ತೀರ್ಥಹಳ್ಳಿ: ದಿಢೀರ್ ಬೆಂಕಿಗೆ ಬಸರಿ ಮರವೊಂದು (tree) ಆಹುತಿಯಾಗಿದೆ. ತೀರ್ಥಹಳ್ಳಿಯ ಕುಡುಮಲ್ಲಿಗೆ ಸಮೀಪ ರಾಷ್ಟ್ರೀಯ ಹೆದ್ದಾರಿ 169ರ ಪಕ್ಕದಲ್ಲಿದ್ದ ಮರದಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ.
ಇದನ್ನೂ ಓದಿ : ವಿದೇಶದಿಂದ ಹಣದ ನೆರವಿನ ಭರವಸೆ, ಶಿವಮೊಗ್ಗ ಜಿಲ್ಲೆಯ ಮಹಿಳೆಗೆ ಲಕ್ಷ ಲಕ್ಷ ವಂಚನೆ
ದಾರಿಯಲ್ಲಿ ಹೋಗುವವರು ಬೀಡಿ, ಸಿಗರೇಟು ಸೇದಿ ಎಸೆದಿರಬಹುದು ಅಥವಾ ಕಿಡಿಗೇಡಿಗಳು ಮರಕ್ಕೆ ಬೆಂಕಿ ಹಚ್ಚಿರಬಹುದು. ಬೇಸಿಗೆಯ ಬಿಸಿಲಿಗೆ ಒಣಗಿರುವ ತರಗೆಲೆಗಳಿಗೆ ಬೆಂಕಿ ತಗುಲಿ, ಅದು ಮರಕ್ಕೆ ವಿಸ್ತರಿಸಿದೆ ಎಂದು ಶಂಕಿಸಲಾಗಿದೆ. ಮರಕ್ಕೆ ಬೆಂಕಿ ಬಿದ್ದ ಪರಿಣಾಮ ಕೆಲ ಸಮಯ ರಸ್ತೆ ಸಂಚಾರ ವ್ಯತ್ಯಯವಾಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.

ಇದನ್ನೂ ಓದಿ









