ಮಡೋಡಿ ಸೇತುವೆ ಕುಸಿತದ ಪರಿಣಾಮ, ಪರ್ಯಾಯ ಮಾರ್ಗದಲ್ಲಿ ವಾಹನ ಓಡಿಸೋದು ಕಷ್ಟ ಕಷ್ಟ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | HOSANAGARA | 17 ಅಕ್ಟೋಬರ್ 2019

72431595 947023625659058 4441209764197695488 n.jpg? nc cat=106& nc oc=AQlYg9RbN9Ny5s8RI28ZhC2m zc0CrFi7PVrBcFnJfX0WH9NNVDP Z7HJJtqQlYCqS4& nc ht=scontent.fblr1 3
ADVERTISEMENT

ಮಡೋಡಿ ಸೇತುವೆ ಕುಸಿದ ಬಳಿಕ ಬೈಂದೂರು, ರಾಣೆಬೆನ್ನೂರಿಗೆ ಸಂಪರ್ಕ ಕಲ್ಪಿಸುವ ಪರ್ಯಾಯ ರಸ್ತೆ ಸಂಪರ್ಣ ಹಾಳಾಗಿದೆ. ಈ ರಸ್ತೆಯಲ್ಲಿ ವಾಹನ ಸಂಚಾರ ಕಷ್ಟಕರವಾಗಿದೆ.

ಸೇತುವೆ ಕುಸಿದ ಹಿನ್ನೆಲೆ, ಮತ್ತಿಕೈ – ಮಡೋಡಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ ಭಾರಿ ಸಂಖ್ಯೆಯ ವಾಹನ ಸಂಚಾರದಿಂದಾಗಿ ಈ ರಸ್ತೆ ಗುಂಡಿಮಯವಾಗಿದೆ.

ಹಲವು ಮಜರೆ ಹಳ್ಳಿಗಳಿಗೆ ಈ ರಸ್ತೆ ಸಂಪರ್ಕ ಸೇತುವೆಯಾಗಿತ್ತು. ಆದರೆ ಈಗ ಗುಂಡಿಮಯವಾಗಿದೆ. ಇದರಿಂದ ಈ ಗ್ರಾಮಗಳ ಜನರು ಸಂಕಷ್ಟಕ್ಕೀಡಾಗಿದ್ದಾರೆ.

ಗುಂಡಿ ಬಿದ್ದ ರಸ್ತೆ ವೀಕ್ಷಣೆಗೆ ಕಿಮ್ಮನೆ

72429618 948625888832165 1894931139974397952 n.jpg? nc cat=111& nc oc=AQlCgeyPbWgP04cTI4eeRya WGrZ5FZaXj6txl2CNOfLeSpN2HNceuH jjgRskw JTh9QYpxO2Ooy4xeSd8QrUDf& nc ht=scontent.fixe1 1

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಬುಧವಾರ ರಸ್ತೆಯ ಪರಿಸ್ಥಿತಿ ವೀಕ್ಷಿಸಿದರು. ತಾವು ಶಾಸಕರಾಗಿದ್ದ ಸಂದರ್ಭ 2012 – 13ರಲ್ಲಿ ಒಂದುವರೆ ಕೋಟಿ ರೂ. ವೆಚ್ಚದಲ್ಲಿ ರಸ್ತೆಯ ಅಭಿವೃದ್ಧಿ ಮಾಡಲಾಗಿತ್ತು. ಆದರೆ ಮಡೋಡಿ ಸೇತುವೆ ಕುಸಿತದಿಂದಾಗಿ ಈ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಳವಾಗಿ ರಸ್ತೆ ಹಾಳಾಗಿದೆ. ಸರ್ಕಾರ ಕೂಡಲೆ ರಸ್ತೆಯ ದುರಸ್ಥಿ ಕಾರ್ಯ ಮಾಡಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಭೇಟಿ ವೇಳೆ ದೊಡ್ಮೆನ ಲಕ್ಷ್ಮೀನಾರಾಯಣ, ರಾಮಚಂದ್ರ, ಕರುಣಾಕರ ಶೆಟ್ಟಿ, ಮಹಾಬಲೇಶ್ವರ ಭಟ್, ಪುಟ್ಟಪ್ಪ, ಟಿ.ಡಿ.ಗಣಪತಿ, ವೆಂಕಟರಮಣ ಭಟ್ ಸೇರಿದಂತೆ ಹಲವರು ಇದ್ದರು.

ಲಿಂಕ್ ಕ್ಲಿಕ್ ಮಾಡಿ, ಕೆಳಗಿರುವ ಸುದ್ದಿಗಳನ್ನು ಓದಿ

72418328 947023688992385 5894236130018066432 n.jpg? nc cat=109& nc oc=AQnkhXGrWCd6R5Iy jCoYDpAKPLoyWM8lNmtsY1kvRKuX8jGwM4 DAOjVD85QMEo2XM& nc ht=scontent.fblr1 3

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment