ಶಿವಮೊಗ್ಗ ಲೈವ್
ಭದ್ರಾವತಿ: ತಾಲ್ಲೂಕಿನ ವಿವಿಧೆಡೆ ಇವತ್ತು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಭದ್ರಾವತಿ ನಗರದ ಸೆ.11 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ಹೊಸಮನೆ, ತಮ್ಮಣ್ಣ ಕಾಲೋನಿ ಹಾಗೂ ಕುವೆಂಪು ನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಇನ್ನು, ಗ್ರಾಮಾಂತರ ವ್ಯಾಪ್ತಿಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಬಿಆರ್ಪಿ, ಕುವೆಂಪು ವಿವಿ, ಸಿಂಗನಮನೆ, ಶಾಂತಿನಗರ, ಶಂಕರಘಟ್ಟ, ನೆಲ್ಲಿಸರ, ಮಾಳೇನಹಳ್ಳಿ, ಗೋಣೇಬೀಡು, ತಮಡಿಹಳ್ಳಿ, ಮಲ್ಲಿಗೆನಹಳ್ಳಿ, ವದಿಯೂರು, ಹೆಚ್.ಕೆ.ಜಂಕ್ಷನ್, ಹುಣಸೇಕಟ್ಟೆ, ರಂಗನಾಥಪುರ ಹಾಗೂ ಗೌಳಿಗೆರೆ ಪ್ರದೇಶದಲ್ಲಿ ಕರೆಂಟ್ ಇರಲ್ಲ.
