ಶಿವಮೊಗ್ಗದಲ್ಲಿ ಮೆಡಿಕಲ್ ವಿದ್ಯಾರ್ಥಿ ನಿಗೂಢ ಸಾವು, ರೂಂನಲ್ಲಿದ್ದ ಹಾಸಿಗೆ ಧಗಧಗ, ಘಟನೆಗೇನು ಕಾರಣ ಗೊತ್ತಾ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 12 ನವೆಂಬರ್ 2019

ಶಿವಮೊಗ್ಗದಲ್ಲಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಪ್ರಕರಣದ ತನಿಖೆಗೆ  ದಾವಣಗೆರೆಯಿಂದ ವಿಶೇಷ ತಂಡವೊಂದು ಶಿವಮೊಗ್ಗಕ್ಕೆ ಆಗಮಿಸಿತ್ತು.

74468341 971442859883801 2167943192865931264 n.jpg? nc cat=100& nc eui2=AeHzgQ arr37lzOWffoii1QZpATXtH1Lw5G9cWoOX 3YtiQLiZGP 2kiaK8qEx62 FMHAS68bvaxwfGF84OtiVQmGTXi8bsLpAXRx9vC2 Ad9w& nc oc=AQnB913zSRG0B3Ty 0Gz22Wh mdtxX3bywe96zbMuA 53h1XeyhjvuCvaHY1X0oM99c& nc ht=scontent.fblr11 1

ಘಟನೆ ಏನಾಗಿದೆ? ಮೃತ ವಿದ್ಯಾರ್ಥಿ ಯಾರು?

ಸುಬ್ಬಯ್ಯ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿ ನಿತಿನ್ (23), ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಪುರಲೆಯ ಮೂರನೆ ಕ್ರಾಸ್’ನಲ್ಲಿರುವ ರೂಂನಲ್ಲಿ ಸೋಮವಾರ ಸಂಜೆ ಘಟನೆ ನಡೆದಿದೆ. ನಿತಿನ್ ರೂಂನಿಂದ ಹೊಗೆ ಬರುತ್ತಿರುವುದನ್ನು ಸ್ಥಳೀಯರು ಮತ್ತು ಸ್ನೇಹಿತರು ಗಮನಿಸಿದ್ದಾರೆ. ಕೊಠಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆತನನ್ನು ಸಮೀಪದ ಸುಬ್ಬಯ್ಯ ಆಸ್ಪತ್ರೆಗೆ ಕರೆದೊಯ್ದಾಗ, ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಪೊಲೀಸರಿಗೆ ಬೇರೆಯದ್ದೇ ಅನುಮಾನ

ಐರನ್ ಬಾಕ್ಸ್ ಶಾರ್ಟ್ ಸರ್ಕಿಟ್ ಆಗಿ ವಿದ್ಯುತ್ ಶಾಕ್’ನಿಂದ ನಿತಿನ್ ಸಾವನ್ನಪ್ಪಿರುವುದಾಗಿ ಆರಂಭದಲ್ಲಿ ಶಂಕೆ ವ್ಯಕ್ತಪಡಿಸಲಾಗಿತ್ತು. ರೂಂನಲ್ಲಿದ್ದ ಹಾಸಿಗೆ ಅರ್ಧ ಭಾಗ ಸುಟ್ಟು ಹೋಗಿತ್ತು. ಸ್ಥಳಕ್ಕೆ ತೆರಳಿದ್ದ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರಿಗೆ ಬೇರೆಯದ್ದೆ ಅನುಮಾನ ಮೂಡಿದೆ. ಈ ಹಿನ್ನೆಯಲ್ಲಿ ಪ್ರಕರಣದ ತನಿಖೆಗೆ ದಾವಣೆಗೆರೆಯಿಂದ ವಿಶೇಷ ತಂಡ ಕರೆಸಿಕೊಳ್ಳಲಾಗಿತ್ತು.

