ಮಾರಿಹಬ್ಬಕ್ಕೆ ತಂದಿದ್ದ ನಾಲ್ಕು ಕುರಿತು ಕಳ್ಳತನ, ಎಲ್ಲಿ ಹೇಗಾಯ್ತು ಘಟನೆ?

ಶಿವಮೊಗ್ಗ: ಗೋವಿಂದಪುರ ಗ್ರಾಮದಲ್ಲಿ ಮನೆಯ ಪಕ್ಕದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕುರಿಗಳನ್ನು (sheep) ಕಳ್ಳರು ಹೊತ್ತೊಯ್ದಿದ್ದಾರೆ. ಹಬ್ಬದ ಪ್ರಯುಕ್ತ ಮಾರಾಟ ಮಾಡಲು ಚಿತ್ರದುರ್ಗದ ಸಂತೆಯಿಂದ ತಂದಿದ್ದ ಕುರಿಗಳು ಕಳುವಾಗಿವೆ.

ಈಶ್ವರಪ್ಪ ಎಂಬುವವರು ಮಾರಿಹಬ್ಬದ ಪ್ರಯುಕ್ತ ಮಾರಾಟ ಮಾಡಲು ಚಿತ್ರದುರ್ಗದ ಸಂತೆಯಲ್ಲಿ ₹1,30,000 ಮೌಲ್ಯದ ನಾಲ್ಕು ಕುರಿಗಳನ್ನು ಖರೀದಿಸಿ ತಂದಿದ್ದರು. ಈ ಕುರಿಗಳನ್ನು ಮನೆಯ ಪಕ್ಕದ ತೆರೆದ ಕೊಟ್ಟಿಗೆಯಲ್ಲಿ ಇತರ ಕುರಿಗಳೊಂದಿಗೆ ಕಟ್ಟಿದ್ದರು.

crime name image

ರಾತ್ರಿ ಕೊಟ್ಟಿಗೆಯಲ್ಲಿ ಎಲ್ಲಾ ಕುರಿಗಳು ಇದ್ದವು. ಮರುದಿನ ಎದ್ದು ನೋಡಿದಾಗ ಚಿತ್ರದುರ್ಗದಿಂದ ತಂದಿದ್ದ ನಾಲ್ಕು ಗಂಡು ಕುರಿಗಳು ನಾಪತ್ತೆಯಾಗಿದ್ದವು. ಘಟನೆ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಸಕ್ರೆಬೈಲು ಬಳಿ ಬಸ್ಸು ಕಾರು ಮುಖಾಮುಖಿ ಡಿಕ್ಕಿ, ಇಬ್ಬರಿಗೆ ಗಂಭೀರ ಗಾಯ

JNNCE-COLLEGE-ADVT.
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : February 3, 2026 at 11:30 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಫೆಬ್ರವರಿ 3, 2026

Leave a Comment