನಗರದಕ್ಕೆ ಶಾಸಕ ಎಸ್‌.ಎನ್‌.ಚನ್ನಬಸಪ್ಪ ಭೇಟಿ ನೀಡಿದ್ದರು. ಈ ವೇಳೆ ಬಡಾವಣೆಯಲ್ಲಿರುವ ಪಾರ್ಕ್‌ ಒತ್ತುವರಿ ಮಾಡಲು ನಡೆದ ಪ್ರಯತ್ನದ ಕುರಿತು ಸ್ಥಳೀಯರು ಗಮನಕ್ಕೆ ತಂದರು. ಅಲ್ಲದೆ ಬಡಾವಣೆಯ ಸಮಸ್ಯೆಗಳ ಕುರಿತು ಸ್ಥಳೀಯರು ಮಾಹಿತಿ ನೀಡಿದರು.

MLA visit jyothi nagara

ಬಡಾವಣೆಯ ಸಮಸ್ಯೆಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಚನ್ನಬಸಪ್ಪ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ಪಕ್ಷದ ಪ್ರಮುಖರು, ಬಡಾವಣೆಯ ನಿವಾಸಿಗಳು ಇದ್ದರು.

MLA visit jyothi nagara

ಇದನ್ನೂ ಓದಿ » ಬಸ್ಸಿನ ಸೀಟಿನಲ್ಲಿ ಕುಳಿತು ವ್ಯಾನಿಟಿ ಬ್ಯಾಗ್‌ ಕಡೆ ಗಮನ ಹರಿಸಿದ ಮಹಿಳೆಗೆ ಕಾದಿತ್ತು ಆಘಾತ

Leave a Comment