74480701 971442853217135 1349725620598210560 n.jpg? nc cat=102& nc eui2=AeGZZchGCwdK52b9RRNs8PwVojK R66mp56Wq92177rLhp4tFV4NPuTqR13rpBzvpeK XuHkVXEJPyR6Y2waKbsV83eTQDV cmaanvRY4rfF3g& nc oc=AQkhx4HkyeozMvKXVrpqs3Qz7goaXQGIBzr MkPTmkJ cCNTZRSF3WiVzOBD4moDCq8& nc ht=scontent.fblr11 1

ದಾವಣಗೆರೆಯಿಂದ ಸ್ಪೆಷಲ್ ಟೀಂ

ಪ್ರಕರಣದ ತನಿಖೆ ನಡೆಸಲು ವಿಧಿವಿಜ್ಞಾನ ಪ್ರಯೋಗಾಲಯದ ಸ್ಪೆಷಲ್ ಸೀನ್ ಆಫ್ ಕ್ರೈಂ ಯುನಿಟ್’ನ ಡಾ.ನಾಗರಾಜ್ ಮತ್ತು ಡಾ.ವಿನೋದ್ ಅವರ ನೇತೃತ್ವದ ತಂಡ ಶಿವಮೊಗ್ಗಕ್ಕೆ ಆಗಮಿಸಿದೆ. ಪ್ರಕರಣ ನಡೆದ ಸ್ಥಳ ಮತ್ತು ನಿತಿನ್ ಮೃತದೇಹದ ಪರಿಶೀಲನೆ ನಡೆಸಿದ್ದಾರೆ.

73395364 971442906550463 708376536746557440 n.jpg? nc cat=100& nc eui2=AeH4PY pRsYXybr4Gg1Ypo xbpPFDOfr8kp79f9xRENk rrPEIBs9fiqGwC SWrrBt eaCzbLT75bCx9g13noPaZfgHzn aUJ6mpJO2nu6w1 A& nc oc=AQl7ittTIsdWHYYzcY5ZqNk6dOOXTtj0q0LCXtHLug1z0W9F 23y3cugqJtJe2rwric& nc ht=scontent.fblr11 1

ಏನೆಲ್ಲ ಅನುಮಾನ ಮೂಡಿದೆ?

ಎಂಬಿಬಿಎಸ್ ಕೊನೆಯ ವರ್ಷದಲ್ಲಿ ಓದುತ್ತಿದ್ದ ನಿತಿನ್, ಇನ್ನೊಂದು ತಿಂಗಳು ಪೂರೈಸಿದ್ದರೆ ಪೂರ್ಣ ಪ್ರಮಾಣದ ಡಾಕ್ಟರ್ ಆಗುತ್ತಿದ್ದ. ‘ಓದಿನಲ್ಲಿ ಹೆಚ್ಚು ಆಸಕ್ತಿ ಇತ್ತು. ಚಟುವಟಿಕೆಯಿಂದ ಇದ್ದ ವಿದ್ಯಾರ್ಥಿ’ ಅನ್ನುತ್ತಾರೆ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಪ್ರಮುಖ ಆದಿಶೇಷ. ‘ಎಲ್ಲರೊಂದಿಗೆ ಚೆನ್ನಾಗಿ ಬೆರೆಯುತ್ತಿದ್ದ ನಿತಿನ್ ಇತ್ತೀಚೆಗೆ ಕೆಲವು ದಿನದಿಂದ ಡಲ್ ಆಗಿದ್ದ. ಆದರೆ ಅದಕ್ಕೆ ಕಾರಣ ಗೊತ್ತಿಲ್ಲ’ ಅನ್ನುತ್ತಾರೆ ಮೃತ ನಿತಿನ್ ಸ್ನೇಹಿತ ರಾಹುಲ್.

