ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಬಿಸಿಲಿನ ಝಳ ದಿನೇ ದಿನೆ ಹೆಚ್ಚಳವಾಗುತ್ತಿದೆ. ಉಷ್ಣಾಂಶ ಏರಿಕೆಯಾಗುತ್ತಿದ್ದು ಜನರು ಮನೆ ಒಳಗೂ ಇರಲಾಗದೆ, ಹೊರಗು ಬರಲಾಗದೆ ನಲುಗುವಂತಾಗಿದೆ (Weather).
ಇದನ್ನೂ ಓದಿ : ಸಿಗಂದೂರು ರಸ್ತೆಯ ಗೋಡೌನ್ನಲ್ಲಿ ಕಳ್ಳರ ಕರಾಮತ್ತು, ಏನೇನೆಲ್ಲ ಕದ್ದಿದ್ದಾರೆ?
ಜಿಲ್ಲೆಯಾದ್ಯಂತ ತಾಪಮಾನ ಏರಿಕೆಯಾಗಿದೆ. ಭಾರಿ ಬಿಸಿಲಿಗೆ ಜನ ಹೈರಾಣಾಗಿದ್ದಾರೆ. ಬೆಳಗ್ಗೆಯಿಂದಲೇ ಧಗೆ ಆರಂಭವಾಗುತ್ತದೆ. ಬಿಸಿಲೇರುತ್ತಿದ್ದಂತೆ ರಸ್ತೆಗಳು ಕಾದ ಕಾವಲಿಯಂತಾಗುತ್ತಿವೆ. ಸಂಜೆ ಸೂರ್ಯ ಮುಳುಗಿದರು ಸೆಕೆಯ ತೀವ್ರತೆ ಕಡಿಮೆ ಆಗುವುದಿಲ್ಲ. ರಾತ್ರಿಯು ಧಗೆ ಇರಲಿದೆ. ಇನ್ನು, ಇವತ್ತು ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕುಗಳಲ್ಲಿ ಇದ್ದ ತಾಪಮಾನಕ್ಕಿಂತಲು ಹೆಚ್ಚಿರುತ್ತದೆ ಎಂದು ಅಂದಾಜಿಸಲಾಗಿದೆ.
ಇವತ್ತು ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ?
| ತಾಲೂಕು | ಗರಿಷ್ಠ | ಕನಿಷ್ಠ |
| ಶಿವಮೊಗ್ಗ | 39 | 22 |
| ಭದ್ರಾವತಿ | 39 | 22 |
| ತೀರ್ಥಹಳ್ಳಿ | 35 | 21 |
| ಸಾಗರ | 33 | 23 |
| ಹೊಸನಗರ | 35 | 23 |
| ಸೊರಬ | 37 | 23 |
| ಶಿಕಾರಿಪುರ | 38 | 23 |






