ಶಿವಮೊಗ್ಗ ಲೈವ್.ಕಾಂ | SAGARA | 15 ಜನವರಿ 2020
ತಾಳಗುಪ್ಪಕ್ಕೆ ಮಂಜೂರಾಗಿರುವ ರೈಲ್ವೆ ಟರ್ಮಿನಲ್ ಅನ್ನು ಏಕಾಏಕಿ ಶಿವಮೊಗ್ಗದ ಕೋಟೆಗಂಗೂರಿಗೆ ಸ್ಥಳಾಂತರಿಸಿರುವ ಸರ್ಕಾರದ ಕ್ರಮ ಖಂಡಿಸಿ ತಾಲೂಕು ಕಚೇರಿ ಆವರಣದಲ್ಲಿ ಮಲೆನಾಡು ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳು ಉಪವಾಸ ಸತ್ಯಾಗ್ರಹ ನಡೆಸಿದರು.
ಸಾಹಿತಿ ಡಾ. ನಾ.ಡಿಸೋಜ ಮಾತನಾಡಿ, ರೈಲ್ವೆ ಕೋಚಿಂಗ್ ಟರ್ಮಿನಲ್ ಅನ್ನು ಕೋಟಿಗಂಗೂರಿಗೆ ಸ್ಥಳಾಂತರಗೊಳ್ಳಲು ಕಾರಣ ಏನು? ಈ ಬಗ್ಗೆ ಸಾರ್ವಜನಿಕರೆದುರು ಸಾಗರ ಹಾಗೂ ಸೊರಬ ಶಾಸಕರು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.
ಯೋಜನೆಯೊಂದನ್ನು ಮಂಜೂರು ಮಾಡಿ ಅದನ್ನು ಕಿತ್ತುಕೊಳ್ಳುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ದ್ರೋಹ. ಯಾವುದೇ ಕಾರಣಕ್ಕೂ ಟರ್ಮಿನಲ್ ಕೋಟಿಗಂದೂರಿಗೆ ಸ್ಥಳಾಂತರಿಸಬಾರದು. ತಾಳಗುಪ್ಪದಲ್ಲಿಯೇ ಸ್ಥಾಪಿಸುವಂತೆ ಎರಡೂ ಕ್ಷೇತ್ರದ ಶಾಸಕರು ಸಿಎಂ ಹಾಗೂ ಸಂಸದರ ಮೇಲೆ ಒತ್ತಡ ತರಬೇಕು ಎಂದು ಸಾಹಿತಿ ನಾ.ಡಿಸೋಜ ಅವರು ಒತ್ತಾಯಿಸಿದರು.
ಎಚ್.ಬಿ.ರಾಘವೇಂದ್ರ ಮಾತನಾಡಿ, ಶಾಸಕರಾದ ಹರತಾಳು ಹಾಲಪ್ಪ ಮತ್ತು ಕುಮಾರ್ ಬಂಗಾರಪ್ಪ ಅವರು ಮತ ನೀಡಿದ ಜನರಿಗೆ ಅನ್ಯಾಯ ಮಾಡುತ್ತಿರುವುದು ದುರಾದೃಷ್ಟಕರ. ಎರಡೂ ಕ್ಷೇತ್ರದ ಮತದಾರರು ನಿಮಗೆ ಮತ ನೀಡದಿದ್ದರೆ ನೀವು ಹೇಗೆ ಶಾಸಕರಾಗುತ್ತಿದ್ದೀರಿ? ಜನರ ಋಣ ತೀರಿಸುವ ಹೊಣೆ ನಿಮ್ಮ ಮೇಲಿದೆ ಎಂಬುದನ್ನು ಮರೆಯಬೇಡಿ ಎಂದರು.
ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ದೂಗೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್, ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ತಿ.ನ.ಶ್ರೀನಿವಾಸ್, ಜಿಪಂ ಮಾಜಿ ಸದಸ್ಯ ರವಿ ಕುಗ್ವೆ, ಲೇಖಕ ವಿಲಿಯಂ, ಸುಧಾಕರ ಕುಗ್ವೆ, ಶಿವಾನಂದ ಕುಗ್ವೆ, ವಾಮದೇವ ಗೌಡ, ಕನ್ನಪ್ಪ ಬೆಳಲಮಕ್ಕಿ, ಆ.ರಾ.ಶ್ರೀನಿವಾಸ್, ಕನ್ನಪ್ಪ ಮುಳಕೇರಿ, ತುಕಾರಾಮ್ ಸೇರಿದಂತೆ ಹಲವರಿದ್ದರು.
RECENT NEWS | CLICK HERE
- ಶಿವಮೊಗ್ಗದಲ್ಲಿ ಇವತ್ತು ಎಷ್ಟಿರುತ್ತೆ ತಾಪಮಾನ? ಇಲ್ಲಿದೆ ಇಡೀ ದಿನದ ಹವಾಮಾನ ವರದಿ
- ಶಿವಮೊಗ್ಗದಲ್ಲಿ ಪ್ರಜ್ವಲ್ ಪೆನ್ಡ್ರೈವ್ ಕೇಸ್ ವಿರುದ್ಧ ಅಕ್ರೋಶ, ಡಿಸಿ ಮೂಲಕ ಸಿಎಂಗೆ ಪತ್ರ
- ಶಿವಮೊಗ್ಗದಲ್ಲಿ ಪ್ರದೀಪ್ ಈಶ್ವರ್, ಕ್ಷೇತ್ರಕ್ಕೆ ರಾಘವೇಂದ್ರ ಕೊಡುಗೆ ಬಗ್ಗೆ ಸವಾಲು, ಅಣ್ಣಾಮಲೈಗೆ ಓಪನ್ ಚಾಲೆಂಜ್
- ಲೋಕಸಭೆ ಚುನಾವಣೆ ಮಧ್ಯೆ ಶಿವಮೊಗ್ಗದಲ್ಲಿ ಮತ್ತೊಂದು ಚುನಾವಣೆಗೆ ಸಿದ್ಧತೆ, ಮೇ 9ಕ್ಕೆ ಅಧಿಸೂಚನೆ
- ಅಡಿಕೆ ಧಾರಣೆ | 4 ಮೇ 2024 | ಇವತ್ತು ಯಾವ್ಯಾವ ಮಾರುಕಟ್ಟೆಗಳಲ್ಲಿ ಎಷ್ಟಿದೆ ಅಡಿಕೆ ರೇಟ್?
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]