75278323 971442923217128 177235239968440320 n.jpg? nc cat=105& nc eui2=AeFEdgbQ0xT4iS0039UwQsKhUogS75taTaEhgQYYVBbqoOYIN8x M5d4Yd9wTpTfiuCiKVULZKz1JVdw9GBowxlQGd00JwDlSTLNX76hmqPJjw& nc oc=AQlZmOW mY01Qvgd6BxxmJsj4pl24ITurUU7vqygjRz 2QZ2ZUHW3QimzwBV DyMkr4& nc ht=scontent.fblr11 1

‘ಮೂರು ವರ್ಷದಿಂದ ನಮ್ಮ ಮನೆಯಲ್ಲಿ ಬಾಡಿಗೆಗಿದ್ದರು. ಒಳ್ಳೆಯ ಹುಡುಗ. ನಿನ್ನೆ ಸಂಜೆ ನಮ್ಮ ಮಗಳು ಮೇಲೆ ಹೋದಾಗ ರೂಂನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ ತಿಳಿಸಿದ್ದಳು. ಐರನ್ ಬಾಕ್ಸ್’ನಿಂದಾಗಿ ಆಗಿದ್ದು ಅನ್ನುತ್ತಿದ್ದಾರೆ. ಆದರೆ ಇನ್ನು ಏನು ಅಂತಾ ಗೊತ್ತಾಗಿಲ್ಲ’ ಅನ್ನುತ್ತಾರೆ ಮನೆ ಮಾಲೀಕರಾದ ಕಾತ್ಯಾಯಿನಿ.

74366871 971442933217127 3136960988201353216 n.jpg? nc cat=105& nc eui2=AeE XzRVPNO3VNGwCF2E7qGQvH8pwYhlnIuLa9aao3TsPBknGlPrn NVfJKzL8GnIg8qNyk2sDoyV5vNjjJhZ lUzNJQv3JBiFS rGPkMMXurw& nc oc=AQncqw6JFqmyH1t3ouZ2LBBaY8MDqvj17yXykak14u1AKQ3 qY4MTKb1OTwm2I 2ZNY& nc ht=scontent.fblr11 1

ಆದರೆ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಮೆಸ್ಕಾಂ ಶಿವಮೊಗ್ಗ ಇನ್ಸ್’ಪೆಕ್ಟರ್ ಸಿದ್ದಪ್ಪ ‘ರೂಂನಲ್ಲಿರುವ ಫ್ಯಾನು, ವಿದ್ಯುತ್ ದೀಪಗಳು ನಿರಂತರವಾಗಿ ಕೆಲಸ ಮಾಡುತ್ತಿವೆ. ಸ್ವಿಚ್ ಬೋರ್ಡ್ ಕೂಡ ಚೆನ್ನಾಗಿದೆ. ಐರನ್ ಬಾಕ್ಸ್’ ವಯರ್ ಸ್ವಲ್ಪ ಸುಟ್ಟಿದೆ. ಇದರ ಹೊರತು ಇದು ವಿದ್ಯುತ್’ನಿಂದ ಸಂಭವಿಸಿದ ಅವಘಡ ಅಲ್ಲ ಅನ್ನೋದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಉಳಿದದ್ದು ತನಿಖೆಯಾಗಬೇಕಿದೆ’ ಎಂದು ತಿಳಿಸಿದ್ದಾರೆ.

75375691 971442843217136 488623800607309824 n.jpg? nc cat=106& nc eui2=AeE6FzCo8Swkd4Y0jBMzk bpymqwCh47vCC319Pe kk9SjHVu3wGVT7 gOjAwzRFRrFlLC42KLp vYjKHfHKkg7ptqAb7rtSEOykGQHH NbEVA& nc oc=AQk7 UtrFxOmdve57o9yn1gJ3Y XoazqQCJd8zZfqsB95jNBa77bRjlL4h1MAVs3SPA& nc ht=scontent.fblr11 1

ಹಾಗಾದರೆ ಇದು ಆತ್ಮಹತ್ಯೆನಾ?

