ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 07 ಅಕ್ಟೋಬರ್ 2019
ದಿನೆ ದಿನೆ ಶಿವಮೊಗ್ಗ ನಗರದ ವ್ಯಾಪ್ತಿ ಹಿಗ್ಗುತ್ತಿದೆ. ಸಣ್ಣದೊಂದು ಹಳ್ಳಿಯಾಗಿದ್ದದ್ದು ಈಗ ಸ್ಮಾರ್ಟ್ ಸಿಟಿಯಾಗಿದೆ. ಮಹಾನಗರ ಪಾಲಿಕೆಯಾಗಿದೆ. ಶಿವಮೊಗ್ಗ ಬೆಳೆದಂತೆ ಉದ್ಯಮಗಳು ಹೆಚ್ಚುತ್ತಿವೆ, ಜನರು ಹೆಚ್ಚು ಹೆಚ್ಚು BUSY ಆಗುತ್ತಿದ್ದಾರೆ. ಇದರ ನಡುವೆ ಎಲ್ಲವು ಫಟಾಫಟ್ ಆಗಬೇಕು ಎಂಬ ಭಾವನೆ ಬೆಳೆಯುತ್ತಿದೆ. ಇದಕ್ಕೆ ಪೂರಕವಾಗಿ ಆರಂಭವಾಗುತ್ತಿರುವುದೆ ‘ಫೋನ್ ಡೈರಿ’.

ಶಿವಮೊಗ್ಗಕ್ಕೆ ಇದು ಹೊಚ್ಚ ಹೊಸ ಕಾನ್ಸೆಪ್ಟ್
ಫೋನ್ ಡೈರಿ, ಶಿವಮೊಗ್ಗದ ಪಾಲಿಗೆ ವಿಭಿನ್ನ ಮತ್ತು ವಿಶೇಷ ಪ್ರಯೋಗ. ಬೆರಳ ತುದಿಯಲ್ಲೆ ಜನರಿಗೆ ಬೇಕಿರುವ ಸೌಲಭ್ಯಗಳನ್ನು ಒದಗಿಸುವ ವೇದಿಕೆ. ಒಂದೇ ಒಂದು ಫೋನ್ ಕರೆಯಿಂದ ಸಮಸ್ಯೆಗಳು ಥಟ್ ಅಂತಾ ಪರಿಹಾರವಾಗಲಿದೆ. ಮಹಾನಗರಗಳಲ್ಲಿ ಪ್ರಚಲಿತದಲ್ಲಿರುವ ಈ ಕಾನ್ಸೆಪ್ಟ್, ಶಿವಮೊಗ್ಗದಲ್ಲಿ ಇದೆ ಮೊದಲ ಬಾರಿಗೆ ಆರಂಭವಾಗುತ್ತಿದೆ.
ಫೋನ್ ಡೈರಿ ಯಾಕೆ ಬೇಕು?
ಮುಟ್ಟಿದರೆ ಕರೆಂಟ್ ಹೊಡೆಯುವ ಸ್ವಿಚ್. ಸೋರುತ್ತಿರುವ ನಲ್ಲಿ. ಟ್ಯಾಂಕ್ ಕ್ಲೀನಿಂಗ್. ಬಾಗಿಲು ರಿಪೇರಿ.. ಇವೆಲ್ಲ ಸಣ್ಣ ವಿಚಾರಗಳೆ. ಆದರೆ ದೊಡ್ಡ ಕಿರಿಕಿರಿ ಉಂಟು ಮಾಡುತ್ತವೆ. ಇವುಗಳ ರಿಪೇರಿ ಯಾರಿಂದ ಮಾಡಿಸಬೇಕು ಅನ್ನುವುದೆ ಹಲವರಿಗೆ ಗೊಂದಲವಾಗಿರುತ್ತದೆ. ಬೆರಳ ತುದಿಯಲ್ಲೆ ಇದನ್ನು ಬಗೆಹರಿಸಲಿದೆ ಫೋನ್ ಡೈರಿ.

