ಶಿಕಾರಿಪುರದಲ್ಲಿ ವಕೀಲ ನೇಣಿಗೆ ಶರಣು, ಕಾರಣವೇನು?

ಶಿಕಾರಿಪುರ: ಪಟ್ಟಣದ ನ್ಯಾಯವಾದಿ (lawyer) ಹಾಗೂ ತಾಲೂಕು ಪದವೀಧರ ಸಹಕಾರ ಸಂಘದ ಉಪಾಧ್ಯಕ್ಷ ಶ್ರೀಧರ್ (38) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶ್ರೀಧರ್‌ ಮೂಲತಃ ಕಣಸೋಗಿ ಗ್ರಾಮದವರು. ಚಿಕ್ಕಂದಿನಿಂದಲೇ ತಮ್ಮ ಚಿಕ್ಕಪ್ಪ ಹಾಗೂ ವಕೀಲರ ಸಂಘದ ಮಾಜಿ ಅಧ್ಯಕ್ಷ ಕೋಡಪ್ಪ ಅವರ ಶಿಕಾರಿಪುರದ ಮನೆಯಲ್ಲಿಯೇ ವಾಸವಿದ್ದರು. ಚಿಕ್ಕಪ್ಪನ ಮನೆಯ ಮಹಡಿ ಮೇಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ಸಂತೋಷ್ ಪಾಟೀಲ್ ಹಾಗೂ ಪಿಎಸ್‌ಐ ಶರತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Shikaripura-Advocate-Shridhar-succumbed

ಡೆತ್ ನೋಟ್ ದೊರೆತಿದೆ ಎಂದು ಹೇಳಲಾಗುತ್ತಿದೆ. ಘಟನೆಗೆ ನಿಖರ ಕಾರಣ ಇನ್ನಷ್ಟೆ ತಿಳಿದು ಬರಬೇಕಿದೆ. ಕಣಸೋಗಿ ಗ್ರಾಮದ ಅವರ ಕೃಷಿ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೃತ ಶ್ರೀಧರ್‌ ಅವರಿಗೆ ಪತ್ನಿ ಹಾಗೂ ಪುತ್ರಿ ಇದ್ದಾರೆ.

ಇದನ್ನೂ ಓದಿ – ಅಂಗನವಾಡಿ ಸಹಾಯಕಿ ಅನುಮಾನಾಸ್ಪದ ಸಾವು ಕೇಸ್‌, ಆರೋಪಿ ಅರೆಸ್ಟ್‌

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : February 20, 2026 at 3:00 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಫೆಬ್ರವರಿ 20, 2026

Leave a Comment