ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಹೊಳೆಹೊನ್ನೂರು: ಇಲ್ಲಿನ ಹನುಮಂತಾಪುರ ಗ್ರಾಮದ ಅಡಿಕೆ ತೋಟದಲ್ಲಿ ಖಾಸಗಿ ಕಾಲೇಜು ಉಪನ್ಯಾಸಕ (lecturer) ಸುರೇಶ್.ಹೆಚ್.ಆರ್ (55) ಅವರ ಮೃತದೇಹ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಘಟನೆ ಸಂಬಂಧ ಪೊಲೀಸರು ಕೊಲೆಯ ಸಂಶಯದಿಂದ ತನಿಖೆ ನಡೆಸುತ್ತಿದ್ದಾರೆ. ಇನ್ನು, ಪ್ರಕರಣದ ಕುರಿತು ಮೃತ ಸುರೇಶ್ ಅವರ ಪತ್ನಿ ನಾಗರತ್ನ ದೂರು ನೀಡಿದ್ದಾರೆ.
ಶಿವಮೊಗ್ಗದ ವಿನೋಬನಗರದ ಕಲ್ಲಳ್ಳಿಯಲ್ಲಿ ಕುಟುಂಬದೊಂದಿಗೆ ಸುರೇಶ್ ವಾಸವಿದ್ದರು. ಮಾರ್ಚ್ 28ರಂದು ಬೆಳಗ್ಗೆ ಮನೆಯಿಂದ ಹೊರಟಿದ್ದ ಸುರೇಶ್, ‘ಭದ್ರಾವತಿಯ ಮೂವರು ಸ್ನೇಹಿತರ ಜೊತೆಗೆ ತುಮಕೂರಿಗೆ ಕಾರ್ಯಕ್ರಮವೊಂದಕ್ಕೆ ಹೋಗುತ್ತಿದ್ದೇನೆ, ನಾಳೆ ಸಂಜೆ ಬರುತ್ತೇನೆʼ ಎಂದು ಮನೆಯವರಿಗೆ ತಿಳಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ತೋಟದಲ್ಲಿ ಭೀಕರ ದೃಶ್ಯ
ಮಾರ್ಚ್ 29ರ ಬೆಳಗ್ಗೆ ಸುರೇಶ್ ಅವರ ಅಣ್ಣನ ಮಗ ಮಧು, ನಾಗರತ್ನ ಅವರಿಗೆ ಕರೆ ಮಾಡಿ ತೋಟದಲ್ಲಿನ ಘಟನೆ ಕುರಿತು ತಿಳಿಸಿದ್ದಾರೆ. ನಾಗರತ್ನ ಅವರು ಸ್ಥಳಕ್ಕೆ ಭೇಟಿ ನೀಡಿದಾಗ ಸುರೇಶ್ ಅವರ ದೇಹ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಶವದ ಪಕ್ಕದಲ್ಲೇ ಅವರ ಬ್ಯಾಗ್, ಮೊಬೈಲ್, ಫೋಟೋ ಇದ್ದ ಪರ್ಸ್ ಹಾಗೂ ಅವರ ಬೈಕ್ ಪತ್ತೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮಾನಸಿಕ ಆಘಾತದಲ್ಲಿದ್ದರು ಉಪನ್ಯಾಸಕ
ಎರಡು ವರ್ಷದ ಹಿಂದೆ ಸುರೇಶ್ ಅವರ ಸಹೋದರಿ ಕಮಲಮ್ಮ ಹಾಗೂ ಇತ್ತೀಚೆಗೆ ಆತ್ಮೀಯ ಸ್ನೇಹಿತ ಹಾಲೇಶ್ ಅವರ ನಿಧನದಿಂದ ಸುರೇಶ್ ತೀವ್ರ ಮಾನಸಿಕ ಆಘಾತಕ್ಕೊಳಗಾಗಿದ್ದರು. ಅವರು ಯಾವಾಗಲೂ ಮಂಕಾಗಿರುತ್ತಿದ್ದರು. ಅಲ್ಲದೆ ಮಾತ ಕೂಡ ಕಡಿಮೆಯಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ : ಸೇತುವೆಯಿಂದ ಕೆಳಗೆ ಹಾರಿದ ಖಾಸಗಿ ಬಸ್, ಹೇಗಾಯ್ತು ಘಟನೆ?
ಕೊಲೆ ಶಂಕೆ, ತನಿಖೆಗೆ ಒತ್ತಾಯ
ತುಮಕೂರಿಗೆ ಹೋಗುವುದಾಗಿ ಹೇಳಿ ಹೋಗಿದ್ದ ಸುರೇಶ್ ಅವರು ತೋಟದಲ್ಲಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಉದ್ದೇಶಪೂರ್ವಕವಾಗಿಯೆ ಅವರ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ಪತ್ನಿ ನಾಗರತ್ನ ಸಂಶಯ ವ್ಯಕ್ತಪಡಿಸಿದ್ದಾರೆ. ಸದ್ಯ ಹೊಳೆಹೊನ್ನೂರು ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

About The Editor
ನಿತಿನ್ ಆರ್.ಕೈದೊಟ್ಲು