ಕಾರ್ಯಕ್ರಮಕ್ಕೆ ಪುಟ್ಟದೊಂದು ಹಾಲ್ ಬೇಕು. ಪಾರ್ಟಿಗೆ ಶಿವಮೊಗ್ಗದಲ್ಲಿ ಜಾಗ ಎಲ್ಲಿದೆ? ಒಳ್ಳೆ ಹೊಟೇಲ್ ಯಾವುದು? ನಾಲಗೆ ಚಪ್ಪರಿಸುವಂತಾ ನಾನ್ ವೆಜ್ ಊಟ ಎಲ್ಲಿ ಸಿಗುತ್ತೆ? ಸಖತ್ ಕ್ರಿಸ್ಪಿ ಮಸಾಲೆ ದೋಸೆ ಎಲ್ಲಿ ಸಿಗುತ್ತೆ? ಒಳ್ಳೆ ಚಾಟ್ಸ್ ಎಲ್ಲಿದೆ? ಶಿವಮೊಗ್ಗದ ಯಾವ ಲಾಡ್ಜ್ ಚೀಪ್, ಬೆಸ್ಟ್ ಮತ್ತು ಸೇಫ್? ಇವಕ್ಕು ಪರಿಹಾರ ಕೊಡುತ್ತೆ ಫೋನ್ ಡೈರಿ.

ಇದಿಷ್ಟೇ ಅಲ್ಲ. ಫೋನ್ ಡೈರಿಯಲ್ಲಿ ಶಿವಮೊಗ್ಗದ ರಾಜಕಾರಣಿಗಳು, ಅಧಿಕಾರಿಗಳು, ಪೊಲೀಸ್ ಸ್ಟೇಷನ್ನು, ಬಸ್ ನಿಲ್ದಾಣ, ಬಸ್ಸಿನ ಟೈಮಿಂಗ್ಸು, ರೈಲ್ವೆ ಸ್ಟೇಷನ್ ಕಾಂಟ್ಯಾಕ್ಟ್ ನಂಬರ್, ರೈಲ್ವೆ ಟೈಮಿಂಗ್ಸ್, ಆಟೋ, ಕಾರು, ಬಸ್ಸು, ಟೆಂಪೊ ಟ್ರಾವಲರ್, ಟ್ರಾವಲ್ಸ್’ಗಳ ಕಾಂಟ್ಯಾಕ್ಟ್. ಸೆಕೆಂಡ್ ಹ್ಯಾಂಡ್ ಸೇಲ್. ಮನೆ, ಮಳಿಗೆ, ರೂಂ ಬಾಡಿಗೆ. ಎಮರ್ಜನ್ಸಿಗೆ ಬೇಕಿರುವ ಕಾಂಟ್ಯಾಕ್ಟ್. ಆಸ್ಪತ್ರೆಗಳ ವಿವರ. ಬ್ಯೂಟಿ ಪಾರ್ಲರ್’ಗಳು, ಸಲೂನ್’ಗಳು. ಎಲ್ಲದರ ಕಂಪ್ಲೀಟ್ ಮಾಹಿತಿ ಸಿಗುತ್ತೆ.

ನಿಮಗೆ ಗೊತ್ತಾ? ಪಾಕೆಟ್ ಕ್ಯಾಲೆಂಡರ್ ಜೇಬಲ್ಲಿಟ್ಟುಕೊಂಡು ಓಡಾಡುವ ಕಾಲವಿತ್ತು. ಜಗತ್ತು ಬದಲಾದಂತೆ ಪಾಕೆಟ್ ಕ್ಯಾಲೆಂಡ್ ಮರೆಯಾಗಿದೆ. ಎಲ್ಲವು ಡಿಜಿಟಲೈಸ್ ಆಗಿದೆ. ಈಗ ಆರಂಭವಾಗುತ್ತಿರುವ ಫೋನ್ ಡೈರಿ, ಶಿವಮೊಗ್ಗದ ಮೊಟ್ಟ ಮೊದಲ 24 ಗಂಟೆಯ ಡಿಜಿಟಲ್ ಪಾಕೆಟ್ ಕ್ಯಾಲೆಂಡರ್.
LATEST NEWS
- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

About The Editor
ನಿತಿನ್ ಆರ್.ಕೈದೊಟ್ಲು





