ಸಾಗರ ಗಣಪತಿ ಕರೆಗೆ ಎಂಎಲ್ಎ ಭೇಟಿ, ಒತ್ತುವರಿ ತಡೆಗೆ ಕ್ರಮ, ಕೆರೆ ಒತ್ತುವರಿ ತಡೆಗೆ ಕೈಗೊಂಡ ಕ್ರಮವೇನು ಗೊತ್ತಾ?

Published On : ಸೆಪ್ಟೆಂಬರ್ 26, 2019

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ ಲೈವ್.ಕಾಂ | ಸಾಗರ | 26 ಸೆಪ್ಟೆಂಬರ್ 2019

ಸಾಗರದ ಗಣಪತಿ ಕೆರೆ ಕಾಮಗಾರಿ ಸ್ಥಳವನ್ನು ಶಾಸಕ ಹರತಾಳು ಹಾಲಪ್ಪ ಪರಿಶೀಲನೆ ನಡೆಸಿದರು. ಕೆರೆ ಭಾಗ ಒತ್ತುವರಿ ಆಗದಂತೆ ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಗಣಪತಿ ಕೆರೆ ಸುತ್ತಲು ಡ್ರೈನೇಜ್ ತೆಗೆಸಲಾಗುತ್ತಿದೆ. ಕೊಳಚೆ ನೀರು ಗಣಪತಿ ಕೆರೆ ಸೇರಬಾರದು ಮತ್ತು ಕೆರೆ ಜಾಗ ಒತ್ತವರಿ ಮಾಡಬಾರದು ಅನ್ನುವ ಉದ್ದೇಶದಿಂದ ಡ್ರೈನೇಜ್ ತೆಗೆಸಲಾಗುತ್ತಿದೆ.

ಈಗಾಗಲೆ ಒಂದು ಭಾಗದಲ್ಲಿ ಡ್ರೈನೇಜ್ ಕೆಲಸ ಪೂರ್ಣಗೊಂಡಿದೆ. ಮತ್ತೊಂದು ಭಾಗದಲ್ಲಿ ಡ್ರೈನೇಜ್ ತೆಗೆಸಲು ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದು ಶಾಸಕ ಹರತಾಳು ಹಾಲಪ್ಪ ತಿಳಿಸಿದ್ದಾರೆ. ಪರಿಶೀಲನೆ  ವೇಳೆ ಉಪವಿಭಾಗಾಧಿಕಾರಿ ಡಾ.ಎಲ್.ನಾಗರಾಜ್, ಪೌರಾಯುಕ್ತ ಎಸ್.ರಾಜು, ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತ ಹೆಚ್.ಕೆ.ನಾಗಪ್ಪ, ನಗರಸಭೆ ಸದಸ್ಯರಾದ ಟಿ.ಡಿ.ಮೇಘರಾಜ್, ಆರ್.ಶ್ರೀನಿವಾಸ್, ವಿ.ಮಹೇಶ್, ಅರವಿಂದ ರಾಯ್ಕರ್, ವಿನಾಯಕ ರಾವ್, ಬಿ.ಟಿ.ರವೀಂದ್ರ ಸೇರಿದಂತೆ ಹಲವರಿದ್ದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

ನಮ್ಮ ಸೋಶಿಯಲ್ ಮೀಡಿಯಾ ಗ್ರೂಪ್ ಸೇರಿ

JNN College of Engineering Admissions started

© ಶಿವಮೊಗ್ಗ ಲೈವ್‌ : ಸೆಪ್ಟೆಂಬರ್ 26, 2019

Leave a Comment