ಸಿಎಂ ಯಡಿಯೂರಪ್ಪಗೆ ಟೈಮ್ ಕೊಡುತ್ತಿಲ್ಲ ಮೋದಿ, ಕಾರು ಬಿಟ್ಟು ಕೆಳಗಿಳಿಯುತ್ತಿಲ್ಲ ಈಶ್ವರಪ್ಪ, ಕಾಂಗ್ರೆಸ್ ಆಕ್ರೋಶ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 26 ಸೆಪ್ಟೆಂಬರ್ 2019

ಅತಿವೃಷ್ಟಿ ಕುರಿತು ಪರಿಶೀಲನಾ ಸಭೆ ನಡೆಸಬೇಕಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕಾರು ಬಿಟ್ಟು ಕಳೆಗಿಳಿಯುತ್ತಿಲ್ಲ. ಕಂದಾಯ ಸಚಿವರು ಚಿಕ್ಕಮಗಳೂರು ಬಿಟ್ಟು ಬೇರಾವ ಜಿಲ್ಲೆಗು ತೆರಳಿಲ್ಲ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ದಿವಾಕರ್ ಆರೋಪಿಸಿದ್ದಾರೆ.

70253626 931936327167788 1030285301949399040 n.jpg? nc cat=108& nc oc=AQnV 2tdph2rDcpBGAPsfv0jpC5LiJ5XkZh1G IMtLX3MfYajx2u4vyN6O3 7oi7gas& nc ht=scontent.fblr1 4

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದ ದಿವಾಕರ್, ಅತಿವೃಷ್ಟಿ ಸಂದರ್ಭವನ್ನು ನಿಭಾಯಿಸುವ ಪ್ರಮುಖ ಜವಾಬ್ದಾರಿ ಗ್ರಾಮೀಣಾಭಿವೃದ್ಧಿ ಮತ್ತು ಕಂದಾಯ ಇಲಾಖೆಗಳ ಮೇಲಿರುತ್ತದೆ. ಆದರೆ ಗ್ರಾಮೀಣಾಭಿವೃದ್ದಿ ಸಚಿವರು ಕಾರು ಬಿಟ್ಟು ಕೆಳಗಿಳಿಯುವುದಿಲ್ಲ ಅನ್ನುವುದಕ್ಕೆ ಬೆಳಗಾವಿಯಲ್ಲಿ ಆದ ಘಟನೆಯೆ ನಿದರ್ಶನವೆಂದರು.

ಪರಿಹಾರವಿಲ್ಲ, ಪರಿಶೀಲನಾ ಸಭೆಗಳು ಇಲ್ಲ

ಕಂದಾಯ ಸಚಿವರು ಮತ್ತು ಗ್ರಾಮೀಣಾಭಿವೃದ್ಧಿ ಸಚಿವರು ಅತಿವೃಷ್ಟಿ ಕುರಿತು ಪರಿಶೀಲನಾ ಸಭೆಗಳನ್ನು ನಡೆಸಬೇಕು. ಆದರೆ ಎಲ್ಲಿಯು ಸಭೆಗಳು ಆಗುತ್ತಿಲ್ಲ. ಪರಿಹಾರಕ್ಕೆ ಹಣವಿಲ್ಲದೆ ಇರುವುದೆ ಪರಿಶೀಲನಾ ಸಭೆಗಳನ್ನು ನಡೆಸದಿರುವುದಕ್ಕೆ ಕಾರಣ ಎಂದು ದಿವಾಕರ್ ಆರೋಪಿಸಿದರು.

Prashanth GPS copy

ಸೌಜನ್ಯಕ್ಕು ಸಿಎಂ ಭೇಟಿಗೆ ಅವಕಾಶ ಕೊಡ್ತಿಲ್ಲ

ಕೇಂದ್ರ ಸರ್ಕಾರಕ್ಕೆ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯಗಳ ಪೈಕಿ ಕರ್ನಾಟಕ ಮೊದಲು. ಆದರು ಕೇಂದ್ರ ಸರ್ಕಾರ ಪರಿಹಾರ ಕೊಡುತ್ತಿಲ್ಲ. ರಾಜ್ಯ ಮುಖ್ಯಮಂತ್ರಿಯನ್ನು ಪ್ರಧಾನಿ ಮೋದಿ ಅವರು ಸೌಜನ್ಯಕ್ಕು ಭೇಟಿ ಮಾಡುತ್ತಿಲ್ಲ. ಹಾಗಾಗಿ ಈ ಕೂಡಲೆ ದೇವೇಗೌಡರು, ಸಿದ್ದರಾಮಯ್ಯ, ಎಸ್.ಎಂ.ಕೃಷ್ಣ ಅವರಂತ ಹಿರಿಯರನ್ನು ಒಳಗೊಂಡ ಸರ್ವಪಕ್ಷ ನಿಯೋಗ ಕೊಂಡೊಯ್ಯಲಿ ಎಂದು ದಿವಾಕರ್ ಸಲಹೆ ನೀಡಿದರು.

70578780 2398489037062520 5710410120999993344 n.jpg? nc cat=106& nc oc=AQlls4GSRJiyvFrlQoOBJ34g1yyRbfCpdA1kXfJTGFR6YNFe0PHuyCRCqLB6v4n4DA8& nc ht=scontent.fblr1 3

ಸಿದ್ದರಾಮಯ್ಯ ಅವರನ್ನು ಟೀಕಿಸುವುದು ನಿಲ್ಲಿಸಿ

ಪರಿಹಾರ ಕಾರ್ಯ ಕೈಗೊಳ್ಳುವ ಬದಲು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ವಾರದಲ್ಲಿ ನಾಲ್ಕು ದಿನ ಸಿದ್ದರಾಮಯ್ಯ ಅವರನ್ನು ಟೀಕಿಸುತ್ತಿದ್ದಾರೆ. ಹಾಗೆ ಟೀಕಿಸುವ ಮೂಲಕ ರಾಜ್ಯ ಮಟ್ಟದ ನಾಯಕನಾಗಬಹುದು, ಸಮುದಾಯದ ಮುಖಂಡನಾಗಬಹುದು ಅಂದುಕೊಂಡಿದ್ದಾರೆ. ಅದರೆ ಅದು ಸಾದ್ಯವಿಲ್ಲ ಎಂದರು.

ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಸುಂದರೇಶ್, ಮಾಜಿ ಶಾಸಕ ಪ್ರಸನ್ನಕುಮಾರ್, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ರಮೇಶ್ ಹೆಗ್ಡೆ, ಪ್ರಮುಖರಾದ ಚಂದ್ರಭೂಪಾಲ್ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.

70790192 2401619433416147 3793781948707504128 n.jpg? nc cat=102& nc oc=AQm52LB5pjWk3mFHqWvddq7HqiseWcrVMZMQNf 5Ss WbPXT30oiCENvjpPiagIrnKw& nc ht=scontent.fblr1 3

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment