ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಪ್ರೀತಿಯಿಂದ ಸಾಕಿದ್ದ ಪ್ರಾಣಿ (Fighter Kuri) ಮೃತಪಟ್ಟಾಗ ಅದರ ಸ್ಮರಣಾರ್ಥವಾಗಿ ಸಮಾಜಮುಖಿ ಕಾರ್ಯ ಮಾಡುವ ಮೂಲಕ ನಗರದ ಸೀಗೆಹಟ್ಟಿ ಬಡಾವಣೆಯ ಮಣಿ ಮತ್ತು ಸ್ನೇಹಿತರ ತಂಡ ಮಾದರಿಯಾಗಿದೆ.
ಕುಟುಂಬದ ಸದಸ್ಯನಂತಿದ್ದ ಕುರಿ
ಸೀಗೆಹಟ್ಟಿ ಬಡಾವಣೆಯ ನಿವಾಸಿ ಮಣಿ ಅವರು ಶಿವಚೌಡಿ ಧರಣಿ ಎಂಬ ಹೆಸರಿನ ‘ಫೈಟರ್ ಕುರಿ‘ಯೊಂದನ್ನು ಸಾಕಿದ್ದರು. ಆ ಕುರಿಯನ್ನು ಕೇವಲ ಸಾಕುಪ್ರಾಣಿಯಂತೆ ನೋಡದೆ, ತಮ್ಮ ಕುಟುಂಬ ಸದಸ್ಯನಂತೆ ಪೋಷಿಸಿದ್ದರು. ಮರಿಕುರಿಯಾಗಿದ್ದಾಗಲೆ 12 ಕಣಗಳಲ್ಲಿ ಗೆದ್ದು ಬೀಗಿತ್ತು. ಈತನಕ ಒಟ್ಟು 33 ಕಣಗಳ ಸರದಾರ ಎನಿಸಿಕೊಂಡಿತ್ತು. ಕಳೆದ ಶುಕ್ರವಾರ ಈ ಕುರಿ ಅನಾರೋಗ್ಯದಿಂದ ಮೃತಪಟ್ಟಿತ್ತು.

ಕುರಿಯ ಸಾವಿನಿಂದ ಮರುಗಿದ ಮಣಿ ಮತ್ತು ಸ್ನೇಹಿತರು, ಅದಕ್ಕೆ ಸಕಲ ವಿಧಿವಿಧಾನಗಳೊಂದಿಗೆ ಶವಸಂಸ್ಕಾರ ನೆರವೇರಿಸಿದರು. ಅದರ ನೆನಪಿಗಾಗಿ ತಿಥಿ ಕಾರ್ಯವನ್ನು ಹಮ್ಮಿಕೊಂಡಿದ್ದರು.
ಮಕ್ಕಳಿಗೆ ಅನ್ನದಾನ, ಪುಸ್ತಕ ವಿತರಣೆ
ಸಾಮಾನ್ಯವಾಗಿ ಇಂತಹ ಕಾರ್ಯಗಳಲ್ಲಿ ಬಾಡೂಟ ಅಥವಾ ಸತ್ಕಾರ ಕೂಟ ಏರ್ಪಡಿಸುವುದು ವಾಡಿಕೆ. ಆದರೆ ಮಣಿ ಮತ್ತು ಅವರ ಸ್ನೇಹಿತರು ವಿಭಿನ್ನವಾಗಿ ಯೋಚಿಸಿ, ಸರ್ಕಾರಿ ಶಾಲೆಯ ಸುಮಾರು 60 ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದರು. ಅಲ್ಲದೆ, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲೆಂದು ಉಚಿತವಾಗಿ ಪೆನ್ನು ಮತ್ತು ಪುಸ್ತಕಗಳನ್ನು ವಿತರಿಸಿದರು.

ತಮ್ಮ ಪ್ರೀತಿಯ ಕುರಿಯ ನೆನಪನ್ನು ಮಕ್ಕಳ ಮುಖದ ನಗು ಹಾಗೂ ವಿದ್ಯಾಭ್ಯಾಸಕ್ಕೆ ನೆರವಾಗುವ ಮೂಲಕ ಜೀವಂತವಾಗಿರಿಸಿದ ಮಣಿ ಮತ್ತು ಅವರ ಸ್ನೇಹಿತರ ಈ ಕಾರ್ಯಕ್ಕೆ ಬಡಾವಣೆಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

LATEST NEWS
- ಬೆಳಗ್ಗೆ ಲೇಔಟ್ಗೆ ಬಂದ ಲೆಕ್ಚರರ್ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್

- ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

- ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

- ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

- ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್, ಯಾಕೆ?

About The Editor
ನಿತಿನ್ ಆರ್.ಕೈದೊಟ್ಲು














