SHIVAMOGGA LIVE NEWS | 14 DECEMBER 2022
ಸಾಗರ : ತಾಲೂಕಿನ ವಿವಿಧೆಡೆ ಕಾಡೆಮ್ಮೆ ಹಿಂಡು (A herd of bison) ಕಾಣಿಸಿಕೊಂಡು ರೈತರಲ್ಲಿ ಆತಂಕ ಮೂಡಿಸಿವೆ. ಭತ್ತದ ಗದ್ದೆಗೆ ನುಗ್ಗಿ ಬೆಳೆ ಹಾನಿ ಉಂಟು ಮಾಡುತ್ತಿವೆ.
ಕಲ್ಲುಕೊಪ್ಪ ಭಾಗದಲ್ಲಿ ಅರಣ್ಯದಲ್ಲಿ 15ಕ್ಕೂ ಹೆಚ್ಚು ಕಾಡು ಕೋಣಗಳು (A herd of bison) ಕಾಣಿಸಿಕೊಂಡಿವೆ. ಅವುಗಳಲ್ಲಿ ಕೆಲವು ಮರಿಗಳಿವೆ. ಇವುಗಳಲ್ಲಿ ಕೆಲವು ಮರಿಗಳು ಇದ್ದಾವೆ. ಕಾಡೆಮ್ಮೆ ಹಿಂಡು ಉಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಜಮೀನಿಗೆ ನುಗ್ಗಿ ಭತ್ತದ ಬೆಳೆ ಹಾನಿ ಉಂಟು ಮಾಡಿವೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಮುಗ್ಗಲು ಹಿಡಿದ ಅಡಕೆ, ಮುಳುಗಿದ ಭತ್ತದ ಗದ್ದೆ, ತಾಲೂಕುವಾರು ನಡೆಯುತ್ತಿದೆ ಸಮೀಕ್ಷೆ
ಅರಣ್ಯ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ಕಾಡೆಮ್ಮೆ ಹಿಂಡನ್ನು ಕಾಡಿಗೆ ಅಟ್ಟಿದ್ದರು. ಕೆಲವೆ ದಿನದಲ್ಲಿ ಪುನಃ ಪ್ರತ್ಯಕ್ಷವಾಗಿರುವ ಕಾಡೆಮ್ಮೆಗಳು, ಜಮೀನಿಗೆ ದಾಳಿ ಮಾಡುತ್ತಿವೆ.