ಮತ್ತೊಂದೆಡೆ ಮೆಡಿಕಲ್ ವಿದ್ಯಾರ್ಥಿ ನಿತಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾನಾ ಅನ್ನುವ ಅನುಮಾನವು ಮೂಡಿದೆ. ಈ ಆಂಗಲ್’ನಿಂದಲು ತನಿಖೆ ನಡೆಸಲಾಗುತ್ತಿದೆ. ‘ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಚಾನ್ಸ್ ಇಲ್ಲ. ಅವನು ಎಂ.ಡಿ ಮಾಡಬೇಕು ಅಂತಾ ಇದ್ದ ವ್ಯಕ್ತಿ. ರೀಸರ್ಚ್ ಮಾಡಬೇಕು. ಭಗವದ್ಗೀತೆಯನ್ನು ಸೈನ್ಸ್’ನಲ್ಲಿ ಕನ್ವರ್ಟ್ ಮಾಡಿ, ಪುಸ್ತಕ ಬಿಡುಗಡೆ ಮಾಡಬೇಕು ಎಂದುಕೊಂಡಿದ್ದ. ಆತ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಹಿಂದಿನ ದಿನವು ನಾನು ಅವನೊಂದಿಗೆ ಮಾತನಾಡಿದ್ದೇನೆ’ ಅನ್ನುತ್ತಾರೆ ನಿತಿನ್ ತಂದೆ ಡಾ.ಚಿದಾನಂದ.

ತುಂಬಾ ನಿಗೂಢವಾಗಿದೆ ಸಾವು

ನಿತಿನ್ ಸಾವಿನ ಕುರಿತು ಆತನ ಸಂಬಂಧಿಗಳು ಕೂಡ ಶಂಕೆ ವ್ಯಕ್ತಪಡಿಸಿದ್ದಾರೆ. ‘ಸಾವು ತುಂಬಾನೆ ನಿಗೂಢವಾಗಿದೆ. ನಾವು ಯೋಚಿಸುವುದಕ್ಕು, ಇಲ್ಲಿ ಸಂಭವಿಸಿರುವುದಕ್ಕೂ ಸಂಬಂಧವೆ ಇಲ್ಲದಂತಾಗಿದೆ. ಸ್ನಾನ ಮಾಡಿ ಬರುವ ಹುಡುಗ ಎಲ್ಲ ಸ್ಪ್ರೇಗಳನ್ನು ಮುಂದಿಟ್ಟುಕೊಳ್ಳುವುದಿಲ್ಲ. ಇದು ಸೂಸೈಡ್ ಅಲ್ಲ, ಸಹಜ ಸಾವು ಅಲ್ಲ. ಬೇರೆ ಎನೋ ಅಗಿದೆ’ ಎಂದು ಅನುಮಾನ ವ್ಯಕ್ತಪಡಿಸುತ್ತಾರೆ ಸಹೋದರ ಸಂಬಂಧಿ ಮಂಜುನಾಥ.

Shimoga SP Shantharaj 1 1

‘ಸರಿಯಾದ ತನಿಖೆ ನಡೆಸಲಿದ್ದೇವೆ..’

‘ಪ್ರಕರಣ ಗಂಭೀರ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ತನಿಖೆಯನ್ನು ಗ್ರಾಮಾಂತರ ಠಾಣೆ ಇನ್ಸ್’ಪೆಕ್ಟರ್ ಅವರಿಗೆ ಸೂಚನೆ ನೀಡಿದ್ದೇನೆ. ಘಟನಾ ಸ್ಥಳದ ಪರಿಶೀಲನೆಗಾಗಿ ವಿವಿಧ ಇಲಾಖೆಯ ತಜ್ಞರ ತಂಡವನ್ನು ಸ್ಥಳಕ್ಕೆ ಕರೆಯಿಸಿಕೊಂಡಿದ್ದೆವು’ ಅನ್ನುತ್ತಾರೆ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment